ಪತಂಜಲಿ ಶಿಕ್ಷಣ ಸಮಿತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

ಮೈಸೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಸಮಿತಿ ವತಿಯಿಂದ ಮೈಸೂರಿನ ಸರಸ್ವತಿಪುರಂನಲ್ಲಿರುವ ಜವರೇಗೌಡ ಪಾರ್ಕ್‍ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು.

ಇದೇ ಸಂದರ್ಭದಲ್ಲಿ ಕನ್ನಡದ ಹಬ್ಬಕ್ಕೆ ವರುಣನ ಸಿಂಚನ ಹಾಗೂ ವರ್ಷ ಧಾರೆಯ ಶುಭ ಹಾರೈಕೆಗಳಿದ್ದವು. ತುಂತುರು ಹನಿಯಿದ್ದರೂ ಎಲ್ಲಾ ಯೋಗ ಬಂಧುಗಳು ಒಂದೆಡೆ ಸೇರಿ ಸಂಭ್ರಮಿಸಿದ್ದು ಖುಷಿ ಎನಿಸಿತ್ತು. ಬೆಳಗಿನ ನೀರವ ಮೌನದ ಜೊತೆ ಜೊತೆಗೆ ಪತಂಜಲಿ ಮುನಿಗಳಿಗೆ ಹಾಗೂ ತಾಯಿ ಭುವನೇಶ್ವರಿಗೆ ದೀಪ ಬೆಳಗಿಸಿ ಸಾಮೂಹಿಕವಾಗಿ ಹಚ್ಚೇವು ಕನ್ನಡದ ದೀಪ ಗೀತೆಯನ್ನು ಹಾಡಲಾಯಿತು.

ಕನ್ನಡವೆಂದರೆ ಬರಿಯ ನುಡಿಯಲ್ಲ ಹಿರಿದಿದೆ ಅದರರ್ಥ; ಜಲವೆಂದರೆ ಬರಿಯ ನೀರಲ್ಲಿ ಅದು ಪಾವನ ತೀರ್ಥ ಎಂದಿದ್ದಾರೆ ನಮ್ಮ ನಿತ್ಯೋತ್ಸವದ ಕವಿ ನಿಸ್ಸಾರ್ ಅಹಮದ್ ರವರು.. ಎಲ್ಲರಿಗೂ ಕನ್ನಡ ಹಬ್ಬದ ಶುಭ ಹಾರೈಕೆಗಳನ್ನು ತಿಳಿಸುತ್ತಾ ಸಾಮೂಹಿಕವಾಗಿ
ನಾಡಗೀತೆ ಯನ್ನು ಹಾಡಲಾಯಿತು.

ನನ್ನ ತಾಯಿ ಕನ್ನಡತಿ ಶಾಂತಿ ಸಹನೆಯ ಮೂರ್ತಿ.. ಜಗದಗಲವೂ ಹರಡಿಹುದು ಆಕೆಯ ಕೀರ್ತಿ… ನಮ್ಮ ಕನ್ನಡ ನಾಡು ಸಿರಿ ಗಂಧದ ನಾಡು, ಕರುನಾಡು, ಕನ್ನಡಾಂಬೆಯ ನಾಡು ಎಂದೆಲ್ಲ ಕರೆಸಿಕೊಳ್ಳುವ ಹೆಮ್ಮೆಯ ಕರ್ನಾಟಕದ ಬಗ್ಗೆ, ಭಾಷೆಯ ಬಗ್ಗೆ, ರನ್ನ, ಪೆÇನ್ನ, ಜನ್ನರ ಸಾಹಿತ್ಯದ ಬಗ್ಗೆ, ಙõÁ್ನನಪೀಠ ಪ್ರಶಸ್ತಿಯನ್ನು ಪಡೆದ ಕವಿ ಶ್ರೇಷ್ಠರ ವಿಚಾರ ಲಹರಿ, ಕದಂಬ ಮಯೂರ ವಂಶದ ಬಗ್ಗೆ ತಿಳಿಸಲಾಯಿತು.

ಅತ್ಯಂತ ಕಿರಿಯ ಯೋಗ ಬಂಧುವಿನಿಂದ ಭರತನಾಟ್ಯದ ನೃತ್ಯ ಸಂಭ್ರಮವೂ ಇತ್ತು..

ಕರುನಾಡು ಕಲೆಗಳ ತವರಣ್ಣ ಇದನ್ನು ಪೆÇೀಷಿಸಿ ಬಳಸಿದವರು ನಮ್ಮ ಕಾರಂತರು, ಸುಬ್ಬಣ್ಣ…ಇದುವೇ ನಮ್ಮ ಕರ್ನಾಟಕ ನಮ್ಮ ಹೆಮ್ಮೆ ಎಂದು ಕರ್ನಾಟಕದ ಬಗ್ಗೆ ಒಂದು ಲಾವಣಿ ಕೂಡ ಪ್ರಸ್ತುತ ಪಡಿಸಲಾಯಿತು..

ಕವಿ ಶ್ರೇಷ್ಠರ ಕವನಗಳ ಭಾವಗೀತೆಯನ್ನು ಕೂಡ ಅತ್ಯಂತ ಸುಶ್ರಾವ್ಯವಾಗಿ ಹಾಡಲಾಯಿತು.

ಕಾರ್ಯಕ್ರಮದ ನಡುವೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಸ್ಮರಿಸಲಾಗುತ್ತಿತ್ತು..

ಭೋರ್ಗರೆಯುವ ಜಲಪಾತಗಳು, ಮನಸ್ಸು ಸೂರೆಗೊಳ್ಳವ ಕಾರಂಜಿಗಳು, ಅಚ್ಚರಿ ಪಡುಸುವಂತಹ ಆಳದ ಸಾಗರಗಳು, ಬಹು ಎತ್ತರದ ಪರ್ವತಗಳು, ಹಸಿರು ವನಸಿರಿಯಗಳು, ನಮ್ಮ ಗತ ಕಾಲದ ವೈಭವವನ್ನು ಸಾರುವ ಕೋಟೆಗಳು, ಅರಮನೆಗಳು, ಪುರಾಣ ಪ್ರಸಿದ್ಧ ದೇಗುಲಗಳ ಬಗೆ ರಸಪ್ರಶ್ನೆಯ ಕಾರ್ಯಕ್ರಮದ ಸುಂದರವಾಗಿ ಮೂಡಿ ಬಂದಿತ್ತು.

ಕಿರಿಯ ಯೋಗ ಬಂಧುಗಳ ಜೊತೆ ಹಿರಿಯರು ಕೂಡ ಕಾಗುಣಿತ ಹಾಗೂ ಕನ್ನಡದ ಮಗ್ಗಿ ಹೇಳುವಾಗ ಮನಸ್ಸು ಬಾಲ್ಯದತ್ತ ವಾಲಿತ್ತು. ವೀರಗಾಸೆ, ಕಂಸಾಳೆ, ಕೋಲಾಟ, ಯಕ್ಷಗಾನ, ಡೊಳ್ಳು ಕುಣಿತ.. ಮತ್ತಷ್ಟು ಮಗದಷ್ಟು ಜಾನಪದ ಕಲೆಗಳ ಬಗ್ಗೆ ತಿಳಿಸಲಾಯಿತು.
ಕನ್ನಡದ ಸಂಕೇತವಾದ ಹಳದಿ ಕೆಂಪು ಶಾಲ್ ಕೂಡ ಉಡುಗೊರೆಯಾಗಿ ನೀಡಲಾಯಿತು.

Leave a Reply

Your email address will not be published. Required fields are marked *