ರಾಜ್ಯ ಅಥ್ಲೀಟಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದ ಗೃಹ ಸಚಿವ ಪರಮೇಶ್ವರ್ ಅವರಿಗೆ ಎಲ್.ಸುರೇಶ್ ಸನ್ಮಾನ

ಚಾಮರಾಜನಗರ: ಕರ್ನಾಟಕ ರಾಜ್ಯ ಅಥ್ಲೀಟಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಗೃಹ ಸಚಿವÀ ಪರಮೇಶ್ವರ್ ಅವರನ್ನು ಚಾಮರಾಜನಗರ ಜಿಲ್ಲೆ ಅಥ್ಲೆಟಿಕ್ ಅಸೋಸಿಯೋಷನ್ ಜಿಲ್ಲಾ ಅಧ್ಯಕ್ಷ ಎಲ್ ಸುರೇಶ್ ಹಾಗೂ ಕಾರ್ಯದರ್ಶಿ ವೈ.ಅರ್.ಮಹೇಶ್ ಅಭಿನಂದಿಸಿದರು.

ಬೆಂಗಳೂರಿನ ಹಾಕಿ ಫೆಡರೇಷನ್‍ನಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಯ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಒಮ್ಮತದಿಂದ ರಾಜ್ಯ ಅಥ್ಲೀಟಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿ ಗೃಹ ಸಚಿವರಾದ ಜಿ. ಪರಮೇಶ್ವರ್ ಅವರನ್ನು ಅನುಮೋದಿಸಿದ ಹಿನ್ನೆಲೆಯಲ್ಲಿ ಪರಮೇಶ್ವರ್ ಅವರು ಅವಿರೋಧವಾಗಿ ಆಯ್ಕೆಯಾದರು.

ನೂತನ ಅಧ್ಯಕ್ಷರನ್ನು ಚಾಮರಾಜನಗರ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷÀನ್ ಅಧ್ಯಕ್ಷ ಎಲ್. ಸುರೇಶ್ ಹಾಗೂ ಕಾರ್ಯದರ್ಶಿ ವೈ.ಅರ್.ಮಹೇಶ್ ಅವರು ಜಿಲ್ಲೆಯ ಜನತೆಯ ಪರವಾಗಿ ಸನ್ಮಾನಿಸಿ, ಜಿಲ್ಲೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದವನ್ನು ಅಭಿವೃದ್ದಿ ಪಡಿಸಲು ಮನವಿ ಮಾಡಿದರು. ಅಥ್ಲೆಂಟಿಕ್ಸ್‍ಗಳಿಗೆ ಫೆವಿಲಿಯನ್. ನೆರಳಿನ ವ್ಯವಸ್ಥೆ ಕಲ್ಪಿಸಲು ಅನುದಾನ ನೀಡುವ ಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿ. ಪರಮೇಶ್ವರ್ ಅವರು ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ಜಿಲ್ಲೆಯ ಅಥ್ಲೆಟಿಕ್ ಸಂಸ್ಥೆಯ ಮೂಲಕ ಗ್ರಾಮಗಳಲ್ಲಿರುವ ದೈಹಿಕ ಶಿಕ್ಷಕರ ಸಹಕಾರದಲ್ಲಿ ಅವರುಗಳನ್ನು ಗ್ರಾಮ ಮಟ್ಟದಿಂದ ಕ್ರಮವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಸಾಮಥ್ರ್ಯ ಇರುವ ಮಕ್ಕಳನ್ನು ಗುರುತಿಸಿ ಬೆಳೆಸಬೇಕಾದ ಕರ್ತವ್ಯ ನಿಮ್ಮದಾಗಿದೆ ಎಂದು ತಿಳಿಸಿದರು. ಯಾವುದೇ ಸಂದರ್ಭದಲ್ಲಿ ನಮ್ಮ ಸಹಕಾರ ಸರ್ಕಾರದ ವತಿಯಿಂದ ಕ್ರೀಡಾ ಇಲಾಖೆಯಿಂದ ದೊರೆಯಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *