ಚಾಮರಾಜನಗರ: ತಾಲೂಕಿನ ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ಒಂದು ಲಕ್ಷ ರೂ.ಗಳ ನಿವ್ವಳ ಲಾಭವನ್ನು ಪಡೆದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಎಂ> ಕೃಷ್ಣ ತಿಳಿಸಿದರು.
ಗ್ರಾಮದ ಸಂಘದ ಅವರಣದಲ್ಲಿ ನಡೆದ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದುವರೆಗೆ ಸಂಘದ 146 ಮಂದಿ ಸದಸ್ಯರಿಗೆ 1,18,53,000 ರೂ.ಗಳ ಸಾಲ ನೀಡಿಲಾಇದ್ದು, ರೈತರಿಂಎ 88,35,000 ರೂ.ಗಳ ಮರುಪಾವತಿಯಾಗಿದೆ. ಸಂಘದಲ್ಲಿ 463 ಮಂದಿ ಸದಸ್ಯರಿದ್ದು , ಎಲ್ಲ ಸದಸ್ಯರಿಗೂ ಸಾಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ನಮ್ಮ ಸಂಘ ಸಿದ್ದವಾಗಿದ್ದು, ರೈತರು ತಾವುಗಳ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ, ಶೂನ್ಯ ಬಡ್ಡಿ ದರದ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಹಿಳಾ ಸ್ವಸಹಾಯ ಸಂಘಗಳಿಗೂ ಸಹ ಸಂಘದಿಮದ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಚಿಂತನೆ ಮಾಡಲಾಗಿದೆ. ಮಹಿಳೆಯರು ಸಂಘದ ಸದಸ್ಯತ್ವವನ್ನು ಹೊಂದಿ ಈ ಸೌಲಭ್ಯವನ್ನು ಪಡೆದುಕೊಳ್ಲಬೇಕು ಎಂದರು.
ಸಂಘದ ಕಟ್ಟಡ ನವೀಕರಣ, ಬ್ಯಾಂಕ್ ಅವರಣದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಸೇರಿದಂತೆ ಲಾಭಾಂಶದಲ್ಲಿ ಹಂತ ಹಂತವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದ ಎಂದು ಕೃಷ್ಣ ಅವರು ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಸಿ. ಗುರುಸ್ವಾಮಿ ಮಾತನಾಡಿ, ಸಂಘದಲ್ಲಿ ಈಗಾಗಲೇ 500 ರೂ. ಕಟ್ಟಿ ಷೇರು ಪಡೆದುಕೊಂಡಿರುವವರು ಹೆಚ್ಚುವರಿಯಾಗು ಇನ್ನು 500 ರೂ. ಕಟ್ಟಿ ಸಂಘದ ಸದಸ್ಯತ್ವವನ್ನು ನವೀಕರಿಸಿಕೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ ಮತ ಹಾಕಲು ಹಾಗೂ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅರ್ಹತೆಯನ್ನು ಹೊಂದಿರುತ್ತಾರೆ. ತಪ್ಪದೇ ಕನಿಷ್ಟ 2 ಮಹಾಸಭೆಯಲ್ಲಿ ಭಾಗವಹಿಸಿ ಸಹಿ ಹಾಕಿರಬೇಕು ಎಂದು ಮಾಹಿತಿ ನೀಡಿದರು. ವಾರ್ಷಿಕ ವರದಿಯನ್ನು ಮಂಡಿಸಿ, ಅನುಮೋದನೆ ಪಡೆದುಕೊಂಡರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಚನ್ನಯ್ಯ, ನಿರ್ದೇಶಕರಾದ ಕ್ಯಾತಶೆಟ್ಟಿ, ಜಿ. ಮಹದೇವಪ್ಪ, ಎಂ.ಕೆ. ಮಹದೇವಶೆಟ್ಟಿ, ಪಿ. ಮಹದೇವಪ್ಪ, ಎಂ.ಸಿ. ಮಲ್ಲಣ್ಣ, ಬೀರೇಗೌಡ, ಸಿದ್ದೂರಪ್ಪ, ಪುಟ್ಟಬುದ್ದಿ, ಶಿವಮ್ಮ, ಮಹದೇವಮ್ಮ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.