ಬದುಕಿನ ಪಾಠ ಹೇಳುವ ಕಸ್ತೂರಿ ನಿವಾಸದ ಗೊಂಬೆ

ಕಲಿಕೆ ಎಂಬುದು ಕಲಿಯಲಾಗದ ಬ್ರಹ್ಮಾಂಡ. ದೇಹದಲ್ಲಿ ಜೀವ ಇರೋವರೆಗೂ ಒಂದಲ್ಲ ಒಂದು ಬಗೆಯಲ್ಲಿ ಕಲಿಕೆಗೆ ನಮ್ಮನ್ನು ನಾವು ಒಳಗು ಮಾಡಿಕೊಂಡೇ ಜೀವನವನ್ನು ಜೀವಂತಿಕೆಗೊಳಿಸಬೇಕು. ಒಂದು ತಪ್ಪು, ಒಂದು ಸನ್ನಿವೇಶ, ಒಂದುಸಂಗತಿ ಇಲ್ಲವೇ ಘಟನೆ, ಒಂದು ಸೋಲು ಕೂಡ ನಮಗೆ ಬದುಕಿನಲ್ಲಿ ಒಂದು ಮರೆಯಲಾಗದ ಪಾಠವನ್ನು ಬೋಧಿಸಿ ಕಲಿಯುವ ಮನಸಿಲ್ಲವಾದರೂ ಕಲಿಸಿ ನೀತಿಯನ್ನು ಹೇಳಿ ಬದುಕಿನ ಒಳ-ಹೊರಗನ್ನುಅರ್ಥೈಸಲು ಅನುವು ಮಾಡಿಕೊಡುತ್ತದೆ. ಅದಕ್ಕೆ ಬಲ್ಲವರು ಹೇಳುವುದು ಬದುಕಿನಲ್ಲಿ ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಸಾಗುವ ದಾರಿಯಲ್ಲಿ ಈ ಎರಡು ಜೊತೆಯಲ್ಲಿರುತ್ತವೆ. ಸೋಲು ಅನುಭವನ್ನುನೀಡಿದರೆ ಗೆಲುವು ಸಂತೋಷವನ್ನುಉಣಬಡಿಸುತ್ತದೆ. ಈ ಸೋಲು ಗೆಲುವಿನಿಂದಲುಕಲಿಯಬೇಕಾದ ಪಾಠ ನೂರಾರು, ಗೆದ್ದಾಗತಲೆತಗ್ಗಿಸಿನಡೆಯಬೇಕುವಿನೀತದಭಾವಕ್ಕಾಗಿ, ಸೋತಾಗತಲೆಎತ್ತಿನಡೆಯಬೇಕುಸೋಲೇನುಸಾವಲ್ಲಗೆಲುವಿಗೆಮತ್ತೊಂದುಅವಕಾಶ.ಹಾಗೆ ನೋಡಿದರೆ ಜೀವನದಲ್ಲಿ ಪ್ರತಿಯೊಂದು ವಸ್ತುವಿನಿಂದ. ವ್ಯಕ್ತಿಯಿಂದ ಒಂದಲ್ಲ ಒಂದು ರೀತಿಯ ಪಾಠವನ್ನು ಕಲಿಯುತ್ತೇವೆ. ಬೆಳಕು ನೀಡುವ ಸೂರ್ಯ, ಹರಿಯುವ ನದಿ, ಬೀಳುವ ಮಳೆ, ಪುಟಾಣಿ ಮಕ್ಕಳು, ಮನೆಯ ಹಿರಿಯರು ಹೀಗೆ ಎಲ್ಲರೂ ಒಂದಲ್ಲಒಂದ ರೀತಿಯ ನೀತಿಯನ್ನು ಹೇಳುವ ಗುರುಗಳೇಆಗಿರುತ್ತಾರೆ. ಅದಕ್ಕಾಗಿಯೇ ಪುಲಿಗೆರೆಸೋಮನಾಥನ ತನ್ನ ಸೋಮೇಶ್ವರ ಶತಕ ಎಂಬ ನೀತಿಮೋಥೆಯ ಕೃತಿಯು ಜ್ಞಾನವನ್ನು ಹೊಂದುವ ಮಾರ್ಗವನ್ನು ಹಾಗೂ ಲೋಕಾನುಭವದ ಅನರ್ಘ ಸಂಪತ್ತನ್ನುಗಳಿಸಿಕೊಳ್ಳುವನೀತಿಪಾಠವನ್ನು ಈ ಕೆಳಗಿನ ಸಾಲುಗಳು ಧ್ವನಿಸುತ್ತವೆ.
ಕೆಲವಂಬಲ್ಲವರಿಂದ ಕಲ್ಲು ಕೆಲವಂ, ಶಾಸ್ತ್ರಗಳಂಕೇಳುತು. ಕೆಲವು ಮಾಳ್ವವರಿಂದ ಕಂಡು ಕೆಲವರಿ ಸುಜ್ಞಾನದಿಂನೋಡುತು, ಕೆಲವ ಸಜ್ಜನ ಸಂಘದಿಂದಲರಿಯಲ್ಸರ್ವಜ್ಞನಪ್ಪಂನರಂ, ಹಲವು ಪಳ್ಳ ಸಮುದ್ರವೈಹರಹರಾಶ್ರೀಚೆನ್ನಸೋಮೇಶ್ವರಾ
ಕಲಿಕೆ ಎಂಬುದು ಹುಟ್ಟಿನಿಂದಚಟ್ಟದವರೆಗೆ, ಜನನದಿಂದಮರಣದವರೆಗೆ, ತೊಟ್ಟಿಲಿನಿಂದಚಟ್ಟದವರೆಗೆ ಎಂದು ನಿರ್ದಿಷ್ಟಪಡಿಸಿಗಡಿಕೊರೆದಂತೆ ಹೇಳಲಾಗದು. ಸಾಯುವ ಕೊನೆಯ ಕ್ಷಣದವರೆಗೂ ಕಲಿಕೆಯ ಕಾರ್ಯ ಸಾಗುತ್ತಲೇ ಇರುತ್ತದೆ. ಕೆಲವನ್ನುಬಲ್ಲವರಿಂದಕೆಲವನ್ನುಶಾಸ್ತ್ರಗ್ರಂಥಗಳಿಂದ, ಇನ್ನು ಕೆಲವನ್ನು ಅತ್ಯಂತ ನಿಚ್ಚಳವಾಗಿ ಪರಿಶುದ್ಧವಾಗಿ ಚೆನ್ನಾಗಿ ಒಂದು ಕೆಲಸವನ್ನು ಮಾಡುವದರಿಂದ, ಒಳ್ಳೆಯ ಸದ್ವಿಚಾರಗಳನ್ನುಅರಿತುಕೊಂಡಿರುವವರಿಂದ, ಉತ್ತಮರ-ಆದರ್ಶ ಸ್ನೇಹಿತರ ಸಂಘಪರಿವಾರದಿಂದ ಕಲಿತು ಸರ್ವಜ್ಞ ಅಂದರೆ ಎಲ್ಲ ವಿದ್ಯೆಗಳನ್ನು ಕಲಿತು ಪಾರಂಗತನಾದನು ಮಾತ್ರವೇ ಸರ್ವಜ್ಞ ಎಂದು ಕರೆಸಿಕೊಳ್ಳಲು ಸಾಧ್ಯ ಹನಿ ಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ ಎನ್ನುಂತೆ ಹಲವು ಹಳ್ಳಗಳು ಸೇರಿ ಸಮುದ್ರವಾಗುತ್ತವೆ ಹಾಗೆಯೇ ಹಲವು ಭಿನ್ನ ರೂಪ, ಸ್ವರೂಪ ವಿಶ್ವರೂಪದಭಾವಲಹರಿಯಲ್ಲಿ ಪ್ರತಿ ಕ್ಷಣದಲ್ಲಿ ಯಾವುದಾದರೂ ಯುಕ್ತವಾದ ಅನುಭವದ ಮಾಹಿತಿ, ಜ್ಞಾನವನ್ನು ಸಂಪಾದಿಸುತ್ತಲೇ ಬದುಕನ್ನು ಬಂಗಾರ ಮಾಡಿಕೊಂಡಾಗ ಬದುಕು ಸಾರ್ಥಕವಾಗುತ್ತದೆ.
ಬದುಕು ಒಂದು ಪಾಠಶಾಲೆಯು ಹೌದು, ಪಾಕಶಾಲೆಯು ಹೌದು ಜ್ಞಾನವೃದ್ಧಿಯಲಿತಿಳಿವಳಿಕೆಯಿಂದ ಬದುಕಲು ಹಲವು ಬಗೆಯ ಕಲಿಕೆಗಳನ್ನು ಕಲಿಯಬೇಕು ಹಾಗೆಯೇ ಸದೃಢವಾಗಿ ಬದುಕಲು ಹಲವು ಬಗೆಯ ಅಡುಗೆ ಮಾಡುವುದನು ಕಲಿತು ಊಟ ಮಾಡಬೇಕು.
