ಚಾಮರಾಜನಗರ: ದಲಿತಸಂಘರ್ಷ ಸಮಿತಿ(ಡಿ.ಜಿ.ಸಾಗರ್ ಬಣ) ದ ವತಿಯಿಂದ ನಗರದಲ್ಲಿ ಭೀಮಕೊರೆಗಾಂವ್ ವಿಜಯೋತ್ಸವ ಆಚರಿಸಲಾಯಿತು.
ನಗರದ ಭೀಮರಾವ್ ಹೆಬ್ಬಾಗಿಲಿನಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡಿದ ಕಾರ್ಯಕರ್ತರು, ಪದಾಧಿಕಾರಿಗಳು ಕೊರೆಗಾಂವ್ ವಿಜಯೋತ್ಸವದ ಹಿನ್ನೆಲೆಯಲ್ಲಿ ವಿಜಯಘೋಷಗಳನ್ನು ಕೂಗಿದರು.
ಇದೇವೇಳೆ ದಸಂಸ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ ಮಾತನಾಡಿ, 18 ನೇ ಶತಮಾನದಲ್ಲಿ ಬೇರೂರಿದ್ದ ಜಾತೀಯತೆ, ಅಸಮಾನತೆ ವಿರುದ್ದ ಕೊರೆಗಾಂವ್ ಬಳಿಯ ಭೀಮಾತೀರದಲ್ಲಿ 30 ಸಾವಿರ ಸೈನಿಕರಿದ್ದ ಪೇಶ್ವೆಗಳ ವಿರುದ್ದ 500 ಮಂದಿ ಮಹಾರ್ ಸೈನಿಕರು ಯುದ್ದ ಮಾಡಿ, ಗೆಲುವು ಸಾಧಿಸಿದ ದಿನವನ್ನೇ ಕೊರೆಗಾಂವ್ ವಿಜಯೋತ್ಸವವಾಗಿ ಆಚರಿಸಲಾಗುತ್ತಿದೆ, 12 ಗಂಟೆಗಳ ಹೋರಾಟದಲ್ಲಿ 22 ಮಂದಿ ಹುತಾತ್ಮರಾದರು.
ಅಂಬೇಡ್ಕರ್ ಅವರು ಈ ಯುದ್ದವನ್ನು ಸ್ವದೇಶಿ ಗುಲಾಮಗಿರಿ ವಿರುದ್ದ ಸ್ವಾಭಿಮಾನದ ಯುದ್ದ ಎಂದು ಚರಿತ್ರೆಯಲ್ಲಿ ದಾಖಲಿಸಿದ್ದಾರೆ ಎಂದರು.
ಕೊರೆಗಾಂವ್ ನಲ್ಲಿ ವಿಜಯಸಾಧಿಸಿದ ನೆನಪಿಗಾಗಿ ಶಿರೂರುಬಳಿಯ ಕೊರೆಗಾಂವ್ ನಲ್ಲಿ ಅಡಿಗಲ್ಲು ಹಾಕಲಾಯಿತು, ಈಗಲೂ ಅದನ್ನು ಮಹಾನ್ ಸ್ತಂಭ, ವೀರಸ್ತಂಭ, ಸ್ಮರಣಸ್ತಂಭ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ ಎಂದರು.
ಇದೇ ವೇಳೆ ಭಾಗವಹಿಸಿದ್ದವರಿಗೆ ಸಿಹಿವಿತರಣೆ ಮಾಡಿದರು. ಜಿಲ್ಲಾ ಸಂಚಾಲಕ ರಂಗಸ್ವಾಮಿ,ಖಜಾಂಚಿ ರವಿಕುಮಾರ್, ಉಮೇಶ್,ಮಂಜೇಶ್, ಯ,ಮಹದೇವಯ್ಯ ಗಾಡಿಶಿವಣ್ಣ, ಮಲ್ಲಿಕಾರ್ಜುನ್, ಆಟೋಉಮೇಶ್ ಉಮೇಶ್ ಕುಮಾರ್,ಶಿವಕುಮಾರ್, ಸಂಘದ ಸದಸ್ಯರು ಹಾಗೂ ಇತರರು ಹಾಜರಿದ್ದರು.