ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ ; ನಿವಾಸಿಗೆ ಸಾಂತ್ವನ
ಚಾಮರಾಜನಗರ: ನಗರದ ೧೬ ನೇ ವಾರ್ಡಿನ ಉಪ್ಪಾರ ಬಡಾವಣೆಯ ಮನೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್ ಸಂಭವಿಸಿ ಮನೆಯ ಗೃಹೋಪಯೋಗಿ ವಸ್ತುಗಳು ಭಸ್ಮವಾಗಿವೆ.
ಬಡಾವಣೆ ನಿವಾಸಿ ಸಾಕಮ್ಮ ಸಿದ್ದಶೆಟ್ಟಿ ಎಂಬವರ ಮನೆಯೇ ವಿದ್ಯುತ್ ಶಾರ್ಟ್ ಸರ್ಕಿಟ್ಗೆ ಒಳಗಾಗಿದ್ದು, ಮನೆಯಲ್ಲಿದ್ದ ಟಿವಿ, ಬಟ್ಟೆ, ಅಡುಗೆ ಪರಿಕರ. ಮೇಜು. ,ಕುರ್ಚಿ ಭಸ್ಮವಾಗಿವೆ.
ಸ್ಥಳಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿನೀಡಿ, ನಿವಾಸಿಗೆ ಸಾಂತ್ವನ ಹೇಳಿದರು. ಇದೇವೇಳೆ ವೈಯಕ್ತಿಕ ಪರಿಹಾರ ವಿತರಿಸಿದರು.
