ಚಾಮರಾಜನಗರ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿ ತರಲು ಪ್ರತಿಭಾ ಕಾರಂಜಿ ಸ್ಪರ್ಧೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಕ್ಷೇತ್ರಾ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ ತಿಳಿಸಿದರು.
ತಾಲೂಕಿನ ಭೋಗಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಲ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಳೆಯುವ ಪೈರನ್ನು ಮೊಳಕೆಯಲ್ಲೇ ನೋಡು ಎಂಬ ನಾಣ್ನುಡಿಯಂತೆ ನಮ್ಮ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಬಾಲ್ಯದಲ್ಲಿಯೇ ಗುರುತಿಸಿ ಪ್ರೋತ್ಸಾಹ ನೀಡಿದರೆ ಅವರು ಮುಂದಿ ನ ದಿನಗಳಲ್ಲಿ ದೊಡ್ಡ ಕಲಾವಿದರಾಗಿ ಅವರ ಅಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ. ಹೀಗಾಗಿ ಪ್ರತಿ ವರ್ಷದ ಶಾಲಾ ಮಟ್ಟದಲ್ಲಿ ಇಂಥ ಪ್ರತಿಭಾ ಕಾರಂಜಿಯನ್ನು ಆಯೋಜನೆ ಮಾಡಲಾಗುತ್ತಿದೆ. ಶಾಲಾ ಹಂತರ, ಕ್ಲಸ್ಟರ್ ಮಟ್ಟ , ತಾಲೂಕು ಹಾಗು ಜಿಲ್ಲಾ ಮಟ್ಟದಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಆಯೋಜನೆ ಮಾಡಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಮಕ್ಕಳನ್ನು ರಾಜ್ಯ ಮಟ್ಟಕ್ಕೆ ಕಳುಹಿಸಿಕೊಡಲಾಗುತ್ತಿದೆ. ಈ ಹಂತದಲ್ಲಿ ಪ್ರಶಸ್ತಿ ಪಡೆದುಕೊಂಡ ಮಕ್ಕಳು ಮುಂದಿನ ಭವಿಷ್ಯದಲ್ಲಿ ಉತ್ತಮ ತರಬೇತಿ ಹಾಗು ಪ್ರೋತ್ಸಾಹವನ್ನು ಪೋಷಕರು, ಶಿಕ್ಷಕರು ನೀಡಿದ್ದೆ ಆದರೆ, ಅವರು ಪ್ರತಿಭಾವಂತ ಕಲಾವಿದರಾಗಿ ರೂಪುಗೊಂಡು ದೇಶ, ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದರು.
ಕುದೇರು ಠಾಣೆಯ ಇನ್ಸ್ಪೆಕ್ಟರ್ ತಾಜುದ್ದೀನ್ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಶ್ರದ್ದೆಯಿಂದ ವ್ಯಾಸಂಗ ಮಾಡುವ ಜೊತೆಗೆ ಗುರಿ ಹಾಗು ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಬಹಳಷ್ಟು ಮಕ್ಕಳು ವಿವಿಧ ವೇಷಭೂಷನ ತೊಟ್ಟು ತಮ್ಮ ಕಲೆಯನ್ನು ಪ್ರದರ್ಶನ ಮಾಡಲು ಮುಂದಾಗಿದ್ದಾರೆ. ಈಗ ನಾವೆಲ್ಲರು ಮಹಾನ್ ಸಾಧಕರು ಎಂದು ಗುರುತಿಸುವವರು ಸಹ ಇದೇ ರೀತಿ ತಳ ಮಟ್ಟದಿಂದ ಕಾರ್ಯಕ್ರಮಗಳನ್ನು ನೀಡಿ, ಹಾಗು ಇಂಥ ವೇದಿಕೆಗಳನ್ನು ಬಳಕೆ ಮಾಡಿಕೊಂಡು ದೊಡ್ಡ ಕಲಾವಿದರು ಹಾಗೂ ಸಾಧಕರಾಗಿದ್ದಾರೆ. ಇವೆರಲ್ಲರು ಸಹ ನಮಗೆಲ್ಲ ಸ್ಪೂರ್ತಿಯಾಗಬೇಕು ಮತ್ತು ಶಿಕ್ಷಣದಿಂದ ಮಾತ್ರ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯವಿದೆ ಎಂದರು.
ಶಿಕ್ಷಣ ಪಡೆದ ತಾವೆಲ್ಲರು ಹುಲಿಯಂತೆ ಗರ್ಜಿಸಬೇಕು. ಶಿಕ್ಷಣದಿಂದ ಬದಲಾವಣೆ ಹೊಂದಲು ಸಾಧ್ಯವಿದೆ. ವ್ಯಾಸಂಗ ಜೊತೆಗೆ ಇಂಥ ಹವ್ಯಾಸಗಳನ್ನು ಬೆಳೆಸಿಕೊಂಡು ರಾಜ್ಯ ಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡರೆ ಉದ್ಯೋಗದಲ್ಲಿ ವಿನಾಯಿತಿ ದೊರೆಯಲಿದೆ. ಕ್ಲಸ್ಟರ್ ಮಟ್ಟದಲ್ಲಿ ಭಾಗವಹಿಸಿರುವ ಮಕ್ಕಳೆಲ್ಲರು ಸಹ ರಾಜ್ಯ ಮಟ್ಟದವರೆಗೆ ಸಾಗಲಿ ಎಂದು ನಾಜುದ್ದೀನ್ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಭೋಗಾಪುರ ಗ್ರಾ.ಪಂ. ಅಧ್ಯಕ್ಷೆ ರೂಪಾ, ಉಪಾಧ್ಯಕ್ಷ ಮಹೇಶ್, ಪಿಡಿಓ ರಾಮೇಗೌಡ, ಸದಸ್ಯರಾದ ನಾಗಮ್ಮ, ನಾಗು, ಎಪಿಎಂಸಿ ಮಾಜಿ ಅಧ್ಯಕ್ಷ ಡಿ. ನಾಗೇಂದ್ರ, ಎಸ್ಡಿಎಂಸಿ ಅಧ್ಯಕ್ಷ ರಾಜೇಶ್, ಉಪಾದ್ಯಕ್ಷೆ ಲತಾಮಣಿ, ಸದಸ್ಯರಾದ ಮಹದೇವಸ್ವಾಮಿ, ಮಲ್ಲೇಗೌಡ, ರಾಘವೇಂದ್ರ, ಎಸ್.ಕುಮಾರ್, ಸೌಮ್ಯ, ಮಾಲಿನಿ, ಸಿಆರ್ಪಿ ಶಿವಮೂರ್ತಿ, ಮುಖ್ಯ ಶಿಕ್ಷಕ ಮಹೇಶ್, ಸಹ ಶಿಕ್ಷಕರಾದ ಪ್ರಮೀಳಾ, ಶಿವಕುಮಾರ್ ಸಿ.ಎಂ. ರಾಜು, ಜಗದೀಶ್, ಸ್ವಾಮಿ, ಲತಾ ಪುಟ್ಟಸ್ವಾಮಿ, ಕುಮಾರ್ ನಂಜಯ್ಯ ಹಾಗೂ ಮಂಗಲ ಕ್ಲಸ್ಟರ್ ಮಟ್ಟದಲ್ಲಿರುವ ೧೭ ಶಾಲೆಗಳಿಂದ ೩೫೦ಕ್ಕು ಹೆಚ್ಚು ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.