ಅಂತೆಯೇ ಕಣ್ಣು ತರೆದು ನೋಡಿದರೆ ಕಾಣುವುದೆಲ್ಲವೂಒಂದೋಂದು ಬಗೆಯ ಬಣ್ಣದ ಜಗತ್ತು. ಈ‌ಬಣ್ಣದಜಗತನ್ನುಆಡಿಸುವವನುಒಬ್ಬಕಾಣದೆಎಲ್ಲೋಮರೆಯಾಗಿಇರುವ, ಕಾಣುತ್ತಿರುವನಾವುಗಳೇಆತನಸೂತ್ರದಕೈಯಲ್ಲಿಆಡುವಗೊಂಬೆಗಳು. ಈಬಗೆಯಬೊಂಬೆಗಳುಕೂಡಬದುಕಿನಎಳೆಯನ್ನುತೆರೆದಿಡುತ್ತವೆಹೀಗೆಒಂದು ಗೊಂಬೆಯಿಂದಲು ಜೀವನ ಪಾಠವನ್ನು ಕಲಿಯಲು ಸಾಧ್ಯವಿದೆಹಾಗೂಈ ಬಗೆಯಲ್ಲಿ ಮಾತನಾಡಲು ಮತ್ತು ಲೇಖನದನಡೆಯಲ್ಲಿ ಸದರಿ ಬರಹವನ್ನು ಬರೆಯಲು ಗಣ್ಯ ಕಾರಣವೆಂದರೆಸಾಹಿತ್ಯದಸೆಳೆತಅನುಗಾಲಬದುಕುವನೀತಿಯಹಂದರವನ್ನುಸಾರುವಶಾಶ್ವತರೂಪಕಗಳುಕನ್ನಡಿಯಾಗಿಮನುಷ್ಯನಬದುಕನ್ನುಹಾಸುಹೊಕ್ಕಾಗಿನಮ್ಮನ್ನುಆವಹಿಸಿಕೊಳ್ಳುತ್ತದೆ.
ಕನ್ನಡ ಚಿತ್ರರಂಗ ಕಂಡ ಮೇರು ಚಿತ್ರಸಾಹಿತಿಯಾದಚಿ. ಉದಯಶಂಕರ್ (ಚೆಟ್ಟನಹಳ್ಳಿಸದಾಶಿವಯ್ಯಉದಯಶಂಕರ್) ಆಡಿಸಿ ನೋಡು, ಬೀಳಿಸಿ ನೋಡು ಈ ಹಾಡನ್ನುಕೇಳದಕಿವಿಗಳೆಲ್ಲ ಹಾಗೂ ಗುನುಗದ ನಾಲಿಗೆ ಇಲ್ಲ ಎಂದೇ ಹೇಳಬಹುದು.ರಾಜಕುಮಾರ ಎಂಬ ಸಿನಿಮಾ ಬಂದ ಮೇಲಂತು ಈ ಹಾಡಿನ ಮಹತ್ತು ಮತ್ತೊಂದು ಬಗೆಯ ವ್ಯಕ್ತಿತ್ವವುಅನಾವರಣಗೊಂಡುಎತ್ತರಕ್ಕೆ ಬಂದು ತಲುಪಿತು. ಚಿತ್ರಸಾಹಿತ್ಯವೆಂದರೆ ತುಂಬು ಆದರದಿಂದಸ್ವಚ್ಚಂದ ಮನಸ್ಸಿನಿಂದಬರೆಯುತ್ತಿದ್ದ ಒಂದು ಬಗೆಯಲ್ಲಿ ತೆರೆ ಮರೆಗೆ ಸರಿದಾಗ
ಈ ಹಾಡಿನಮಾಧುರ್ಯದಷ್ಟೆಹಾಡಿನ ಒಡಲು ನಮ್ಮ ಗಮನವನ್ನು ಸೆಳೆಯುತ್ತದೆ. ಪ್ರತಿಯೊಂದು ಪದವು ನೀತಿಯಹಂದರದಲ್ಲಿ ಬದುಕಿನ ಮಂದಿರವನ್ನು ನಿರ್ಮಿಸಲು ಶ್ರಮಿಸುವಂತಿದೆ. ಎಲ್ಲರ ಹೃದಯದ ಮನೋಮಂದಿರದಹಾಳೆಯಲ್ಲಿ ಬರೆದ ಸಾಲುಗಳು ಒಂದು ಮಗುವಿಗೆ ಕಲಿಸುವ ನೀತಿಪಾಠ. ಬೆಳೆಯುವ ಸಿರಿ ಮೊಳೆಕೆಯಲ್ಲಿಯೇ ಎಂಬಂತೆ ನಾಯಕನು ಈ ಸಿನಿಮಾದಲ್ಲಿ ಒಂದು ಮಗುವಿಗೆ ಸಾಂತ್ವಾನವನ್ನು ಹೇಳುತ್ತಾ ಬದುಕಿನ ಮೇಲೆ ತಿಳಿಬೆಳಕನ್ನು ಸುರಿಯುವ ಕೆಲಸ ನಡೆಯುತ್ತದೆ ಈ ಹಾಡಿನಜನನವಾದುದೆ ಒಂದು ವಿಶೇಷ ಸಂಗತಿ. ಸ್ವಾಗತ್ಹೋಟೇಲಿನ ಟೇಬಲ್ ಮೇಲೆ ಬೊಂಬೆಯಿಟ್ಟು ಅದನ್ನೇ ನೂಕಿದಾಗ ಸಂಗೀತ ನಿರ್ದೇಶಕರಾದಜಿ.ಕೆ. ವೆಂಕಟೇಶ್ ಅವರು ಈ ರೀತಿ ಹೇಳುತ್ತಾರೆ. ಯಾರು ಹೇಗೆ ನೂಕಿದರೂ ಇದು ವಾಲಾಡುತ್ತೇವಿನಃಉರುಳಿಹೋಗಲ್ಲ, ನಗೋದುನಿಲ್ಲೊಲ್ಲ. ಇದನ್ನು ತಯಾರಿಸಿದನಲ್ಲ ಶಿಲ್ಪಿ, ಅವನ ಕೈಚಳಕ ದೊಡ್ಡದು’ ಎಂದು ಹೇಳಿದ ಮಾತನ್ನ ಉದಯಶಂಕರ್ ಅವರು ಗುನುಗುತ್ತಲೇ ಮನನ ಮಾಡುತ್ತಾ ಮುಂದಿನ ಐದೇ ನಿಮಿಷದಲ್ಲಿ ‘ಆಡಿಸಿ ನೋಡು ಬೀಳಿಸಿ ನೋಡು ಉರುಳಿ . ಹೋಗದು’ ಎಂಬ ಕ್ಷರವಾಗದ ಸಾಲುಗಳು ಅಕ್ಷರದ ಶೋಭೆಯಲ್ಲಿಪಲ್ಲವಿಯರೂಪವಾಗಿಯೇಜನ್ಮವೆತ್ತಿ ಬಂದು ಇಂದಿಗೂ ಕರ್ಣರಸಾಯನವನ್ನು ಉಂಟು ಮಾಡುತ್ತಿರುವುದು ಹಾಡಿನಗಟ್ಟಿತನಕ್ಕೆ ಹಿಡಿದ ಕೈಗನ್ನಡಿ. ಆದರೆ ಒಂದಂತು ಸತ್ಯ ಈ ಸಾಲುಗಳ ಎಳೆ ಎಳೆಗಳು ಕೇವಲ ಮಗುವಿಗಾಗಿ ಅಲ್ಲವೇ ಅಲ್ಲ ಕಿರಿಯರಿಂದಹಿರಿಯರವರೆಗೆ ಬದುಕಿನ ಪಾಠವನ್ನೇಸಾರವತ್ತಾಗಿ ಸಾರುವ ಅದ್ಭುತ ನೀತಿಯರಸಗ್ರಹಣವಾಗಿದೆ. ಇದರಲ್ಲಿ ಮುಗ್ಧ ಮಗುವಿನ ಸಂಭ್ರಮವಿದೆ, ನಾಯಕನಸಂಕಟವಿದೆ. ಸಾರ್ವಕಾಲಿಕವಾದಸಂದೇಶವಿದೆ. ವಿಧಿಯ ಕೈಯಲ್ಲಿ ನಾವೆಲ್ಲರೂ ಆಟಿಕೆಯ ವಸ್ತುಗಳು, ಆತನ ಆಣತಿಯಂತೆ ನಾವು ಆಡಲೇಬೇಕು. ನಾವು ನೆನಸಿದಂತೆ ಅದು ಎಂದಿಗೂ ನಡೆಯುವುದಿಲ್ಲ ಎಂಬ ವಿಧಿವಾದ ಇಡೀ ಹಾಡಿನಲ್ಲಿ ತಳಕು ಹಾಕುತ್ತದೆ. ಜೊತೆಗೆ ನಿಸರ್ಗ ಸಹಜವಾಗಿ ಎಲ್ಲವು ಮೌನದಲ್ಲಿ ನಡೆದು ಹೋಗುವಾಗ ಮನುಷ್ಯನು ಮಾತ್ರವೇ ಸಣ್ಣ ಕಾರ್ಯಗಳಿಗೂ ಡಂಗೂರ ಸಾರಿಕೊಂಡು ಬದುಕುವ ಮನುಷ್ಯನ ಬದುಕು ನಿರರ್ಥಕ. ಮೊದಲ ಭಾಗದ ಪಲ್ಲವಿಯಲ್ಲಿನ
ಆಡಿಸಿನೋಡುಬೀಳಿಸಿನೋಡು ಉರುಳಿ ಹೋಗದು
ಏನೇ ಬರಲಿ ಯಾರಿಗೂ ಸೋತು ತಲೆಯಬಾಗದು
ಎಂದಿಗು ನಾನು ಹೀಗೆ ಇರುವಎಂದು ನಗುವುದು
ಹೀಗೆ ನಗುತಲಿರುವುದು
ಎಂಬ ಜೀವಂತಿಕೆಯಧಾತುಗಳು ಎಂತಹ ಸೋಲಿನಬಳಲಿಕೆಯಲ್ಲಿಸೊರಗಿ ಕುಳಿತಿರುವ ಮನಸ್ಸನ್ನು ಪುಟಿಯುವಂತೆಜೀವನೋತ್ಸಹವನ್ನು ತುಂಬುತ್ತದೆ. ತೊಟ್ಟಿಲಲ್ಲಿ ಮಲಗಿರುವ ಮಗುವಿನ ಮುಂದೆ ಕುಳಿತ ಮಂದಿ ಜೋಗುಳ ಆಡಿ, ತೊಟ್ಟಿಲತೂಗುವಹೃದಯವಂತ ಮನಸ್ಸಿನ ಮಂದಿಗಳು ಮಾತ್ರ ಎಂದು ಅವರನ್ನು ಭಾವಿಸಲಾಗದು.ಕೆಲವು ಮಂದಿಗಳುತೂಗುವ ನೆಪದಲ್ಲಿ ಕೊರಳಹಿಸುಕೆಲೆಳೆಸುವಮಂದಿಗಳು ಆಗಿರಬಹುದು ಅಂತಹ ಸಂದರ್ಭದಲ್ಲಿ ಎಚ್ಚರಿಕೆಯ ನಡೆ ಎಂಬುದು ಅತಿ ಮುಖ್ಯವಾದ ಮನಸ್ಥಿತಿ. ಗೊಂಬೆಯು ಈ ಬಗೆಯ ಚೈತನ್ಯ ಶಕ್ತಿಯನ್ನು ತಿಳಿಸಲಾಗುತ್ತಿದೆ ಅಂತೆಯೇ ಧಣಿವರಿದಜೀವದಶಕ್ತಿಯಂತೆ ಸದಾ ಕಾಲ ಅಸ್ಮಿತೆಯಜಾಲದಲ್ಲಿಹಸನ್ಮುಖಿಯಾಗಿ ನಗುತ್ತಲೇ ಸಾಗುವ ಗೊಂಬೆ ನಮ್ಮೆಲ್ಲರಿಗೂಸ್ಫೂರ್ತಿಯಚಿಲುಮೆ ಚಿಲುಮೆ. ಎಷ್ಟೇ ಕಷ್ಟ-ನಷ್ಟ, ಸೋಲು-ಸವಾಲುಗಳುಎದುರಾದರೂಧೃತಿಗೆಡದೆ ಸಾಗಬೇಕು ಎಂದು ಕರೆ ನೀಡುತ್ತಿದೆ.
