ಚಾಮರಾಜನಗರ: ಮರಿಯಾಲ ಶ್ರೀ ಮುರುಘರಾಜೇಂದ್ರಸ್ವಾಮಿ ಮಠಾಧ್ಯಕ್ಷರಾಗಿದ್ದ ಪೂಜ್ಯ ಶ್ರೀ ಮಹಾಂತಸ್ವಾಮಿಗಳ 86ನೇ ಜಯಂತೋತ್ಸವನ್ನು ಮರಿಯಾಲದ ಶ್ರೀಮಠದ ಅವರಣದಲ್ಲಿ ಆಚರಣೆ ಮಾಡಲಾಯಿತು.
ಪೂಜ್ಯರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಶ್ರೀಗಳ ಭಾವಚಿತ್ರಕ್ಕೆ ಶ್ರೀಮಠದ ಅಧ್ಯಕ್ಷ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಪರಮಪೂಜ್ಯರಾದ ಶ್ರೀ ಶಿವಾನುಭವ ಭೂಷಣ ವಿದ್ವಾನ್ ಶ್ರೀ ಮಹಾಂತ ಸ್ವಾಮಿಗಳವರ 86ನೇ ವರ್ಷದ ಜನ್ಮ ದಿನೋತ್ಸವವನ್ನು ಭಕ್ತಿ ಪೂರ್ವಕ ನಮನ ಸಲ್ಲಿಸಿ, ಪೂಜ್ಯರ ಜೀವನ ಸಾಧನೆ ಹೋರಾಟ, ನೇರ ನಡೆ ನುಡಿ, ಬಸವ ತತ್ವದ ಆಚರಣೆ ಶೈಕ್ಷಣಿಕ , ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳ ಕುರಿತು ಗುರು ನಮನ ಸಲ್ಲಿಸಿದರು.
ಶ್ರೀ ಮಹಾಂತ ಸ್ವಾಮಿಗಳವರು ಅಕ್ಟೋಬರ್ 2ರ 1937 ರಲ್ಲಿ ತೇರಂಬಳ್ಳಿ ಗ್ರಾಮದಲ್ಲಿ ಜನಿಸಿದರು. 1979 ಮರಿಯಾಲ ಮಠದ ಪೀಠಾಧಿಪತಿಗಳಾಗಿ ಶ್ರೀಮಠದ ಏಳಿಗೆ ಹಾಗೂ ಶ್ರೀ ಮುರುಗರಾಜೇಂದ್ರ ಸ್ವಾಮಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದ್ದರು.
ಪೂರ್ವ ಪ್ರಾಥಮಿಕದಿಂದ ಪದವಿಪೂರ್ವ ಶಿಕ್ಷಣದವರೆಗೆ ಉತ್ತಮ ಶಿಕ್ಷಣವನ್ನು ನೀಡಿ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿಯನ್ನು ಬರೆದರು. ಗ್ರಾಮೀಣ ಪ್ರದೇಶದ ಸಾವಿರಾರು ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಹಗಲಿರುಳು ಜ್ಞಾನಾನ್ನ ದಾಸೋಹದ ಜೋಳಿಗೆಯನ್ನಿಡಿದು ಅನ್ನ, ಅರಿವು ,ಆಶ್ರಯಗಳನ್ನು ನೀಡಿ ಶೈಕ್ಷಣಿಕ ಕ್ರಾಂತಿಯನ್ನು ಬೆಳಗಿದ ಮಹಾಮಹಿಮರು, ಕಾಯಕಯೋಗಿಗಳು ಎಂದು ಅವರ ಸೇವೆಯನ್ನು ಸ್ಮರಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಯ ನೌಕರವರ್ಗ, ವಿದ್ಯಾರ್ಥಿಗಳು ,ಮರೆಯಲ ಗ್ರಾಮಸ್ಥರು ಅಕ್ಕಪಕ್ಕದ ಗ್ರಾಮದ ಭಕ್ತರು ಭಾಗವಹಿಸಿದ್ದರು.