ಚಾಮರಾಜನಗರ: ಜಿಲ್ಲೆಯಾದ್ಯಂತ 10 ವರ್ಷಗಳ ಪೂರ್ವದಲ್ಲಿ ಪಡೆದಿರುವ ಆಧಾರ್ ನೋಂದಣಿದಾರರು ನವೀಕರಿಸಿಕೊಳ್ಳುವಂತೆ ತಿಳಿಸಲಾಗಿದೆ.
ಆಧಾರ್ ನೋಂದಣಿ ಕಾರ್ಯವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಕಳೆದ 10 ವರ್ಷಗಳ ಪೂರ್ವದಲ್ಲಿ ಪಡೆದಿರುವ ವಿಶಿಷ್ಟ ಗುರುತಿನ ಸಂಖ್ಯೆಯ ಆಧಾರ್ ನವೀಕರಣ ಮಾಡಿಸಿಕೊಳ್ಳುವಂತೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ನಿರ್ದೇಶನ ನೀಡಿದೆ.
ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯಾದ್ಯಂತ 10 ವರ್ಷಗಳ ಪೂರ್ವದಲ್ಲಿ ಪಡೆದಿರುವ ಆಧಾರ್ ನೋಂದಣಿದಾರರು ವಿಳಾಸ ಪುರಾವೆ, ವ್ಯಕ್ತಿಯ ಗುರುತಿನ ಪುರಾವೆಗಳ ಜೊತೆಗೆ ಪ್ರಮುಖ ಮಾಹಿತಿಗಳನ್ನು ಸದ್ಯದ ದಾಖಲೆಗಳಿಗೆ ಅನುಗುಣವಾಗಿ ಉಚಿತವಾಗಿ ಡಿಸೆಂಬರ್ 3ರವರೆಗೆ https://myaadhaar.uidai.gov.inನಲ್ಲಿ ನವೀಕರಣ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.