ಶಾಸಕ ಗಣೇಶಪ್ರಸಾದ್ ಹುಟ್ಟಹಬ್ಬ : ಅಭಿಮಾನಿಗಳಿಂದ ಕೆಬ್ಬೇಪುರ ಸರ್ಕಾರಿ ಶಾಲೆ ಮಕ್ಕಳಿಗೆ ತಟ್ಟೆ ಲೋಟ ವಿತರಣೆ

ಚಾಮರಾಜನಗರ: ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್.ಎಂ. ಗಣೇಶ್‍ಪ್ರಸಾದ್ ಅವರ 39ನೇ ಹುಟ್ಟುಹಬ್ಬದ ಅಂಗವಾಗಿ ಕ್ಷೇತ್ರದ ಕೆಬ್ಬೇಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ತಟ್ಟೆ. ಲೋಟ ಹಾಗೂ ಮಧ್ಯಾಹ್ನ ಉಪಹಾರವನ್ನು ಅವರ ಅಭಿಮಾನಿ ಬಳಗದವರು ನೀಡಿ, ನೆಚ್ಚಿನ ಶಾಸಕರಿಗೆ ಶುಭ ಕೋರಿದರು.

ಗ್ರಾಮದ ಮುಖಂಡ ಹರೀಶ್ ಮತ್ತು ಸ್ನೇಹಿತರು ಮಧ್ಯಾಹ್ನ ಶಾಸಕರ ಹುಟ್ಟು ಹಬ್ಬದ ಪ್ರಯುಕ್ತ ಮಕ್ಕಳಿಗೆ ಉಪಹಾರ ವ್ಯವಸ್ಥೆ ಮಾಡುವ ಜೊತೆಗೆ 60ಕ್ಕು ಹೆಚ್ಚು ಮಕ್ಕಳಿಗೆ ಉಚಿತವಾಗಿ ತಟ್ಟೆ, ಲೋಟಗಳನ್ನು ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಬ್ಬೇಪುರ ಹರೀಶ್ ಅವರು, ನಮ್ಮ ಕ್ಷೇತ್ರದ ಶಾಸಕರಾದ ಯುವ ನೇತಾರ ಎಚ್.ಎಂ. ಗಣೇಶ್ ಪ್ರಸಾದ್ ಅವರು ತಂದೆಯವರ ಹಾದಿಯಲ್ಲಿಯೇ ಸಾಗುತ್ತಿದ್ದಾರೆ. ಜನಾನುರಾಗಿಯಾಗಿದ್ದು, ಬಹಳ ಸರಳ ಮತ್ತು ಸಜ್ಜನಿಕೆವುಳ್ಳವರು. ಇತ್ತೀಚಿನ ದಿನಗಳಲ್ಲಿ ಗ್ರಾ.ಪಂ. ಸದಸ್ಯರಾದವರು ತಮ್ಮ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಬೇಕೆಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ. ಆದರೆ, ಇದಕ್ಕೆ ಹೊರತಾಗಿ ನಮ್ಮ ಶಾಸಕರು ಹುಟ್ಟು ಹಬ್ಬದ ದಿನ ನಮ್ಮ ಕ್ಷೇತ್ರದ ಮುಖಂಡರು ಹಾಗೂ ಅಭಿಮಾನಿಗಳು ಹಾರ ತೂರಾಯಿ, ಕೇಕ್‍ಗಳನ್ನು ತಂದು ಕತ್ತರಿಸಿ, ಅಡಂಬರ ಮಾಡುವ ಜೊತೆಗೆ ಹಣ ಪೋಲ್ ಮಾಡುವುದು ಬೇಡ. ಇದೇ ಹಣವನ್ನು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಬಡ ಮಕ್ಕಳ ಅಭಿವೃದ್ದಿಗೆ ಬಳಸಿ, ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದರೆ, ನನ್ನನ್ನು ಅಭಿನಂದಿಸಿದಂತೆ ಎಂದು ಕರೆ ನೀಡುವ ಮೂಲಕ ಸೇವಾ ಮನೋಭಾವನೆಯನ್ನು ತೋರಿಸಿಕೊಟ್ಟಿದ್ಧಾರೆ. ಅವರ ಪ್ರೇರಣೆಯಿಂದ ಶಾಲೆಯ ಮಕ್ಕಳ ಶಿಕ್ಷಣಕ್ಕೆ ನಾವೆಲ್ಲರು ಸೇರಿ ಒತ್ತು ನೀಡುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಆರ್. ಉಮೇಶ್, ಕೆ.ಬಿ. ನಾಗೇಶ್, ಎಂ.ಪಿ. ಮಹದೇವಸ್ವಾಮಿ, ಗಿರೀಶ್, ಚೆಲುವರಾಜು, ಮುಖ್ಯ ಶಿಕ್ಷಕ ಹರೀಶ್, ಸಹ ಶಿಕ್ಷಕರು, ಹರೀಶ್ ಅವರ ಪುತ್ರರಾದ ಅಭಿಷೇಕ್‍ದಾಸ್, ವರುಣ್‍ಶೆಟ್ಟಿ ಹಾಗೂ ಗ್ರಾಮಸ್ಥರು ಇದ್ದರು.

ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್.ಎಂ. ಗಣೇಶ್‍ಪ್ರಸಾದ್ ಅವರ 39ನೇ ಹುಟ್ಟುಹಬ್ಬದ ಅಂಗವಾಗಿ ಕ್ಷೇತ್ರದ ಕೆಬ್ಬೇಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 60ಕ್ಕು ಹೆಚ್ಚು ಮಕ್ಕಳಿಗೆ ಅವರ ಅಭಿಮಾನಿಗಳಾದ ಹರೀಶ್ ಮತ್ತು ಸ್ನೇಹಿತರು ತಟ್ಟೆ. ಲೋಟ ಹಾಗೂ ಮಧ್ಯಾಹ್ನ ಉಪಹಾರವನ್ನು ನೀಡಿ, ನೆಚ್ಚಿನ ಶಾಸಕರಿಗೆ ಶುಭ ಕೋರಿದರು.

Leave a Reply

Your email address will not be published. Required fields are marked *