ಚಾಮರಾಜನಗರ: ಸಮನ್ವಯ ಶಿಕ್ಷಣದ ಕಾರ್ಯಕ್ರಮದಡಿಯಲ್ಲಿ ೨೦೨೩-೨೪ನೇ ಸಾಲಿಗೆ ಪ್ರಾಥಮಿಕ ಹಂತದ ಒಟ್ಟು ೬ ಹುದ್ದೆಗಳಿಗೆ ತಾತ್ಕಾಲಿಕವಾಗಿ ನೇರ ಗುತ್ತಿಗೆ ಆಧಾರದ ಮೇಲೆ ಬಿ.ಐ.ಇ.ಆರ್.ಟಿ.ಗಳ ಸೇವೆಯನ್ನು ತಾಲೂಕುವಾರು ಆಯ್ಕೆ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಗುಂಡ್ಲುಪೇಟೆ-೨, ಹನೂರು-೧, ಕೊಳ್ಳೇಗಾಲ-೨ ಮತ್ತು ಯಳಂದೂರು-೧ ಸೇರಿದಂತೆ ಒಟ್ಟು ೬ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸಮನ್ವಯ ಶಿಕ್ಷಣದಲ್ಲಿ ಡಿ.ಇಡಿ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಸಮನ್ವಯ ಶಿಕ್ಷಣದಲ್ಲಿ (ಶ್ರವಣ ದೋಷ(ಹೆಚ್.ಐ) ಮತ್ತು ದೃಷ್ಠಿ ದೋಷ(ವಿ.ಐ) ವಿಶೇಷ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳು ಮೂಲ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಪ್ರಾಥಮಿಕ ಹಂತ (ಪೌಂಡೇಷನಲ್ ಸ್ಟೇಜ್ ೧ ರಿಂದ ೨), ಪ್ರೀಪರೇಟರಿ ಸ್ಟೇಜ್(೩ ರಿಂದ ೫) ೧ನೇ ತರಗತಿಯಿಂದ ೫ನೇ ತರಗತಿವರೆಗಿನ ಮಕ್ಕಳಿಗೆ ಭೋದಿಸಬೇಕು. ಆರ್.ಸಿ.ಐ ಮತ್ತು ಸಿ.ಆರ್.ಆರ್ ಹೊಂದಿರುವ ಶಿಕ್ಷಣ ಸಂಸ್ಥೆಯಿಂದ ವಿಶೇಷ ಶಿಕ್ಷಣದ ಡಿ.ಎಡ್ ವಿದ್ಯಾರ್ಹತೆ ಪಡೆದಿರಬೇಕು ಅಥವಾ ಡಿ.ಇಡಿ ನೊಂದಿಗೆ ಆರ್.ಸಿ.ಐ ನಿಂದ ಅಂಗೀಕೃತವಾದ ಸಂಸ್ಥೆಯಲ್ಲಿ ಡಿ.ಇಡಿ ನೊಂದಿಗೆ ಸರ್ಟಿಫಿಕೆಟ್/ಡಿಪ್ಲೋಮಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಸಂಬಂಧಿಸಿದ ಕ್ಷೇತ್ರದಲ್ಲಿ ೬ ತಿಂಗಳ ಬೋಧನ ಅನುಭವ ಇರಬೇಕು.
ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸೆಪ್ಟೆಂಬರ್ ೧೫ರೊಳಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿಗಳ ಕಚೇರಿಗೆ (ರೂ.ನಂ. ೨೦೫) ಸಲ್ಲಿಸಬೇಕು ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಹಾಗೂ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.