ಭಗತ್‍ಸಿಂಗ್ ಅವರ ಕ್ರಾಂತಿಕಾರಿ ವಿಚಾರಧಾರೆಯ ಪೋಸ್ಟರ್ ಬಿಡುಗಡೆ

ಚಾಮರಾಜನಗರ: ತಾಲ್ಲೂಕಿನ ಕೋಡಿಮೋಳೆ ಗ್ರಾಮದಲ್ಲಿ ಭಗತ್ ಯುವ ಸೇನೆ ಹಾಗೂ ಎಐಡಿವೈಓ ವತಿಯಿಂದ ಭಗತ್ ಸಿಂಗ್ ರವರ ಕ್ರಾಂತಿಕಾರಿ ವಿಚಾರಧಾರೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಇದೇ ತಿಂಗಳ 28ರಂದು ಭಗತ್ ಸಿಂಗ್ ರವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ “ಹಳ್ಳಿಯ ನಡೆ, ಭಗತ್ ಸಿಂಗ್ ವಿಚಾರಧಾರೆಯ ಕಡೆಗೆ” ವಿಶೇಷ ಕಾರ್ಯಕ್ರಮದ ಮುಖಾಂತರ ಭಗತ್ ಸಿಂಗ್ ರವರ ಕ್ರಾಂತಿಕಾರಿ ಚಿಂತನೆಗಳನ್ನು ತಿಳಿಸಲಾಗುತ್ತಿದೆ ಎಂದು ಭಗತ್ ಯುವ ಸೇನೆ ಅಧ್ಯಕ್ಷ ಕಾಂತರಾಜು ತಿಳಿಸಿದರು.
ಈ ಸಂದರ್ಭದಲ್ಲಿ ಶಿವು ಮಹೇಂದ್ರ, ಮಂಜು, ಸಂತೋಷ, ಜಯಶಂಕರ ,ಸತೀಶ್, ಶಿವಕುಮಾರ್ ಇದ್ದರು.

Leave a Reply

Your email address will not be published. Required fields are marked *