ವಿಕಲ ಚೇತನ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ

ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ್ ಸಲಹೆ
ಚಾಮರಾಜನಗರ: ವಿಕಲಚೇತನ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಜೊತೆಗೆ ಸರ್ಕಾರದ ಸವಲತ್ತು ಸದ್ಬಳಕೆ ಮಾಡಿಕೊಂಡು ಮುಖ್ಯವಾಹಿನಿ ಬರಬೇಕು. ವಿಶೇಷ ತರಬೇತಿ ಹಾಗೂ ಶಿಕ್ಷಣ ದೊರೆತಾಗ ನಿಮ್ಮೆಲ್ಲರ ಅಲೋಚನ ಶಕ್ತಿಯೇ ಬದಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ್ ತಿಳಿಸಿದರು.

ನಗರದ ಹೊರವಲಯದಲ್ಲಿ ಮರಿಯಾಲದ ಜೆಎಸ್‌ಎಸ್ ರುಡ್‌ಸೆಟ್‌ನಲ್ಲಿ ಮಾರ್ಗದರ್ಶಿ ವಿಕಲಚೇತನರ ಸ್ವಯಂ ಸೇವಾ ಸಂಸ್ಥೆ, ಶಾಲಾ ಶಿಕ್ಷಣ ಇಲಾಖೆ, ವಿಕಲಚೇತನರ ಹಾಗು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ಎರಡು ದಿನಗಳ ಕಾಲ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ಆಯೊಜನೆ ಮಾಡಿದ್ದ ಕೆರಿಯರ್ ಗೈಡೆನ್ಸ್ ಮತ್ತು ಬ್ರಿಡ್ಜ್ ಕೋರ್ಸ್ ಕಾರ್ಯಾಗಾರ ವನ್ನು ಉದ್ಗಾಟಿಸಿ ಅವರು ಮಾತನಾಡಿದರು.

ಸಾಮಾನ್ಯ ಮಕ್ಕಳಂತೆ ವಿಕಲಚೇತನ ಮಕ್ಕಳನ್ನು ಕಲಿಕೆಯಲ್ಲಿ ಒಂದೇ ಎನ್ನಲು ಕಷ್ಟ. ಅವರ ಕಲಿಕೆ ಮಟ್ಟ ಗ್ರಹಿಕೆ ಶಕ್ತಿ ಕಡಿಮೆ ಇರುತ್ತದೆ. ಇದರಿಂದ ಅವರೊಂದಿಗೆ ಸ್ಪರ್ಧೆ ಮಾಡಲು ಕಷ್ಟವಾಗುತ್ತದೆ. ಇಂಥ ಮಕ್ಕಳನ್ನು ಗುರುತಿಸಿ ಪ್ರತ್ಯೇಕವಾಗಿ ಅವರಿಗೆ ವಿಶೇಷ ತರಗತಿಗಳನ್ನು ನಡೆಸಿ, ಆ ಮಕ್ಕಳಲ್ಲಿಯು ಸಹ ನಾನು ರ್‍ಯಾಂಕ್ ಪಡೆದುಕೊಳ್ಳುತ್ತೇನೆ ಎಂಬ ಅತ್ಮವಿಶ್ವಾಸವನ್ನು ಮೂಡಿಸುವಲ್ಲಿ ಈ ಕಾರ್ಯಗಾರ ಬಹಳ ಉಪಯುಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ವಸತಿ ಸಹಿತ ನಡೆಯುವ ಕಾರ್ಯಾಗಾರವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಂಪನ್ಮೂಲ ವ್ಯಕ್ತಿಗಳು ಕಲಿಕೆ ಗುಣಮಟ್ಟ ಯಾವ ರೀತಿ ವ್ಯಾಸಂಗ ಮಾಡಬೇಕು. ಪರೀಕ್ಷೆಗೆ ತಯಾರು ಆಗುವುದು ಹೇಗೆ ಎಂಬ ಕುರಿತು ನಿಮ್ಮೆಲ್ಲರಿಗೂ ಮಾಹಿತಿ ನೀಡಲಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರರಾಜೇ ಆರಸ್ ಮಾತನಾಡಿ, ವಿಕಲಚೇತನ ಮಕ್ಕಳಲ್ಲಿ ಬಹಳಷ್ಟು ಪ್ರತಿಭಾವಂತ ಮಕ್ಕಳು ಇದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ತಿಳಿವಳಿಕೆ ಮೂಡಿಸಿದರೆ ಎಲ್ಲಾ ರಂಗದಲ್ಲಿಯು ಯಶಸ್ಸು ಸಾಧಿಸಲಿದ್ದಾರೆ. ಈ ನಿಟ್ಟಿನಲ್ಲಿ ಮಾರ್ಗದರ್ಶಿ ವಿಕಲಚೇತನರ ಸ್ವಯಂ ಸೇವಾ ಸಂಸ್ಥೆ ಮಾಡುತ್ತಿರುವ ಸತ್ಕಾರ್ಯಗಳು ಯಶಸ್ವಿಯಾಗಲಿ ಎಂದು ಶುಭ ಕೋರಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸುರೇಶ್ ಮಾತನಾಡಿ, ವಿಕಲಚೇತನ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ವಿಶೇಷ ಅನುದಾನವನ್ನು ನೀಡುತ್ತಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತಯಾರಾಗುತ್ತಿರುವ ತಾವೆಲ್ಲರು ಶಾಲಾ ಹಂತದಲ್ಲಿ ಕಲಿಯುವ ಜೊತೆಗೆ ಇಂಥ ಕಾರ್ಯಗಾರದಲ್ಲಿ ಭಾಗವಹಿಸಿ, ಹೆಚ್ಚಿನ ಜ್ಞಾನವನ್ನು ಹೊಂದಬೇಕು. ಬಳಿಕ ವೃತ್ತಿ ಪರ ಶಿಕ್ಷಣ, ವಾಣಿಜ್ಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರೆ, ಇಲಾಖೆಯಿಂದಲು ನಿಮ್ಮೆಲ್ಲರಿಗೂ ಶೇ. ೫ ರಷ್ಟು ಮೀಸಲಾತಿ ಸೌಲಭ್ಯ ಇರುತ್ತದೆ ಎಂದರು.

ಮಾರ್ಗದರ್ಶಿ ವಿಕಲಚೇತನರ ಸ್ವಯಂ ಸೇವಾ ಸಂಸ್ಥೆಯ ನಿರ್ದೇಶಕ ರಾಜಣ್ಣ ಪ್ರಸ್ತಾವಿಕವಾಗಿ ಮಾತನಾಡಿ, ಮಾರ್ಗದರ್ಶಿ ಸಂಸ್ಥೆಯ ವಿಕಲ ಚೇತನ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಶ್ರಮಿಸುತ್ತಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಬಹಳಷ್ಟು ಮಕ್ಕಳು ಫೇಲ್ ಆಗಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದರು. ಇದನ್ನುರಿತು ಈ ಮಕ್ಕಳ ಶಿಕ್ಷಣ ಮಟ್ಟವನ್ನು ಸುಧಾರಿಸಲು ಕಾರ್ಯಗಾರವನ್ನು ನಡೆಸಿ, ಪರೀಕ್ಷೆ ಎದುರಿಸುವುದ ಹೇಗೆ. ಯಾವ ರೀತಿ ಉತ್ತರ ಬೇಕು. ಪ್ರಶ್ನೆ ಪತ್ರಿಕೆಗಳನ್ನು ಓಧಿ ಅರ್ಥೈಯಿಸಿಕೊಂಡು ಉತ್ತರಿಸುವ ಮಾದರಿಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಮನದಟ್ಟು ಮಾಡಿಸುತ್ತಾ ಬಂದಿದ್ದೇವೆ. ಇದರ ಪರಿಣಾಮ ಶೇ. ೮೬ ರಷ್ಟು ವಿಕಲಚೇತನ ಮಕ್ಕಳು ಉತ್ತೀರ್ಣರಾಗತ್ತಾ ಬಂದಿವೆ. ಅಲ್ಲದೇ ಅವರಿಗೆ ಬ್ರಿಡ್ಜ್ ಕೋರ್ಸ್‌ಗಳ ಬಗ್ಗೆ ಮಾಹಿತಿ ನೀಡಿದ್ದರಿಂದ ಇಂದು ಕಲಾ ವಿಭಾಗಕ್ಕೆ ದಾಖಲಾಗುತ್ತಿದ್ದ ಮಕ್ಕಳು ವಾಣಿಜ್ಯ, ವಿಜ್ಙಾನ ಹಾಗೂ ವೃತ್ತಿಪರ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಗಾರಕ್ಕೆ ಜಿಲ್ಲೆಯ ೫ ತಾಲೂಕುಗಳಿಂದ ೭೮ಕ್ಕು ಹೆಚ್ಚು ವಿಕಲಚೇತನ ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದರು. ತುಮಕೂರಿನ ಸಹಾಯಕ ಪ್ರಾಧ್ಯಾಪಕ ನಾಗರಾಜು ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ಯಾರ್ಥಿಗಳಿಗೆ ಗೈಡ್ ಮಾಡಿದರು. ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಲೀನಾಕುಮಾರಿ, ಕವಿತಾ, ಶಿಕ್ಷಣ ಇಲಾಖೆಯ ಬಿಐಇಆರ್‌ಟಿಗಳಾದ ಮಧು ಕಾಗಲವಾಡಿ, ಪ್ರಿಯದರ್ಶಿನಿ, ಮಮತಾ, ಲೀಲಾವತಿ, ಸಂಸ್ಥೆಯ ಕ್ಷೇತ್ರಾ ವಲಯಾಧಿಕಾರಿ, ಕಿರಣ್, ಕಲ್ಯಾಣಿ, ಷರೀಪ್, ಅಭಿಷೇಕ್, ಸಂಯೋಜಕರಾದ ಕೋಮಲ, ಪುಷ್ಪ, ಜ್ಯೋತಿ, ಹಂಸವೇಣಿ, ಸವಿತಾ, ನಾಗರತ್ನ, ಉಮೇಶ, ಅಬಿಬಾ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *