ದಿ.ಜಿ.ಮಾದೇಗೌಡರು ಬಂದ ಹಾದಿಯಲ್ಲೇ ಪುತ್ರ ಮಧುಜಿಮಾದೇಗೌಡ : ಎನ್.ಚಲುವರಾಯಸ್ವಾಮಿ
ಭಾರತೀನಗರ.ಸೆ.15- ದಿ.ಜಿ.ಮಾದೇಗೌಡರು ಬಂದ ಹಾದಿಯಲ್ಲೇ ಪುತ್ರ ಮಧುಜಿಮಾದೇಗೌಡರು ಬೆಳೆಯುತ್ತಿರುವುದು ನಮ್ಮೆಲ್ಲರಿಗೂ ಗೌರವ ತರುವಂತಹ ವಿಚಾರವಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಇಲ್ಲಿನ ಭಾರತೀಕಾಲೇಜಿನ ಕ್ರೀಡಾಂಗಣದಲ್ಲಿ ಮಧುಜಿಮಾದೇಗೌಡರ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ದಕ್ಷಿಣ ಪದವೀಧರ ಕ್ಷೇತ್ರದ ಶಾಸಕರಾದ ಮಧುಜಿಮಾದೇಗೌಡ ಅವರಿಗೆ ಬೆಳ್ಳಿಕಿರೀಟ ಧಾರಣೆ ಸಮಾರಂಭಲ್ಲಿ ಅವರು ಮಾತನಾಡಿದರು.

ಮಧುಜಿಮಾದೇಗೌಡರು ಅವರ ತಂದೆ ಜಿ.ಮಾದೇಗೌಡರ ಹೆಸರುಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅವರ ಬೆಳೆವಣಿಗೆಗೆ ಇಲ್ಲಿನ ಕಾರ್ಯಕರ್ತರು, ಭಾರತೀ ಶಿಕ್ಷಣ ಸಂಸ್ಥೆಯ ಎಲ್ಲಾ ಅಧ್ಯಾಪಕ-ಅಧ್ಯಾಪಕೇತರರು, ಸಿಬ್ಬಂದಿ ವರ್ಗದವರು ಬೆನ್ನೆಲುಭಾಗಿ ನಿಲ್ಲುತ್ತಿರುವುದರಿಂದ ವಿದ್ಯಾಸಂಸ್ಥೆಯು ಉನ್ನತ ಮಟ್ಟದಲ್ಲಿ ಬೆಳೆಯುತ್ತಿದೆ ಎಂದು ಶ್ಲಾಘಿಸಿದರು.
ಸದ್ಯದಲ್ಲೇ ಮೆಡಿಕಲ್ ಕಾಲೇಜು : ದೂರದೃಷ್ಠಿ ಇಟ್ಟುಕೊಂಡಿದ್ದ ದಿ.ಜಿ.ಮಾದೇಗೌಡರ ಪರಿಶ್ರಮದಿಂದ ಭಾರತೀನಗರ ತಾಲ್ಲೂಕು ಕೇಂದ್ರವನ್ನು ಮಿಗಿಲಾಗಿ ಬೆಳೆದು ನಿಂತಿದೆ. ಸದ್ಯದಲ್ಲೇ ಮೆಡಿಕಲ್ ಕಾಲೇಜು ತರಲು ಮಧುಜಿಮಾದೇಗೌಡರು ಕಾರ್ಯಪ್ರೌವೃತ್ತರಾಗಿದ್ದಾರೆ. ಅದಕ್ಕೆ ನಮ್ಮ ಸಹಕಾರವು ಇದೆ ಎಂದರು.
ಮಧುಜಿಮಾದೇಗೌಡರ ಅಭಿಮಾನಿಗಳು ಬೆಳ್ಳಿ ಕಿರೀಟಧಾರಣೆ ಮಾಡಿ ಅಭಿಮಾನ ಮೆರೆಯುತ್ತಿರುವುದೇ ಇವರ ಸಾಧನೆಗೆ ಕೈಗನ್ನಡಿಯಾಗಿದೆ ಎಂದರು.
ರೈತರಿಗೆ ಅನ್ಯಾಯವಾಗದು : ಕಾವೇರಿ ವಿಚಾರದಲ್ಲಿ ರೈತರಿಗೆ ಯಾವುದೇ ಅನ್ಯಾಯವಾಗಲು ಬಿಡುವುದಿಲ್ಲ. ರೈತರ ಅಭಿವೃದ್ದಿಗಾಗಿ ಸಿ.ಎಂ.ಸಿದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಜಿಲ್ಲೆಯ ಎಲ್ಲಾ ಶಾಸಕರು ಇದ್ದೇವೆ. ಈಗಾಗಲೇ ಬರಪೀಡಿತ ತಾಲ್ಲೂಕುಗಳನ್ನು ಘೋಷಣೆ ಮಾಡಿದ್ದೇವೆ. ನಮ್ಮ ಜಿಲ್ಲೆಯ 7 ತಾಲ್ಲೂಕುಗಳಿಗೂ ಬರಪೀಡಿತ ತಾಲ್ಲೂಕು ಎಂದು ಗುರುತಿಸಲಾಗಿದೆ ಎಂದರು.
