ಶ್ರೀ ವಾಗ್ದೇವಿ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಸರ್ವಸದಸ್ಯರ 22ನೇ ವಾರ್ಷಿಕ ಮಹಾಸಭೆ

ಮೈಸೂರು: ನಗರದ ಶ್ರೀ ವಾಗ್ದೇವಿ ಸೌಹಾರ್ದ ಪತ್ತಿನ ಸಹಕಾರಿ ಸಂಘ (ನಿ)ದ ೨೨ನೇ ವರ್ಷದ (೨೦೨೨-೨೩) ಸರ್ವಸದಸ್ಯರ ಮಹಾಸಭೆಯು ದಿನಾಂಕ ೧೩.೦೮.೨೦೨೩ ರ ಭಾನುವಾರ ನಡೆಯಿತು. ಜೆಎಲ್‌ಬಿ ರಸ್ತೆಯಲ್ಲಿರುವ ಆರಾಧ್ಯ ಮಹಾಸಭಾದ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಸಹಕಾರಿಯ ಅಧ್ಯಕ್ಷ ಎಚ್.ಎನ್.ನವೀನ್ ಅವರು ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ೨೨ ವರ್ಷಗಳಿಂದ ಸಹಕಾರಿ ಸದಸ್ಯರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿರುವ ಸಹಕಾರಿ ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ಸಹಕಾರಿ ಸದಸ್ಯರ ಷೇರು ಬಂಡವಾಳಕ್ಕೆ ಶೇಕಡಾ ೩ ರಷ್ಟು ಡಿವಿಡೆಂಡ್ ಅನ್ನು ಕಟ್ಟಡ ನಿಧಿಗೆ ನೀಡಲು ಸದಸ್ಯರುಗಳ ಒಪ್ಪಿಗೆಯನ್ನು ಅಂಗೀಕರಿಸಲಾಯಿತು. ಸಂಘದ ೧೦ ಹಿರಿಯ ಸಹಕಾರಿ ಸದಸ್ಯರುಗಳಿಗೆ ಮತ್ತು ಪ್ರಮಾಣಿಕವಾಗಿ ಸಾಲ ಮರುಪಾವತಿಸಿದ ೧೦ ಸಂಘದ ಸದಸ್ಯರಿಗೆ ಸಭೆಯಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ನಂತರ ೧೦ನೇ ತರಗತಿ ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಉನ್ನತ ಅಂಕಗಳಿಸಿದ ಸದಸ್ಯರ ಮಕ್ಕಳುಗಳಿಗೆ ಪ್ರತಿಭಾ ಪುರಸ್ಕಾರನ್ನು ಹಮ್ಮಿಕೊಳ್ಳಲಾಗಿತ್ತು.

ಪತ್ತಿನ ಸಹಕಾರಿಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಜೆ.ಎಸ್.ಸುನೀಲ್, ನಿರ್ದೇಶಕರಾದ ಚಿಕ್ಕಮ್ಮ ಬಸವರಾಜ್, ಸುದರ್ಶನ್, ಸರೋಜ ಚಂದ್ರಶೇಖರ್, ಸುಜಾತ ಎನ್.ಪ್ರದೀಪ್, ಆರ್.ಸಿ. ದಿಲೀಪ್, ಎಂ.ಬಸವರಾಜು, ಎಸ್.ಸೋಮಶೇಖರ, ಎಂ.ಭಾಗ್ಯ, ಜೆ.ಕೃಷ್ಣ, ಆರ್. ಸುರೇಂದ್ರ, ಕೆ.ಎನ್. ನಾಗರಾಜು ಮತ್ತು ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಕೆ.ಆರ್.ಶ್ರೀಹರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *