ತೆಂಗು ಬೆಳೆಗಾರರಿಂದ ಬೆಂಬಲ ಬೆಲೆ ನೀಡಿ ತೆಂಗು ಖರೀದಿಸಲು ಸರ್ಕಾರಕ್ಕೆ ಪ್ರಸ್ತಾವನೆ : ಗೀತಾ ಹುಡೇದ್

ಚಾಮರಾಜನಗರ: ತೆಂಗು ಬೆಳೆಗಾರರಿಗೆ ಪ್ರೋತ್ಸಾಹ ನೀಡಲು ಬೆಲೆ ಕುಸಿತದ ಹಿನ್ನೆಲೆಯಲ್ಲಿ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೆಂಗು ಖರೀದಿ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ತಿಳಿಸಿದರು.
ನಗರದ ಹೊರ ವಲಯದಲ್ಲಿರುವ ಕಾಳನಹುಂಡಿ ರಸ್ತೆಯ ಮುಣಚನಹಳ್ಳಿ ಯಲ್ಲಿ ತೆಂಗು ಸಂಸ್ಕರಣ ಘಟಕದ ಅವರಣದಲ್ಲಿ ಚಾಮರಾಜನಗರ ತಾಲೂಕು ತೆಂಗು ಬೆಳೆಗಾರರ ಸಂಸ್ಕರಣ ಮತ್ತು ಮಾರಾಟ ಸಹಕಾರ ಸಂಘದ ವತಿಯಿಂದ ನಡೆದ ವಿಶ್ವ ತೆಂಗು ದಿನಾಚರಣೆ ಕಾರ್ಯಕ್ರಮವನ್ನು ಉದ್ಗಾಟಿಸಿ ಅವರು ಮಾತನಾಡಿದರು.

ಚಾಮರಾಜನಗರ ಜಿಲ್ಲೆಯಲ್ಲಿ ತೆಂಗು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಚಾಮರಾಜನಗ ತಾಲೂಕು ವ್ಯಾಪ್ತಿಯಲ್ಲಿ ಬೆಳೆಗಾರರು, ಮಾರಾಟಗಾರರು ಸಹಕಾರ ಸಂಘವನ್ನು ಸ್ಥಾಪನೆ ಮಾಡಿ, ಹಲವಾರು ವರ್ಷಗಳಿಂದ ತೆಂಗು ಸಂಸ್ಕರಣ ಘಟಕವನ್ನು ಆರಂಭಿಸಿ, ತೆಂಗು ಬೆಳೆಗಾರರ ಹಿತರಕ್ಷಣೆಗೆ ಸಹಕಾರ ಸಂಘ ಶ್ರಮಿಸುತ್ತಿದೆ. ಇಂಗು, ತೆಂಗು ಅಡಿಗೆಯಲ್ಲಿ ಬಹಳ ಮುಖ್ಯವಾದ ಪ್ರಮುಖ್ಯತೆಯನ್ನು ಹೊಂದಿದೆ. ತೆಂಗನ್ನು ಕಲ್ಪವೃಕ್ಷ ಎಂದು ಕರೆಯುವ ಜೊತೆಗೆ ಈ ಮರವು ಎಲ್ಲಾ ಭಾಗವು ಉಪಯೋಗಕ್ಕೆ ಬರುತ್ತದೆ. ಅಲ್ಲದೇ ತೆಂಗು ಆರೋಗ್ಯಕರವಾದ ವಸ್ತುವಾಗಿದೆ ಎಂದರು.

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಿವಪ್ರಸಾಧ್ ಮಾತನಾಡಿ, ರಾಜ್ಯದಲ್ಲಿ ೩೦ ಸಾವಿರ ಹೆಕ್ಟರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಅದೇ ರೀತಿ ಚಾಮರಾಜನಗರ ಜಿಲ್ಲೆಯಲ್ಲಿ ೬ ಸಾವಿರ ಹೆಕ್ಟರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ. ಗುಣಮಟ್ಟದ ತೆಂಗು ಬೆಳೆಯುವಲ್ಲಿ ಚಾಮರಾಜನಗರ ಜಿಲ್ಲೆಯು ಸಹ ಪ್ರಸಿದ್ದಿಯಾಗಿದೆ. ಇಲಾಖೆಯಿಂದಲು ತೆಂಗು ಬೆಳೆಗಾರರಿಗೆ ಪ್ರೋತ್ಸಾಹ ಹಾಗೂ ಸಹಾಯಧನವನ್ನು ನೀಡಲಾಗುತ್ತಿದೆ. ತೆಂಗಿನ ಮರ ಹತ್ತುವವರಿಗೆ ಕೇವಲ ೯೫ ರೂ. ನಲ್ಲಿ ವಿಮೆ ಮಾಡಿಸಲಾಗುತ್ತದೆ. ಅಪಘಾತ ಪರಿಹಾರ ನಿಧಿಯಾಗಿ ೫ ಲಕ್ಷದ ವರೆಗೆ ಪರಿಹಾರ ದೊರೆಯಲಿದೆ. ಈ ಪ್ರಯೋಜವನ್ನು ಇಲಾಖೆಯ ಮುಲಕ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಕೆರೆಗೆ ನೀರು ತುಂಬಿಸುವ ಹೋರಾಟ ಸಮಿತಿಯ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ, ತೆಂಗು ಭೇಸಾಯದ ಬಗ್ಗೆ ಮಾಹಿತಿ ನೀಡಿದರು. ಹೋಮಿಯೋಪತಿ ವೈದ್ಯ ಡಾ. ಗುರುಕಿರಣ ಅವರು ತೆಂಗು ಉತ್ಪನ್ನಗಳಿಂದ ಆರೋಗ್ಯ ಸುಧಾರಣೆ ಕುರಿತು ಮಾಹಿತಿ ನೀಡಿದರು.

