ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರುಗೆ ವಿರಾಟ್ಶಿವು ಆಗ್ರಹ
ಚಾಮರಾಜನಗರ: ನಂಜನಗೂಡಿನಲ್ಲಿ ನಂಜುಂಡೇಶ್ವರ ಉತ್ಸವಮೂರ್ತಿಗೆ ಎಂಜಲು ನೀರು ಎರಚಿಸಿರುವ ಕಿಡಿಗೇಡಿಗಳನ್ನು ಬಂಧಿಸಿ, ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಭಗತ್ ಯುವಸೇನೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರಿ ಉದ್ಯಾನವನದಲ್ಲಿ ಮುಂಭಾಗದಲ್ಲಿ ಭಗತ್ ಯುವಸೇನೆಯ ಮುಖಂಡ ವಿರಾಟ್ಶಿವು ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಭುವನೇಶ್ವರಿ ವೃತ್ತಕ್ಕೆ ತೆರಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರ, ಮೈಸೂರು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರ, ಗೃಹ ಸಚಿವರು, ಮುಜುರಾಯಿ ಇಲಾಖೆ, ಸ್ಥಳೀಯ ಶಾಸಕರು ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ವಿರಾಟ್ಶಿವು ಮಾತನಾಡಿ, ದಕ್ಷಿಣಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ನಂಜುಂಡೇಶ್ವರ ಹಿಂದೂಗಳ ಅಸ್ಮಿತೆಯಾಗಿರುವ ಉತ್ಸವ ಮೂರ್ತಿಗೆ ಅಪವಿತ್ರ ನೀರನ್ನು ಎರಚಿರುವುದು ಹಿಂದುಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಘಟನೆ ನಡೆದು ನಾಲ್ಕೈದು ದಿನಗಳು ಆಗಿದ್ದರೂ ಕೂಡ ಸರ್ಕಾರ ಯಾವುದೇ ಕ್ರಮಕೈಗೊಳ್ಳದೆ ಇರುವುದು ಹಿಂದೂಗಳಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ. ಆಗಾಗಿ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ, ರಾಜ್ಯದಿಂದ ಗಡಿಪಾರು ಮಾಡಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬುಲೆಟ್ ಚಂದ್ರು, ಪ್ರವೀಣ್, ಫೃಥ್ವಿ, ಟಗರುಶಿವ ಸಿ.ವಿ.ಮಣಿಕಂಠ, ರಾಘವೇಂದ್ರ, ಪ್ರಸನ್ನ, ಹರೀಶ್, ರಾಜೇಂದ್ರ, ಮಂಜುನಾಥ್, ಮನು, ಟಗರು ಶಿವು, ರಮೇಶ್, ನಾಗೇಂದ್ರ, ರವಿಹೇಮಂತ್, ಹಿಂದೂಸ್ತಾನ್ ನಾಗಚೇತನ್, ಪುನೀತ್, ಅಭಿ ,ಪ್ರಮೋದ್ ಹರ್ಷದ್ ಗೌಡ, ಅಶ್ವಿನ್, ಸಂತು ಇತರರು ಭಾಗವಹಿಸಿದ್ದರು.