ದೇಶದ ಏಕೈಕ ಕುರುಬ ಸಮುದಾಯದ ಸಿಎಂ. ಸಿದ್ದರಾಮಯ್ಯ ಅವರಿಗೆ ಅಭಿನಂದನೆ
ಚಾಮರಾಜನಗರ, ಸೆ. 29- ದೇಶ ವಿದೇಶಗಳಲ್ಲಿರುವ ಕುರುಬ ಸಮುದಾಯದ ಬಂಧುಗಳನ್ನು ಒಗ್ಗೂಡಿಸುವ ಸಲುವಾಗಿ ರಚನೆಯಾಗಿರುವ ಶೆಫರ್ಡ್ಸ್ ಇಂಡಿಯಾ ಇಂಟರ್ನ್ಯಾಷನಲ್ ವಾರ್ಷಿಕೋತ್ಸವ ಅ. 3 ರಂದು ಭಾನುವಾರ ಬೆಳಗಾವಿಯಲ್ಲಿ ನಡೆಯಲಿದ್ದು, ಕುರುಬ ಸಮುದಾಯದ ದೇಶದ ಏಕೈಕ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಸಮಾರಂಭವನ್ನು ಆಯೋಜನೆ ಮಾಡಲಾಗಿದೆ. ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ನಂಜೇಗೌಡ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 9 ವರ್ಷಗಳ ಹಿಂದೆ ಮಾಜಿ ಸಚಿವರಾದ ಎಚ್. ವಿಶ್ವನಾಥ್ ಹಾಗೂ ಮಾಜಿ ಸಚಿವರಾದ ಎಚ್.ಎಂ. ರೇವಣ್ಣ ಅವರ ನೇತೃತ್ವದಲ್ಲಿ ರಚನೆಯಾದ ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಸಂಘಟನೆಯು ಕುರುಬ ಸಮದಾಯದ ಎಲ್ಲರನ್ನು ಸಂಘಟನೆ ಮಾಡುವ ಜೊತೆಗೆ, ದೇಶ ವಿದೇಶಗಳಲ್ಲಿರುವ ವಿವಿಧ ಭಾಷೆಗಳನ್ನು ಒಳಗೊಂಡ ಸಮಾಜದವರನ್ನು ಒಗ್ಗೂಡಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಪ್ರತಿ ವರ್ಷವು ಸಹ ವಿವಿಧ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಸಮಾಜದ ಮುಖಂಡರನ್ನು ಗೌರವಿಸುವ ಜೊತೆಗೆ ಕುರುಬ ರೆಂದರೆ ಕೇವಲ ಜಾತಿಯಲ್ಲ ಮಹಾನ್ ಸಂಸ್ಕೃತಿ ಎಂದು ಸಾರುವ ಕೆಲಸವನ್ನು ಮಾಡುತ್ತಿದೆ ಎಂದರು.
ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ : ಶೆಫÀರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಸಂಘಟನೆಯಿAದ ಅ. 3 ರಂದು ಬೆಳಗಾವಿಯಲ್ಲಿ ನಡೆಯುವ ಸಮಾರಂಭದಲ್ಲಿ ಇಡೀ ಭಾರತದಲ್ಲಿಯೇ ನಮ್ಮ ಸಮುದಾಯದಿಂದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುತ್ತದೆ. ಈ ಸಮಾರಂಭಕ್ಕೆ ಸಮಾಜದ ವಿವಿಧ ಮಠಾಧೀಶರು, ಗಣ್ಯರು ಹಾಗೂ ಕೇಂದ್ರ ಹಾಗೂ ರಾಜ್ಯ ಸಚಿವರು ಭಾಗವಹಿಸಲಿದ್ದಾರೆ . ಜಿಲ್ಲೆಯಿಂದ ಸಮಾಜ ಹಾಗೂ ಇತರೇ ಹಿಂದುಳಿದ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಶೆಫರ್ಡ್ಸ್ ಇಂಡಿಯಾ ಇಂಟರ್ನ್ಯಾಷನಲ್ ಜಿಲ್ಲಾಧ್ಯಕ್ಷ ಜನ್ನೂರು ಮಹದೇವ್, ಜಿಲ್ಲಾ ಕುರುಬರ ಸಂಘ ಉಪಾಧ್ಯಕ್ಷ ಬಸಪ್ಪನಪಾಳ್ಯ ನಟರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುತ್ತಿಗೆ ಶಿವಲಿಂಗೇಗೌಡ, ಯಳಂದೂರು ತಾಲೂಕು ಅಧ್ಯಕ್ಷ ಕೋಂಡೇಗೌಡ, ಉಪಾಧ್ಯಕ್ಷ ಮಲ್ಲು, ಕಾರ್ಯದರ್ಶಿ ಸೋಮಣ್ಣ ಹೊನ್ನೂರು, ನಿರ್ದೇಶಕ ಮಹದೇವ್, ಮಸಗಾಪುರ ಬಿ. ಸ್ವಾಮಿ ಹಾಜರಿದ್ದರು.