ಪಟಾಕಿ ತ್ಯಜಿಸಿ ದೀಪಾವಳಿ ಹಬ್ಬ ಆಚರಿಸಿ, ಪರಿಸರ ಸಂರಕ್ಷಣೆ ಮಾಡೋಣ : ಎಸಿಡಿ ಗೀತಾ ಹುಡೇದಾ

ರೋಟರಿ, ರೋಟರಿ ಸಿಲ್ಕ್‍ಸಿಟಿಯಿಂದ ಜಾಗೃತಿ ಅಭಿಯಾನ
ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು; ಪ್ರತಿಜ್ಞಾ ವಿಧಿ ಬೋಧನೆ

ಚಾಮರಾಜನಗರ: ದೀಪಾವಳಿ ಹಬ್ಬವನ್ನು ದೀಪಗಳನ್ನು ಹಚ್ಚಿ ಕತ್ತಲಿನಿಂದ ಬೆಳಕಿನ ಜ್ಞಾನದ ಕಡೆಗೆ ಎಲ್ಲರು ಹೋಗೋಣ. ಪರಿಸರ ಮತ್ತು ಮನುಷ್ಯನ ಮೇಲೆ ದುಷ್ಪರಿಣಾಮ ಬೀರುವ ಪಟಾಕಿಗಳನ್ನು ತ್ಯಜಿಸೋಣ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಹುಡೇದಾ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನ ಮುಂಭಾಗದಿಂದ ರೋಟರಿ ಸಂಸ್ಥೆ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರೋಟರಿ ಜಿಲ್ಲೆ -3181ರ ವಲಯ -9ರ ಎಲ್ಲಾ ರೋಟರಿ ಸಂಸ್ಥೆಗಳು, ಮೈಸೂರು ಸೈನ್ಸ್ ಫೌಂಡೇಶನ್ ಇವರ ಸಹಯೋಗದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ಆಗುವ ದುಷ್ಪರಿಣಾಮಗಳು ಹಾಗೂ ಪರಿಸರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಚಾರ ವಾಹನಕ್ಕೆ ಚಾಲನೆ ನೀಡಿ, ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚಿ ಅವರು ಮಾತನಾಡಿದರು.

ದೀಪಾವಳಿ ಹಾಗೂ ಇನ್ಯಾವುದೇ ಹಬ್ಬಗಳ ಆಚರಣೆ ನೆಪದಲ್ಲಿ ಪರಿಸರವನ್ನು ಹಾಳುವುದು ಮಾಡುವುದು ಸರಿಯಲ್ಲ. ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಗಾಳಿ, ಬೆಳಕು ಹಾಗೂ ಹಸಿರು ಪರಿಸರವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ದೀಪಾವಳಿ ಹಬ್ಬದಲ್ಲಿ ಸಿಡಿಸುವ ಪಟಾಕಿಯಿಂದ ಬಹಳಷ್ಟು ದುಷ್ಪರಿಣಾಮಗಳಾಗುತ್ತಿದೆ. ಪರಿಸರದ, ಕಾಡುಪ್ರಾಣಿಗಳು, ಸಾಕು ಪ್ರಾಣಿಗಳು ಹಾಗು ಪಟಾಕಿ ಹೊಡೆಯುವಾಗ ನಡೆಯುವ ದುರಂತಗಳು, ಮತ್ತು ಹಿರಿಯ ನಾಗರೀಕರಿಗೆ ಹೆಚ್ಚಿನ ಶಬ್ದದಿಂದ ತೊಂದರೆಯಾಗುತ್ತದೆ. ಅಲ್ಲದೇ ಪಟಾಕಿ ಸಿಡಿತದಿಂದ ಬರುವ ಹೊಗೆ ವಾಯುವ್ಯ ಮಾಲಿನ್ಯವಾಗುತ್ತದೆ. ಉಸಿರಾಟಕ್ಕೆ ತೊಂದರೆ ಇನ್ನಿತರ ಆರೋಗ್ಯ ಸಮಸ್ಯೆಗಳು ಉಲ್ಬಣವಾಗುತ್ತದೆ. ಇದನ್ನು ತಪ್ಪಿಸಲು ಎಲ್ಲರು ಸಹ ಪಟಾಕಿ ಸಿಡಿಸುವುದು ಬಿಟ್ಟು, ದೀಪಗಳನ್ನು ಹಚ್ಚಿ ಸಂಭ್ರಮದಿಂದ ದೀಪಾವಳಿ ಆಚರಣೆ ಮಾಡೋಣ ಎಂದರು.
ನಂತರ ನಗರದ ಜೆಎಸ್‍ಎಸ್ ಬಾಲಕರು, ಬಾಲಕಿಯರು , ಪಬ್ಲಿಕ್ ಹಾಗು ಪದವಿ ಪೂರ್ವ ಕಾಲೇಜು, ಕೇಂದ್ರೀಯ ವಿದ್ಯಾಲಯ, ಯೂನಿರ್ವಸ್ ಶಾಲೆ, ವೆಂಕಟಯ್ಯನಛತ್ರ ಸರ್ಕಾರಿ ಪ್ರೌಢಶಾಲೆ, ಸೆಂಟ್ ಫ್ರಾನ್ಸಿಸ್ ಶಾಲೆಗಳು ಸೇರಿದಂತೆ ಪ್ರಚಾರ ವಾಹನ ತೆರಳಿ ಜಾಗೃತಿ ಮೂಡಿಸುವ ಜೊತೆಗೆ ಸಿಲ್ಕ್‍ಸಿಟಿ ಮಾಜಿ ಅಧ್ಯಕ್ಷ ದೊಡ್ಡರಾಯಪೇಟೆ ಗೀರೀಶ್ ವಿದ್ಯಾರ್ಥಿಗಳಿಗೆ ಪಟಾಕಿ ಸಿಡಿತದಿಂದ ಅಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಪ್ರತಿಜ್ಞಾವಿಧಿಯನ್ನು ಭೋದಿಸಿದರು.

ಪರಿಸರ ಅಧಿಕಾರಿ ಉಮಾಶಂಕರ್ ಮಾತನಾಡಿ, ನಮ್ಮ ಜಿಲ್ಲೆಯು ಉತ್ತಮ ಪರಿಸರ ಸಂರಕ್ಷಣೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ನಮ್ಮ ಜಿಲ್ಲೆ ಅರಣ್ಯ ಪ್ರದೇಶವನ್ನು ಹೆಚ್ಚು ಹೊಂದಿರುವುದು . ಈ ಪ್ರದೇಶವನ್ನು ಇದೇ ರೀತಿ ಮುಂದುವರಿಸಿಕೊಂಡು ಹೋಗಲು ನಿಮ್ಮಲ್ಲರ ಸಹಕಾರ ಅತಿ ಮುಖ್ಯವಾಗಿದೆ. ದೆಹಲಿಯಲ್ಲಿ ವಾಯು ಮಾಲಿನ್ಯ ದಿಂದ ಅಲ್ಲಿನ ಜನರ ಜೀವನವೇ ಅಸ್ತವ್ಯಸ್ತೆವಾಗಿದೆ. ಹೀಗಾಗಿ ಚಾಮರಾಜನಗರ ಜಿಲ್ಲೆಯ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ದೀಪಾವಳಿ ದಿನಂದು ಹಸಿರು ಪಟಾಕಿಗಳನ್ನು ಮಾತ್ರ ಹೊಡೆಯುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರೋಟರಿ ವಲಯ9ರ ಸಹಾಯಕ ಗೌರ್ನರ್ ಪ್ರಕಾಶ್, ವಲಯ ಪ್ರತಿನಿಧಿ ಚೈತನ್ಯ ಜಿ. ಹೆಗಡೆ, ರೋಟರಿ ಅಧ್ಯಕ್ಷ ಚಂದ್ರ ಪ್ರಭ ಜೈನ್, ಕಾರ್ಯದರ್ಶಿ ದೀನಾ, ಸಿಲ್ಕ್‍ಸಿಟಿ ಅಧ್ಯಕ್ಷ ಅಕ್ಷಯ್, ಕಾರ್ಯದರ್ಶಿ ಮಾಣಿಕ್ಯ ಚಂದ್ ಜಿ. ರವಿ, ಮಾಜಿ ಅಧ್ಯಕ್ಷರಾದ ಜಿ.ಆರ್. ಆಶ್ವಥ್ ನಾರಾಯಣ್, ಆರ್.ಎಂ.ಸ್ವಾಮಿ, ಸುರೇಶ್‍ಕುಮಾರ್, ದೊಡ್ಡರಾಯಪೇಟೆಗೀರೀಶ್, ಡಿ.ಪಿ. ವಿಶ್ವಾಸ್, ಎಚ್.ಎಂ. ಆಜಯ್, ಸುಭಾಸ್, ಶ್ರೀನಿವಾಸನ್,ಎಸ್‍ಆರ್‍ಎಸ್ ಶ್ರೀನಿವಾಸ್, ಸದಸ್ಯರಾದ ಕಾಗಲವಾಡಿ ಚಂದ್ರು, ಎಲ್. ನಾಗರಾಜು, ಶ್ರೀಧರ್,ರಾಜು ವರ್ಗೀಸ್, ಎಚ್.ಎಂ. ಗುರುಸ್ವಾಮಿ, ಬಿ. ನಾಗರಾಜು ಮೊದಲಾಧವರು ಇದ್ದರು.

Leave a Reply

Your email address will not be published. Required fields are marked *