ಹನೂರು: ಪಶು ಸಂಗೋಪನ ಇಲಾಖೆಯಿಂದ ರೈತರಿಗೆ ಒಳ್ಳೆ ಮಿಶ್ರ ತಳಿ ಜಾನುವಾರುಗಳನ್ನು ನೀಡುವಂತೆ ಅಧಿಕಾರಿಗಳಿಗೆ ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ಹನೂರು ತಾಲೂಕಿನ ದೋಮ್ಮನಗz್ದÉ ಗ್ರಾಮದಲ್ಲಿ ಪಶುಸಂಗೋಪನ ಇಲಾಖೆ ವತಿಯಿಂದ ಮಿಶ್ರ ತಳಿ ಕರುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರದಿಂದ ಪಶುಸಂಗೋಪನ ಇಲಾಖೆ ವತಿಯಿಂದ ಉತ್ತಮ ಕಾರ್ಯಕ್ರಮ ಆಯೋಜಿಸಲಾಗಿದೆ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಿಶ್ರ ತಳಿ ಕರುಗಳನ್ನು ರೈತರಿಗೆ ನೀಡಲು ಕಾರ್ಯಕ್ರಮವನ್ನು ಅಧಿಕಾರಿಗಳು ಮುಂದಿನ ದಿನಗಳಲ್ಲಿ ವಿಸ್ತರಿಸಬೇಕಾಗಿದೆ ಜೊತೆಗೆ ಜಾನುವಾರು ಕರುಗಳ ಆರೋಗ್ಯ ಸುಸ್ಥಿರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರೈತರಿಗೆ ಅಧಿಕಾರಿಗಳು ಸಲಹೆ ಸೂಚನೆಗಳನ್ನು ನೀಡುವ ಮೂಲಕ ಮಾರ್ಗದರ್ಶನ ನೀಡಬೇಕಾಗಿದೆ ಎಂದರು
ಬಹುಮಾನ ವಿತರಣೆ : ಪಶುಸಂಗೋಪನ ಇಲಾಖೆ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಿಶ್ರತರಿ ಕರುಗಳ ಪ್ರದರ್ಶನ ಉತ್ತಮ ಕರುಗಳ ಗುರುತಿಸಿ ಅಂತಹ ರೈತ ಮಾಲೀಕರಿಗೆ ಬಹುಮಾನವನ್ನು ಸಹ ಇದೇ ಸಂದರ್ಭದಲ್ಲಿ ವಿತರಿಸಲಾಯಿತು
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕರು ಸುಂದರಮ್ಮ ಪಶು ವೈದ್ಯಾಧಿಕಾರಿಗಳಾದ ಸಿ.ರಾಜು, ಶಿವರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವರಾಜ್, ಶಂಕರ್, ಚಂದ್ರು, ಕೃಷ್ಣಪ್ಪ, ರಾಜಪ್ಪ, ರುಕ್ಮಿಣಿ, ಜೆಡಿಎಸ್ ಮುಖಂಡಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶP ಉದನೂರು ಪ್ರಸಾದ, ಎಲ್ಲ ಮಾಳ ಗ್ರಾಮ ಪಂಚಾಯಿತಿ ಸದಸ್ಯರಾದ ಚಿನ್ನ ವೆಂಕಟ, ಆರ್.ಮಾದೇವ. ಸಿಂಗನಲ್ಲೂರು ರಾಜಣ್ಣ ಹಾಜರಿದ್ದರು.