ಚಾಮರಾಜನಗರ: ಚಾಮರಾಜನಗರ ಪಟ್ಟಣದಲ್ಲಿ ನಿತಂತರ ಮಳೆ ಹಿನ್ನಲೆಯಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವಂತೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಭಾನುವಾರ ಬೆಳಿಗ್ಗೆ ವೇಳೆ ನಗರ ಸಂಚಾರ ಕೈಗೊಂಡ ಶಾಸಕರು ನಗರಸಭೆ ಅಧಿಕಾರಿಗಳ ಜೊತೆ ಶ್ರೀ ಚಾಮರಾಜೇಶ್ವರ ಉದ್ಯಾನವನಕ್ಕೆ ಭೇಟಿ ನೀಡಿ ನೈರ್ಮಲ್ಯ ಪರಿಶೀಲಿಸಿ ಉದ್ಯಾನವನಕ್ಕೆ ದೀಪ ಅಳವಡಿಸಿ,ತುಕ್ಕು ಹಿಡಿದಿರುವ ಡ್ರಿಲ್ ಗಳಿಗೆ ಬಣ್ಣ ಲೇಪಿಸುವಂತೆ ತಿಳಿಸಿದರು.
ನಂತರ ಡೀವೀಯೇಷನ್ ರಸ್ತೆ, ಬಿ.ರಾಚಯ್ಯ ಜೋಡಿರಸ್ತೆಯ ಇಕ್ಕೆಲಗಳಲ್ಲಿ ಹಾಗೂ ಡಿಸಿ ಕಚೇರಿ ಮುಂಭಾಗದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮವಹಿಸುವಂತೆ ನಿರ್ದೇಶನ ನೀಡಿದರು.

ಹೌಸಿಂಗ್ ಬೋರ್ಡ್ ಸಾರ್ವಜನಿಕ ಉದ್ಯಾನವನದ ಸ್ವಚ್ಛತೆ ಪರಿಶೀಲಿಸಿ, ಹಾಳಾಗಿರುವ ಕುಳಿತುಕೊಳ್ಳುವ ಚಪ್ಪಡಿ ಕಲ್ಲು ದುರಸ್ತಿಪಡಿಸಿ,ಡ್ರಿಲ್ಗಳಿಗೆ ಬಣ್ಣ ಬಳಿಯುವಂತೆ ತಿಳಿಸಿ, ರಸ್ತೆ, ಚರಂಡಿಗಳಲ್ಲಿ ಮಳೆ ನೀರು ನಿಲ್ಲದೆ ಸರಾಗವಾಗಿ ಹೋಗುವಂತೆ ತುರ್ತು ಕ್ರಮವಹಿಸುವಂತೆ ಖುದ್ದು ಭೇಟಿ ನೀಡಿ ಶಾಸಕರು ಅಧಿಕಾರಿಗಳಿಗೆ ಸಚಿಸಿದರು.
ನಗರಸಭೆ ಅಧಿಕಾರಿಗಳು ಉದ್ಯಾನವನಗಳಿಗೆ ಭೇಟಿ ನೀಡಿ ಗಿಡಗಳನ್ನು ಪೋಷಿಸಿ ಪರಿಸರ ಸಂರಕ್ಷಿಸಬೇಕು, ರಸ್ತೆ, ಚರಂಡಿಗಳಲ್ಲಿ ನಿಲ್ಲುವ ಜಾಗಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಿ ಆಗಾಗ್ಗೆ ಭೇಟಿ ನೀಡಿ ನಗರದ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಸಾರ್ವಜನಿಕರ ಸಹಕಾರದೊಂದಿಗೆ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು.
ನಗರಸಭಾ ಆಯುಕ್ತ ರಾಮದಾಸ್ ಆರೋಗ್ಯಧಿಕಾರಿ ಮಂಜು, ಶ್ರೀನಿವಾಸ್ಗೌಡ, ಕೆ,ಎಂ ನಾಗರಾಜು ಸೇರಿದಂತೆ ಇತರರು ಹಾಜರಿದ್ದರು.