ಮಂಡ್ಯಜಿಲ್ಲೆಯಲ್ಲಿ 19 ಲಕ್ಷಕ್ಕೂ ಹೆಚ್ಚು ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಇದರಿಂದ ರೈತರಿಗೆ ಸಾಕಷ್ಟು ಪರಿಹಾರ ಸಿಗಲಿದೆ. ಜಿಲ್ಲೆಯ ಅಭಿವೃದ್ದಿಗೆ ಯಾವುದೇ ಮೋಸ ಆಗದ ರೀತಿಯಲ್ಲಿ ಕೆಲಸ ಮಾಡುತ್ತೇವೆಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ದಿನೇಶ್ಗೂಳಿಗೌಡ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಬಡ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಉದ್ದೇಶದಿಂದ ಮಧುಜಿಮಾದೇಗೌಡರು ಈ ಭಾಗಕ್ಕೆ ಮಡಿಕಲ್ ಕಾಲೇಜು ತರಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಇವರ ಸಹಕಾರಕ್ಕೆ ನಾವೆಲ್ಲರೂ ನಿಂತಿದ್ದೇವೆ ಎಂದರು.
ಇದೇ ವೇಳೆ ಅಭಿಮಾನಿಗಳು ಮಧುಜಿಮಾದೇಗೌಡರವರಿಗೆ ಬೆಳ್ಳಿಕಿರೀಟಧಾರಣೆ ಮಾಡಿ ಅಭಿನಂದಿಸಿದರು. ನಂತರ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಕಾರ್ಕಹಳ್ಳಿ ಸ್ವರೂಪ್ಚಂದ್ರ ಅವರ ಬಳಗದಿಂದ ಭಾರಿಗಾತ್ರದ ಹೂವಿನ ಹಾರ ಹಾಕಿ ಅಭಿಮಾನ ಮೆರೆದರು.
ಅಭಿಮಾನಿಗಳಿಗೆ ಚಿರ ಋಣಿ : ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಧುಜಿಮಾದೇಗೌಡರು, ಇಂತಹ ಅಭಿನಂದನೆಗಳನ್ನು ಪಡೆದುಕೊಳ್ಳಲು ನನಗೆ ಮುಜುಗರವಾಗುತ್ತದೆ. ನಾನು ಪದವೀದರ ಕ್ಷೇತ್ರಕ್ಕೆ ಆಯ್ಕೆಗೊಂಡ ದಿನದಿಂದಲೂ ಅಭಿಮಾನಿಗಳು ಒತ್ತಡ ತರುತ್ತಿದ್ದರು. ಆದರೆ ಈ ದಿನ ನನ್ನನ್ನು ಬಂಧಿಸಿ ಅಭಿಮಾನ ಮೆರೆದಿದ್ದಾರೆ. ನಾನು ಅವರಿಗೆ ಚಿರ ಋಣಿಯಾಗಿರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಗಣಿಗ ರವಿ, ನಿವೃತ್ತ ಕಾಯಪಾಲಕ ಅಭಿಯಂತರ ಬಸವರಾಜೇಗೌಡ, ತಾ.ಪಂ ಮಾಜಿ ಸದಸ್ಯ ದೇವೇಗೌಡನದೊಡ್ಡಿ ಗಿರೀಶ್, ಭರತೇಶ್, ಸೊಸೈಟಿ ನಿದರ್ೇಶಕ ಆರ್.ಸಿದ್ದಪ್ಪ, ಮುಖಂಡರಾದ ಹಾಗಲಹಳ್ಳಿ ಪುಟ್ಟಸ್ವಾಮಿ, ಮಾಚಹಳ್ಳಿ ಕುಮಾರ್, ಕಬ್ಬಾಳಯ್ಯ, ಭಾರತೀ ಎಜುಕೇಷನ್ ಟ್ರಸ್ಟ್ನ ಕಾರ್ಯದಶರ್ಿ ಬಿ.ಎಂ.ನಂಜೇಗೌಡ, ಸಿದ್ದೇಗೌಡ, ಬಸವೇಗೌಡ, ಜಯರಾಮು, ಪ್ರಾಂಶುಪಾಲ ಡಾ.ಪಿ.ನಾಗೇಂದ್ರ, ಶಿವಲಿಂಗೇಗೌಡ, ಜುಂಜೇಗೌಡ, ಉಪನ್ಯಾಸಕರು ಸೇರಿದಂತೆ ಹಲವರಿದ್ದರು.