ಚಾಮರಾಜನಗರ: ಜಿಲ್ಲೆಯಲ್ಲಿ ಸಕಾರಿ ಶಾಲೆಯಲ್ಲಿ ಅಧ್ಯಯನ ಮಾಡಿ ಎಸ್ಎಸ್ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ೬ ವಿದ್ಯಾರ್ಥಿಗಳಿಗೆ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ಗ್ರಾಮೀಣ ಕೂಟ ಸಂಸ್ಥೆ ವತಿಯಿಂದ ತಲಾ ೧೫ ಸಾವಿರ.ರೂ ಪ್ರೊತ್ಸಾಹ ಧನ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ನಗರದಲ್ಲಿ ಅಭಿನಂದಿಸಲಾಯಿತು.

ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ೬ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿ ಗ್ರಾಮೀಣ ಕೂಟ ಸಂಸ್ಥೆಯು ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಇಂದು ಅವರ ಉನ್ನತ ಶಿಕ್ಷಣಕ್ಕಾಗಿ ಅವರ ಖಾತೆಗೆ ೧೫ ಸಾವಿರ ರೂ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸುತ್ತಿರುವುದು ಉತ್ತಮ ಕಾರ್ಯವಾಗಿದ್ದು, ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಇದನ್ನು ಉನ್ನತ ಶಿಕ್ಷಣಕ್ಕೆ ವಿನಿಯೋಗಿಸಿಕೊಂಡು ಉನ್ನತ ಗುರಿ ಸಾಧಿಸುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ಗ್ರಾಮೀಣ ಕೂಟ ಸಂಸ್ಥೆಯ ರೂಜಿನಲ್ ಮ್ಯಾನೇಜರ್ ಮುತ್ತುರಾಜು,ಗಂಗರಾಜು,ಏರಿಯಾ ಮ್ಯಾನೇಜರ್ ಲೋಕೆಶ್,ನಂದೀಶ್, ಚಾಮರಾಜನಗರ ಮ್ಯಾನೇಜರ್ ಮಲ್ಲಿಕಾರ್ಜುನ,ಮಾದೇಶ್ ಸೇರಿದಂತೆ ಚಾಮರಾಜನಗರ ಬ್ರಾಂಚ್ ಸಿಬ್ಬಂದಿಗಳು ಹಾಜರಿದ್ದರು.