ಬಿಜೆಪಿ ಕಚೇರಿಯಲ್ಲಿ ಸಾವಿತ್ರಿ ಬಾಪುಲೆ ಜಯಂತಿ ಅಚರಣೆ
ಚಾಮರಾಜನಗರ: ದೀನ, ದಲಿತರು ಹಾಗು ಶೋಷಿತ ಸಮುದಾಯ ಮಕ್ಕಳು ಹಾಗು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿ ಬಾಪುಲೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಮೂಡ್ನಾಕೂಡು ಪ್ರಕಾಶ್ ಬಣ್ಣಿಸಿದರು.
ನಗರದ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ದಿಂದ ನಡೆದ ಅಕ್ಷರ ಮಾತೆ ಸಾವಿತ್ರಿ ಬಾ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಬಾಪುಲೆ ಅವರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸಾವಿತ್ರಿ ಬಾಫುಲೆ ಅವರು ಆ ಕಾಲಘಟ್ಟದಲ್ಲಿ ಶೋಷಿತರು ಮತ್ತು ಮಹಿಳೆಯರಿಗೆ ಇದ್ದ ಶಿಕ್ಷಣ ಮತ್ತು ಶೈಕ್ಷಣಿಕ ನಿಬರ್ಂಧಗಳನ್ನು ತೊಡೆದು ಹಾಕಿ ನಿರ್ಭಿತಿಯಿಂದ ವಿದ್ಯಾವಂತರಾಗಲು ಶ್ರಮಿಸಿದ ಭಾರತೀಯ ಶಿಕ್ಷಣ ಮಾತೆ. ವಿದ್ಯಾಭ್ಯಾಸದಿಂದ ವಂಚಿತರಾಗಿದ್ದ ಸಮುದಾಯಕ್ಕೆ ಅಕ್ಷರ ಕಲಿಸಲು ಹೊರಟ ಸಾವಿತ್ರಿ ಬಾ ಫುಲೆಯವರಿಗೆ ಪಟ್ಟಭದ್ರ ಹಿತಾಸಕ್ತಿಗಳು ತಡೆವೊಡ್ಡಿದರು. ಯಾವುದೇ ಬೆದರಿಕೆಗಳಿಗೆ ಜಗ್ಗದೇ ಆ ಮಕ್ಕಳಿಗೆ ಶಿಕ್ಷಣ ಕಲಿಸಿದ ಧೀಮಂತೆ ನಾಯಕಿ ಎಂದರು.
ಅವರು ಬೀದಿಯಲ್ಲಿ ಹೋಗುತ್ತಿದ್ದಾಗ ಕೆಸರು, ಸಗಣಿ ಎರಚಿ ಅವಮಾನ ಮಾಡಿದರೂ ಎದೆಗುಂದದೆ ವಂಚಿತ ಸಮುದಾಯಗಳಿಗೆ ವಿದ್ಯಾರ್ಜನೆ ಮಾಡಿ, ಆ ಕಾಲದಲ್ಲಿ ಬಹಳಷ್ಟು ಮಕ್ಕಳು ಶಿಕ್ಷಣವನ್ನು ಪಡೆಯುವಂತೆ ಮಾಡಿದರು. ಅವರ ಕುಟುಂಬಗಳು ಶಿಕ್ಷಣ ಕಲಿಯುವಂತೆ ಮಾಡಿದರು. ಅವರು ಅಂದು ನೀಡಿದ ವಿದ್ಯಾದಾನ ಬಹಳಷ್ಟು ಮಂದಿ ಬಾಳಿನಲ್ಲಿ ನಂದಾದೀಪವಾಗಿದೆ. ಇಂಥ ಮಹಾನ್ ಸಾಧಕಿ ಅಕ್ಷರ ಮಾತೆ ಸಾವಿತ್ರೆಬಾಪುಲೆ ಅವರ ಜಯಂತಿ ಆಚರಿಸುವ ಪುಣ್ಯ ನಮ್ಮದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ ವೇಣುಗೋಪಾಲ್, ಗ್ರಾಮಾಂತರ ಮಂಡಲದ ಅಧ್ಯಕ್ಷ ಮುತ್ತಿಗೆ ಮೂರ್ತಿ, ಮುಖಂಡರಾದ ಹೊಂಗನೂರು ಮಹದೇವಸ್ವಾಮಿ, ಶುಭೋದಯ ಸಿದ್ದರಾಜು, ದಡದಹಳ್ಳಿ ಶಂಕರ್, ಸಿದ್ದಯ್ಯನಪುರ ಶಿವರಾಜು, ಕೂಸಣ್ಣ, ಸಾಣೆಗಾಲ ಮಹೇಶ್ ಮೊದಲಾಧವರು ಇದ್ದರು.