ಯಳಂದೂರು ತಾಲೂಕಿನ ಅನುಪಯುಕ್ತ 7 ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಕ್ರಮ : ಆಕ್ಷೇಪಣೆ ಸಲ್ಲಿಕೆಗೆ ಆಹ್ವಾನ

ಚಾಮರಾಜನಗರ: ಸಹಕಾರ ಇಲಾಖೆಯು ಯಳಂದೂರು ತಾಲೂಕಿನ ವ್ಯಾಪ್ತಿಯ ೭ ಸಹಕಾರ ಸಂಘಗಳ ನೋಂದಣಿಯನ್ನು ರದ್ದು ಪಡಿಸಲು ಕ್ರಮ ಅನುಸರಿಸಿದ್ದು ಈ ಸಂಬಂಧ ಆಕ್ಷೇಪಣೆಗಳಿದ್ದಲ್ಲಿ ಅಥವಾ ಷೇರು ಹಣವನ್ನು ವಾಪಸ್ಸು ಪಡೆಯಲು ಇಲ್ಲವೇ ಯಾವುದೇ ಕ್ಲೈಮುಗಳಿದ್ದಲ್ಲಿ ಸೆಪ್ಟೆಂಬರ್ ೩೦ ರೊಳಗೆ ಸಲ್ಲಿಸಬಹುದಾಗಿದೆ.

ಯಳಂದೂರು ತಾಲೂಕು ಗ್ರಾಮೋದ್ಯೋಗ ಕಸಬುದಾರರ ಕೈಗಾರಿಕಾ ಸಹಕಾರ ಸಂಘ, ತಾಲೂಕು ಜನರಲ್ ಗೃಹ ನಿರ್ಮಾಣ ಸಹಕಾರ ಸಂಘ, ಯಳಂದೂರು ತಾಲೂಕು ಮುನೇಶ್ವರ ಸಂಯುಕ್ತ ಬೇಸಾಯ ಸಹಕಾರ ಸಂಘ, ಹೆಗ್ಗಡಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘ, ಶ್ರೀ ಮಹದೇಶ್ವರ ಸಂಯುಕ್ತ ಬೇಸಾಯ ಸಹಕಾರ ಸಂಘ ಆಮೇಕೆರೆ ಕಾಲೋನಿ-೨, ಯಳಂದೂರು ತಾಲೂಕು ಉಪಾಧ್ಯಾಯರ ಸಹಕಾರ ಸಂಘ, ಶ್ರೀ ಕಲ್ಪವೃಕ್ಷ ವಿಕಲಚೇತನರ ಸಹಕಾರ ಸಂಘಗಳ ನೋಂದಣಿ ರದ್ದುಪಡಿಸಲು ಕ್ರಮ ಅನುಸರಿಸಲಾಗಿದೆ.

ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಅಥವಾ ಸಂಘವು ನೀಡಿರುವ ಅಧಿಕೃತ ರಶೀದಿಯನ್ನು ಹಾಜರುಪಡಿಸಿ ಷೇರು ಹಣವನ್ನು ವಾಪಸ್ಸು ಪಡೆಯಲು ಅಥವಾ ಯಾವುದೇ ಕ್ಲೈಮುಗಳಿದ್ದಲ್ಲಿ ಸಮರ್ಥನೀಯ ದಾಖಲೆಯೊಂದಿಗೆ ಸೆಪ್ಟೆಂಬರ್ ೩೦ರೊಳಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಯಳಂದೂರು ತಾಲೂಕು ಸಮಾಪನಾಧಿಕಾರಿಗಳು ಹಾಗೂ ಸಹಕಾರ ಅಭಿವೃದ್ದಿ ಅಧಿಕಾರಿ ಇವರಿಗೆ ಖುದ್ದು ಹಾಜರಾಗಿ ಸಲ್ಲಿಸಬೇಕು.

ನಿಗದಿತ ಅವಧಿಯೊಳಗೆ ಸಂಘದ ನೋಂದಣಿ ರದ್ದತಿ ಸಂಬಂಧ ಆಕ್ಷೇಪಣೆ ಸಲ್ಲಿಕೆಯಾಗದಿದ್ದಲ್ಲಿ, ಯಾವುದೇ ಕ್ಲೈಮು ಸಲ್ಲಿಕೆಯಾಗದಿದ್ದಲ್ಲಿ, ಸಂಘದಲ್ಲಿ ತೊಡಗಿಸಿರುವ ಷೇರು ಹಣವನ್ನು ವಾಪಸ್ಸು ಪಡೆಯಲು ಯಾರೂ ಆಸಕ್ತಿ ವಹಿಸದಿದ್ದಲ್ಲಿ ಸಂಘದ ನೋಂದಣಿ ರದ್ದತಿಗೆ ಕ್ರಮವಹಿಸಲಾಗುವುದು ಎಂದು ಯಳಂದೂರು ತಾಲೂಕು ಸಮಾಪನಾ ಅಧಿಕಾರಿಗಳು ಹಾಗೂ ಸಹಕಾರ ಅಭಿವೃದ್ದಿ ಅಧಿಕಾರಿ ಎಸ್. ಸುಭಾಷಿಣಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *