ಚಾಮರಾಜನಗರ: ಸೌಹಾರ್ದ ಸಹಕಾರಿ ದಿನಾಚರಣೆಯ ಪ್ರಯುಕ್ತ ತಾಲೂಕಿನ ಮರಿಯಾಲ ಶ್ರೀ ಮುರುಘರಾಜೇಂದ್ರಸ್ವಾಮಿ ಸೌಹಾರ್ದ ಸಹಕಾರಿ ನಿಯಮಿತದಿಂದ ಸೌಹಾರ್ದ ಸಹಕಾರಿ ಧ್ವಜಾರೋಹಣ ಹಾಗೂ ನೂತನ ವರ್ಷದ ಕ್ಯಾಲೆಂಡರ್ ಅನ್ನು ಶ್ರೀ ಮಠದ ಅಧ್ಯಕ್ಷರು ಹಾಗೂ ಸಹಕಾರಿಯ ಸಂಸ್ಥಾಪಕರಾದ ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ ನೆರವೇರಿಸಿದರು.
ಸಂಸ್ಥೆಯ ಅವರಣದಲ್ಲಿ ಸಹಕಾರಿ ಧ್ವಜಾರೋಹಣ ನೇರವೇರಿಸಿದ ಬಳಿಕ ಸಂಘದ ನೂತನ 2024ರ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಹಕಾರ ತತ್ವದಡಿಯಲ್ಲಿ ಪರಸ್ಪರ ಸಹಕಾರದಿಂದ ಆರ್ಥಿಕ ಅಭಿವೃದ್ದಿ ಹೊಂದಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸೌಹಾರ್ದ ಸಹಕಾರಿ ಸಂಘವು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು,ಸಹಕಾರಿ ಬಂಧುಗಳು ಸಂಘದ ಸದಸ್ಯತ್ವನ್ನು ಪಡೆದುಕೊಳ್ಳುವ ಜೊತೆಗೆ ಸಾಲ ಸೌಲಭ್ಯಗಳನ್ನು ಪಡೆದು ಅರ್ಥಿಕವಾಗಿ ಅಭಿವೃದ್ದಿಯನ್ನು ಹೊಂದಬೇಕು ಎಂದರು.
ನೂತನ ವರ್ಷಗಳು ಸಹಕಾರಿ ಬಂಧುಗಳಿಗೆ ಯಶಸ್ಸು ನೀಡಲಿ. ತಮ್ಮೇಲ್ಲರ ಆಶಯಗಳು ಈಡೇರಿ, ಸಮೃದ್ದಿ ಜೀವನ ನಡೆಸುವಂತಾಗಲಿ ಎಂದು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಸೌಹಾರ್ದ ಸಹಕಾರ ಸಂಘದ ಗೌರವ ಅಧ್ಯಕ್ಷರಾದ ಶ್ರೀ ಕುಮಾರಸ್ವಾಮಿ, ಅಧ್ಯಕ್ಷ ಬಿ. ನಂಜುಂಡಸ್ವಾಮಿ, ಉಪಾಧ್ಯಕ್ಷ ಜಿ. ಪ್ರಸನ್ನ, ನಿರ್ದೇಶಕರಾದ ಪಿ. ಮಹದೇವಸ್ವಾಮಿ, ಹೆಚ್. ಆರ್. ಮಂಜು, ಶ್ರೀನಿವಾಸ್, ನಾಗೇಶ್, ಎಂ.ಆರ್. ಸ್ವಾಮಿ, ಸೀತಾಲಕ್ಷ್ಮಿ, ಶ್ವೇತಾ, ಕಾರ್ಯನಿರ್ವಾಹಕ ಅಧಿಕಾರಿ ಸೌಮ್ಯ ಹಾಗೂ ದಿನದರ್ಶಿಕೆ ಪ್ರಯೋಜಕರಾದ ಜಗದೀಶ್, ರವಿ, ದೀಪು, ವೀರಭದ್ರಸ್ವಾಮಿ ಇತರರು ಇದ್ದರು.