ಮೈಸೂರು: ಸಹಕಾರ ಸಂಘಗಳ ಸದಸ್ಯರು ಮತ್ತು ಕುಟುಂಬದವರಿಗೆ ಜೆಎಸ್ಎಸ್ ಆಸ್ಪತ್ರೆಯಲ್ಲಿ ಯಶಸ್ವಿನಿ ಆರೋಗ್ಯ ಸೌಲಭ್ಯವಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರ್ಮಠ್ಹೇಳಿದರು.
ನಗರದ ಜೆಎಸ್ಎಸ್ ಆಸ್ಪತ್ರೆಯಲ್ಲಿ ಸೋಮವಾರ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಯಶಸ್ವಿನಿ ಆರೋಗ್ಯ ಯೋಜನೆಯನ್ನು ಸರ್ಕಾರ ಈ ವರ್ಷ ಮರು ಜಾರಿ ಮಾಡಿದೆ. ಜೆಎಸ್ಎಸ್ ಆಸ್ಪತ್ರೆಯಲ್ಲೂ ಈ ಯೋಜನೆ ಪುನರಾರಂಭಿಸಲಾಗುತ್ತಿದೆ. ಈ ಹಿಂದೆ ಯಶಸ್ವಿನಿ ಯೋಜನೆಯಡಿ ಶಸ್ತ್ರ ಚಿಕಿತ್ಸೆ ಸೌಲಭ್ಯ ಮಾತ್ರ ದೊರೆಯುತ್ತಿತ್ತು. ಈಗ ಸಾಮಾನ್ಯ ವೈದ್ಯಕೀಯ ಸೇವೆಯು ಪಡೆಯಬಹುದಾಗಿದ್ದು, ಬಡ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.
ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್ ಅವರು ಮಾತನಾಡಿ, ಜೆಎಸ್ಎಸ್ ಆಸ್ಪತ್ರೆಯಲ್ಲಿ ಯಶಸ್ವಿನಿ ಮಾತ್ರವಲ್ಲದೇ, ಆರೋಗ್ಯ ಕರ್ನಾಟಕ, ಇಎಸ್ಐ, ಆಯುಷ್ಮಾನ್ ಭಾರತ್, ಜ್ಯೋತಿ ಸಂಜೀವಿನಿ, ಖಾಸಗಿ ಆರೋಗ್ಯ ವಿಮೆ ಸೌಲಭ್ಯಗಳಡಿಯಲ್ಲಿ ಚಿಕಿತ್ಸೆಯನ್ನು ಪಡೆಯಬಹುದು. ಯಶಸ್ವಿನಿ ಯೋಜನೆಯಡಿ ಈ ಹಿಂದೆ ರೋಗಿಗಳಿಗೆ ಸಾಮಾನ್ಯವಾರ್ಡ್ ಮಾತ್ರ ನೀಡಲಾಗುತ್ತಿತ್ತು. ಇದೀಗ ಹೆಚ್ಚುವರಿ ಹಣ ಪಾವತಿಸಿ ವಿಶೇ ವಾರ್ಡ್ಗಳ ಸೌಲಭ್ಯ ಕೂಡಾ ಪಡೆಬಹುದು ಎಂದು ತಿಳಿಸಿದರು.
ಜೆಎಸ್ಎಸ್ ಮಹಾವಿದ್ಯಾಪೀಠದ ಹಣಕಾಸು ವಿಭಾಗ ನಿರ್ದೇಸಕ ಪುಟ್ಟಸುಬ್ಬಪ್ಪ, ವೈದ್ಯಕೀಯ ಅಧೀಕ್ಷಕ ಡಾ.ಮಧು, ಮುಖ್ಯ ಹಣಕಾಸು ಅಧಿಕಾರಿ ಕೆ.ಎಂ.ಭಗವಾನ್, ಉಪ ನಿರ್ದೇಶಕ ಡಾ.ಶ್ಯಾಮ ಪ್ರಸಾದ್ಶೆಟ್ಟಿ, ಭಾನುಮೂರ್ತಿ, ಯಶಸ್ವಿನಿ ಸಂಯೋಜಕ ಕುಮಾರ್ ಮತ್ತಿತರರಿದ್ದರು.