ಸಂಘದ ಅಧ್ಯಕ್ಷ ಎ.ಎಂ. ಮಹೇಶ್ ಪ್ರಭು ಅಧ್ಯಕ್ಷತೆ ವಹಿಸಿ ಮಾತನಾಡಿ, ತೆಂಗಿನಿಂದ ೧೩೧ ಉಪ ಉತ್ಪನ್ನಗಳನ್ನು ತಯಾರು ಮಾಡಲಾಗುತ್ತಿದೆ. ತೆಂಗು ಎಲ್ಲದಕ್ಕು ಸೂಕ್ತವಾಗಿದೆ. ವಿಶ್ವ ತೆಂಗು ದಿನಾಚರಣೆಯ ಸಂದರ್ಭದಲ್ಲಿ ತೆಂಗು ಬೆಳೆಗಾರರರಾದ ನಾವೆಲ್ಲರು ತೆಂಗಿಗೆ ಮಾರುಕಟ್ಟೆ ಕುಸಿತವಾಗದಂತೆ ನೋಡಿಕೊಳ್ಲಬೇಕಾಗಿದೆ. ಕುಸಿತ ಕಂಡ ಸಂದರ್ಭಗಳಲ್ಲಿ ಸರ್ಕಾರದ ಗಮನ ಸೆಳೆದು, ಬೆಂಬಲ ಬೆಲೆಯನ್ನು ನೀಡಿ, ಖರೀದಿ ಕೇಂದ್ರಗಳನ್ನು ತೆರೆದು ತೆಂಗು ಖರೀದಿಗೆ ಒತ್ತಾಯ ಹಾಕಭೇಕಾಗಿದೆ. ಜೊತೆಗೆ ಪರಿಸರ ಸಂರಕ್ಷಣೆಯನ್ನು ಮಾಡಬೇಕಾಗಿದೆ. ಪ್ರತಿಯೊಬ್ಬ ರೈತರು ಮರಗಳನ್ನು ಕಡಿಯುವ ಜೊತೆಗೆ ಅದಕ್ಕಿಂತ ಹೆಚ್ಚಿನ ಸಸಿಗಳನ್ನು ಬೆಳೆಸಲು ಮುಂದಾಗಬೇಕು. ನಮ್ಮ ಪರಿಸರ ರಕ್ಷಣೆ ನಮ್ಮ ಕೈಯಲ್ಲಿದೆ ಎಂದರು.

ಪರಿಸರ ವಾದಿ ವೆಂಕಟೇಶ್ ಅವರು ತೆಂಗು ಸಂಸ್ಕರಣ ಘಟಕದ ಸುತ್ತಲು ತೆಂಗಿನ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಘಟಕಕ್ಕೆ ಹೆಚ್ಚು ತೆಂಗಿನ ಕಾಯಿ ಪೊರೈಕೆ ಮಾಡಿದ ಎಚ್.ಎ. ಶ್ರೀಪತಿ, ರೇಚಣ್ಣ, ಎಂ.ಎಸ್. ನಾಗರತ್ನ ರಾಜೇಶ್, ಎಸ್. ಸಿದ್ದವೀರಪ್ಪ, ಆರ್. ಶಿವಾನಂದ ಅವರನ್ನು ತೆಂಗು ದಿನಾಚರಣೆ ಅಂಗವಾಗಿ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ, ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಪುಟ್ಟರಸು, ನಿರ್ದೇಶಕರಾದ ಜಯಶ್ರೀ, ಪಾರ್ವತಮ್ಮ, ಜಗದೀಶ್ ಆರಾಧ್ಯ, ಸಿದ್ದರಾಜು, ಎಚ್.ಎನ್. ವೆಂಕಟೇಶ್, ಎಚ್.ಎಂ. ಬಸವಣ್ಣ, ಬಿ. ಸೋಮಶೇಖರ್, ಎಸ್. ಬಸವರಾಜು, ಪಿ.ಎನ್. ಚಿನ್ನಸ್ವಾಮಿ ಗೌಂಡರ್ , ರಾಜ್ಯ ರೈತ ಸಂಘದ ಖಾಯಂ ಸದಸ್ಯರಾದ ಹೆಗ್ಗವಾಡಿಪುರ ಮಹದೇವಸ್ವಾಮಿ, ಮ್ಯಾನೇಜರ್ ನಾಗರಾಜು, ಲೆಕ್ಕಾಧಿಕಾರಿ ಶಾಂತಮಲ್ಲಪ್ಪ ಹಾಗು ಸದಸ್ಯರು ಇದ್ದರು.

Leave a Reply

Your email address will not be published. Required fields are marked *