ಚಾಮರಾಜನಗರ: ರೈತರ ರೇಷ್ಮೆ ಕೃಷಿಯನ್ನು ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಇಲಾಖೆಯ ಅವಿಷ್ಕಾರ ಮಾಡಿರುವ ವಿವಿಧ ತಳಿಗಳನ್ನು ರೇಷ್ಮೆ ಗೂಡು ಬೆಳೆದು ಆರ್ಥಿಕ ಅಭಿವೃದ್ದಿಯನ್ನು ಹೊಂದಬೇಕು ಎಂದು ಕೇಂದ್ರೀಯ ರೇಷ್ಮೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಸತೀಶ್ ತಿಳಿಸಿದರು.

ನಗರದ ಕೇಂದ್ರಿಯ ರೇಷ್ಮೆ ಸಂಶೋಧನಾ ಕೇಂದ್ರದಲ್ಲಿ ಪ್ರಾದೇಶಿಕ ರೇಷ್ಮೆ ಸಂಶೋಧನಾ ಸಂಸ್ಥೆ, ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಹಾಗೂ ಕೇಂದ್ರ ರೇಷ್ಮೆ ಮಂಡಲಿ ಸಹಯೋಗದಲ್ಲಿ ಜಿಲ್ಲೆಯ 30ಕ್ಕು ಹೆಚ್ಚು ರೇಷ್ಮೆ ಬೆಳೆಗಾರರಿಗೆ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ರೇಷ್ಮೆ ಕೃಷಿಯಲ್ಲಿ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಉದ್ಗಾಟಿಸಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಚಾಮರಾಜನಗರ ಜಿಲ್ಲೆ ರೇಷ್ಮೆ ಕೃಷಿ ಬಹಳ ಪ್ರಖ್ಯಾತಿಯನ್ನು ಪಡೆದುಕೊಂಡಿತ್ತು. ಹೀಗಾಗಿ ಜಿಲ್ಲಾ ಕೇಂದ್ರದಲ್ಲಿ ಕೇಂದ್ರ ರೇಷ್ಮೆ ಸಂಶೋಧನಾ ಕೇಂದ್ರ ವನ್ನು ಸರ್ಕಾರ ಆರಂಭಿಸಿತ್ತು. ರೈತರು ರೇಷ್ಮೆ ಕೃಷಿಯನ್ನು ಅಳವಡಿಸಿಕೊಂಡು ಹಿಪ್ಪುನೇರಳೆ ತೋಟಗಳನ್ನು ಅಭಿವೃದ್ದಿ ಪಡಿಸಿ, ವರ್ಷಕ್ಕೆ ಮೂರದಿಂದ ನಾಲ್ಕು ಬೆಳೆಗಳನ್ನು ತೆಗೆಯುತ್ತಿದ್ದರು. ಚಾಮರಾಜನಗರದಲ್ಲಿರುವ ಕೇಂದ್ರ ರೇಷ್ಮೆ ಸಂಶೋಧನಾ ಮಂಡಳಿಯು ಕೇಂದ್ರ ಹಾಗು ರಾಜ್ಯ ಸರ್ಕಾರ ನೆರವಿನಿಂದ ವಿವಿಧ ರೀತಿಯ ಸವಲತ್ತು ಹಾಗೂ ಹೊಸ ತಳಿಗಳನ್ನು ರೈತರಿಗೆ ಪರಿಚಯಿಸಿ, ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದೆ.
ಈ ನಿಟ್ಟಿನಲ್ಲಿ ಈ ಬಾರಿ 30ಕ್ಕು ಹೆಚ್ಚು ರೈತರಿಗೆ ರೇಷ್ಮೆ ಕೃಷಿ ಬಗ್ಗೆ ನೂತನ ತಂತ್ರಜ್ಞಾನ ಅಳವಡಿಕೆ ಮತ್ತು ಹಿಪ್ಪುನೇರಳೆ ಬೆಳೆಗೆ ತಗಲುವ ವಿವಿಧ ಕೀಟ ಭಾದೆಗಳನ್ನು ತಡೆಯುವ ನಿಟ್ಟಿನಲ್ಲಿ ವಿಜ್ಞಾನಿಗಳ ಸಲಹೆ ಸೂಚನೆಗಳನ್ನು ಪಡೆದುಕೊಂಡು, ರೇಷ್ಮೆ ಕೃಷಿಯಲ್ಲಿ ಹೆಚ್ಚಿನ ಅದಾಯವನ್ನು ಪಡೆದುಕೊಂಡು ಜಿಲ್ಲೆಯಲ್ಲಿ ಮತ್ತೇ ರೇಷ್ಮೆ ಕೃಷಿಯನ್ನು ಪುನಶ್ಚೇತನಗೊಳಿಸಲು ಈ ಕಾರ್ಯಾಗಾರ ಸಹಕಾರಿಯಾಗಿದೆ ಎಂದು.
ವಿಜ್ಞಾನಿಗಳಾದ ಡಾ. ಮಹಿಬಾ ಹೆಲೆನ್ ಅವರು ರೇಷ್ಮೆ ಹುಳುವಿನ ಪ್ರಮುಖ ಕೀಟ ಪೀಡೆ ಊಜಿ ನೋನಾ ಸಮಗ್ರ ನಿರ್ವಹಣೆ ಕುರಿತು ಪವಾರ್ ಪಾಯಿಂಟ್ ಮುಲಕ ರೈತರಲ್ಲಿ ಅರಿವು ಮೂಡಿಸಿದರು. ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಡಾ. ಕುಸುಮಾ ಅವರು ವಿವಿಧ ರೇಷ್ಮೆ ತಳಿಗಳ ಬಗ್ಗೆ ತಿಳಿಸಿಕೊಟ್ಟರು.
ಮೂರು ದಿನಗಳ ಕಾರ್ಯಗಾರದಲ್ಲಿ ಮೈಸೂರಿನಲ್ಲಿರುವ ರೇಷ್ಮೆ ಸಂಶೋಧನಾ ಕೇಂದ್ರದಲ್ಲಿ ರೇಷ್ಮೆ ಕೃಷಿ ನಿರ್ವಹಣೆ ಮತ್ತು ವಿವಿಧ ಬೆಳೆಗಳು ಹಾಗೂ ಇತರೇ ಎಲ್ಲಾ ವಿಚಾರಗಳನ್ನು ಪ್ರಾತ್ಯಕ್ಷತೆ ಮೂಲಕ ತೋರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ನೌಕರರಾದ ಮೂಗೂರು ಸುಂದರಪ್ಪ, ಪುಟ್ಟಸ್ವಾಮಿ, ರಾಜು, ವೆಂಕಟೇಶ್, ಚನ್ನಯ್ಯ, ಮಹದೇವಸ್ವಾಮಿ, ಗೀತಾ, ಭಾಗ್ಯಮ್ಮ, ಹಾಗು ಜಿಲ್ಲೆಯ ರೇಷ್ಮೆ ಬೆಳೆಗಾರರು ಉಪಸ್ಥಿತರಿದ್ದರು.