ಚಾಮರಾಜನಗರ: ಹಿರಿಯರ ಶುಭ ಹಾರೈಕೆಯೆ ಕಿರಿಯರಿಗೆ ಶ್ರೀರಕ್ಷೆ ಮತ್ತು ಶಕ್ತಿಯಾಗಿದೆ. ಹಿರಿಯರ ಮಾರ್ಗದರ್ಶನ ಸಲಹೆ, ಅನುಭವ ಸ್ಪೂರ್ತಿ, ಚೈತನ್ಯವನ್ನು ಯುವ ಪೀಳಿಗೆ ಆದರ್ಶವಾಗಿ ಇಟ್ಟುಕೊಂಡಾಗ ಉತ್ತಮ ಸಂಸ್ಕೃತಿ ಪರಂಪರೆ ಬೆಳೆದು ಕುಟುಂಬಗಳು ಶಾಂತಿಯಿಂದ ನೆಮ್ಮದಿಯಿಂದ ಬದುಕಲು ಸಾಧ್ಯವೆಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದಿ ಅಭಿಪ್ರಾಯ ಪಟ್ಟರು.

ಅವರು ಎಸ್ ಪಿ ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಕಲಾವೇದಿಕೆಯವರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಸಂದರ್ಭದಲ್ಲಿ ಹಿರಿಯರಿಗೆ ಗೌರವಿಸಿ ಮಾತನಾಡಿದರು.
ಪ್ರಾಚೀನ ಕಾಲದಲ್ಲೂ ಕುಟುಂಬದ ಹಿರಿಯರು ದೇವರ ಸಮಾನರೆಂಬ ನಂಬಿಕೆ ನಮ್ಮದು. ಅನೇಕ ಸಂಕಷ್ಟಗಳ ನಡುವೆಯೂ ಸಂಸ್ಕೃತಿ ಪರಂಪರೆಯ ಮೂಲಕ ಕುಟುಂಬದ ಗೌರವವನ್ನು ,ಪ್ರೀತಿ ,ವಿಶ್ವಾಸವ ನಂಬಿಕೆಯನ್ನು ಯುವಕರಿಗೆ ಮಾರ್ಗದರ್ಶನವನ್ನು ನೀಡುವ ಹಿರಿಯರು ಮನೆಯ ಅಮೂಲ್ಯ ರತ್ನವಿದ್ದಂತೆ. ಹಿರಿಯರ ನಂಬಿಕೆಯ ಮೇಲೆ ಸಾಗಿದಾಗ ಕುಟುಂಬದ ಸರ್ವ ಸದಸ್ಯರು ತೃಪ್ತಿ ಪಡಬಹುದು. ಹಿರಿಯರಿಗೆ ಗೌರವ ಸಲ್ಲಿಸುವ ಅವರ ಕಷ್ಟಗಳಿಗೆ ಸ್ಪಂದಿಸುವ ಅವರ ಮಾತುಗಳಲ್ಲಿ ವಿಶ್ವಾಸವಿಡುವ ಗುಣವನ್ನು ಬೆಳೆಸಿಕೊಂಡಾಗ ಉತ್ತಮ ನಾಗರಿಕ ಸಮಾಜ ನಿರ್ಮಾಣವಾಗುತ್ತದೆ ಎಂದು ಋಗ್ವೇದಿ ತಿಳಿಸಿದರು.
ಉದ್ಘಾಟನೆಯನ್ನು ಹಿರಿಯ ಸಮಾಜ ಸೇವಕರಾದ ಪರಮೇಶ್ವರಪ್ಪ ಹಾಗೂ ಕನ್ನಡ ಮಹಾಸಭಾದ ರಾಜ್ಯಾಧ್ಯಕ್ಷ ಶ್ರೀನಿವಾಸ ಗೌಡ ಉದ್ಘಾಟಿಸಿ ಮಾತನಾಡಿದರು. ವಿಶ್ವ ಹಿರಿಯ ನಾಗರಿಕ ದಿನಾಚರಣೆಯ ಮೂಲಕ ಚಾಮರಾಜನಗರದ ಹಿರಿಯರನ್ನು ಗೌರವಿಸುವ ಮೂಲಕ ಪ್ರೀತಿಯ ಸಮಾರಂಭ ಮಾಡಿರುವುದು ತುಂಬಾ ಸಂತೋಷವಾಗಿದೆ.ಅವರ ಸೇವೆ ನಮಗೆ ದಾರಿದೀಪವಾಗಿದೆ ಎಂದರು.
ಸಮಾಜ ಸೇವಕರಾದ ಹುಚ್ಚೇಗೌಡರು ,ಪುರೋಹಿತರಾದ ಶ್ರೀಕಂಠಯ್ಯ ನವರು, ನಿವೃತ್ತ ಉಪನ್ಯಾಸಕರಾದ ವೀರೇಶ್ವರ್, ಹಿರಿಯ ರಂಗಭೂಮಿ ಕಲಾವಿದ ಘಟಮ್ ಕೃಷ್ಣ ರವರನ್ನು ಗೌರವಿಸುವ ಮೂಲಕ ಅವರ ಆಶೀರ್ವಾದವನ್ನು ಪಡೆಯಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್ ಪಿ ಬಿ ಕಲಾವೇದಿಕೆಯ ಗೌರವ ಅಧ್ಯಕ್ಷರಾದ ಸುರೇಶ್ ಗೌಡರವರು ಮಾತನಾಡಿ ನಮ್ಮ ಸಂಸ್ಥೆ ಕಲಾವಿದರನ್ನು ಹಿರಿಯರನ್ನು ಗೌರವಿಸುವ ಮೂಲಕ ಹಿರಿಯರ ದಿನವನ್ನು ಆಚರಿಸಿದೆ. ಹಿರಿಯರನ್ನು ಪ್ರೀತಿಯಿಂದ ನೋಡೋಣ ಅವರ ಕಷ್ಟಗಳಿಗೆ ಸ್ಪಂದಿಸೋಣ. ಅದು ನಮ್ಮ ಧರ್ಮ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಚಳುವಳಿಗಾರರಾದ ಸುರೇಶ್ ವಾಜಪೇಯಿ , ಅಧ್ಯಕ್ಷರಾದ ಶಿವಣ್ಣ ದೈಹಿಕ ಶಿಕ್ಷಕರಾದ ಜೋಸೆಫ್, ಶಿವಮೂರ್ತಿ, ನಟರಾಜು, ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆಯ ಸತೀಶ್,ಬಂಗಾರ, ಎ ಎಲ್ ಮಂಜು, ಕಾಗಲವಾಡಿ ಗುರು, ಸಂತೋಷ, ಮಹೇಶ್ ಮುಂತಾದವರು ಇದ್ದರು.