ಚಾಮರಾಜನಗರ: ಆಷಾಢ ಮಾಸದಲ್ಲಿ ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರವೇ ಜರುಗುವ ಇತಿಹಾಸ ಪ್ರಸಿದ್ಧ
ವಿಶೇಷ ಜಾತ್ರೆ ಎಂದರೆ ಅದುವೇ ಶ್ರೀ ಚಾಮರಾಜೇಶ್ವರ ಜಾತ್ರಾ ಮಹೋತ್ಸವ.

ಜುಲೈ ೩ರಂದು ನಡೆಯಲಿರುವ ಶ್ರೀ ಚಾಮರಾಜೇಶ್ವರ ಬ್ರಹ್ಮ ರಥೋತ್ಸವ ಅಂಗವಾಗಿ ರಥ ಕಟ್ಟುವ ಕೆಲಸಕ್ಕೆ ಸೋಮವಾರ ಚಾಲನೆ ನೀಡಿದ್ದು, ಕೆಲಸ ಕಾರ್ಯಗಳು ಬರದಿಂದ ಸಾಗುತ್ತಿದೆ.
ರಥ ಕಟ್ಟುವ ಕೆಲಸದ ನೇತೃತ್ವವನ್ನು ಬಂಡಿಗಾರ್ ದೆಫೇದಾರ್ ಮಹೇಶ್ ಹಾಗೂ ತಂಡ ಮಾಡುತ್ತಿದೆ.
ತಂಡದಲ್ಲಿ ಕಾರ್ ದೇವರಾಜು, ಪ್ರಭು, ನಾಗೇಶ್, ಸುರೇಶ್, ಮಹದೇವಣ್ಣ, ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಎಸ್.ನಾಗರಾಜು, ಆನಂದ ಭಗೀರಥ ಸುಭಾಷ್, ಮನು, ಪ್ರಜ್ವಲ್ ಇನ್ನಿತರರಿದ್ದಾರೆ.