ಮೊದಲ ಚರಣದಲ್ಲಿಕಷ್ಟವೂ ಇರಲಿ ಸುಖವೇ ಬರಲಿ ಅವು ಎರಡನ್ನು ಒಂದೇ ರೀತಿ ಸ್ವೀಕರಿಸಬೇಕು. ಕಷ್ಟ ಎದುರಾದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ, ಒಂದೇ ಬಗೆಯ ಇರುವಿಕೆ ನಮ್ಮ ಸಮಚಿತ್ತತೆಯನ್ನುತೋರಿಸುತ್ತದೆ. ಗೊಂಬೆಗೆ ಗುಡಿಸಲು ಒಂದೇ ಅರಮನೆಯು ಒಂದೇ ಕಿರಿಯರು ಒಂದೇ ಹಿರಿಯರು ಒಂದೇ, ನಾವು ಅಷ್ಟೇ ಸಿರಿತನ ಬರಲಿ-ಬಡತನ ಇರಲಿ ನಾವು ಅಹಂಕಾರ ಪಡಬಾರದು, ಕುಗ್ಗಬಾರದು ಹಿರಿ-ಕಿರಿಯರಿಗೆ ಗೌರವವನ್ನು ನೀಡಿ ಹೊಂದಾಣಿಕೆ ಮಾಡಿಕೊಂಡು ಸಾಗಬೇಕು ಎಂದು ಮನೋಜ್ಞವಾಗಿಹೇಳಲಾಗಿದೆ.
ಎರಡನೇ ಚರಣದಲ್ಲಿ ತಮ್ಮ ನೋವನ್ನು ಮರೆತು ನೋವಲ್ಲೇಬದುಕಿಜಗಕ್ಕೆನೆರವಾಗುವ ಕೆಲವು ಉದಾಹರಣೆಗಳ ಮೂಲಕ ಬದುಕಿನ ಸಾರ್ಥಕತೆಯನ್ನುತಿಳಿಸಲಾಗಿದೆ. ಕಬ್ಬು ತನ್ನೆಲ್ಲ ದೇಹವನ್ನು ನೋಯಿಸಿಕೊಂಡುಸಂಕಷ್ಟವನ್ನು ಅನುಭವಿಸಿದರು ಹೇಗೆ ಜಗದ ಬಾಯಿಗಳಿಗೆಸಿಹಿಯನ್ನುಹಂಚುವಂತೆ, ಅಕ್ಕಿಯುಅನ್ನವಾಗಲುಹೇಗೆಲ್ಲ ಕೊತಕೊತ ಕುದಿಯುವ ನೀರಿನಲ್ಲಿ ಕುದಿದುಮದುವಾಗಿಹಸಿವನ್ನು ನೀಗಿಸುವಂತೆ, ಶಿಲ್ಪಿಯುಶಿಲೆಯನ್ನು ಉಳಿ ಪೆಟ್ಟಿನಿಂದಕಡೆದುಕಲೆಯನ್ನುಅರಳಿಸಿಮೂರ್ತಿಯಾಗಿಸುಂತೆ, ಅಷ್ಟೇ ಅಲ್ಲದೆಹಾಡಿನಸಾಲಿನಲ್ಲೇ ಬರುವ ಗಂಧವನ್ನು ಎಷ್ಟು ತೇಯ್ದರು ಸಹಾ ಪರಿಮಳವು ಹೇರಳವಾಗಿ ತುಂಬಿ ಬರುತ್ತದೆ ಹಾಗೆಯೇ ದೀಪವು ತಾನು ಉರಿದು ಸುಟ್ಟು ಹೋದರೂ ಜಗದ ಕಗ್ಗತ್ತಲನ್ನು ದೂರ ಮಾಡಿ ಬೆಳಕಿನ ಬುಗ್ಗೆಯನ್ನುಚಿಮ್ಮಿಸಿ ಜೀವನವನ್ನೇ ಸಾರ್ಥಕಗೊಳಿಸಿಕೊಳ್ಳುವಂತೆ ವ್ಯಕ್ತಿಯು ಆಯುಷ್ಯ ಇರುವಷ್ಟರಲ್ಲೇಜಗಕ್ಕೆ ಯಾವುದಾದರೂ ಕಿರು ಕಾಣಿಕೆಯನ್ನು ನೀಡಿ ತನ್ನ ಹುಟ್ಟನ್ನುಸಾರ್ಥಕಗೊಳಿಸಿಕೊಳ್ಳಲೇಬೇಕು.ಮೂರನೇಚರಣದಲ್ಲಿ ಮತ್ತು ಕೊನೆಯಲ್ಲಿ ಸಾಲಿನಲ್ಲಿ ಬದುಕಿನ ಸಾರ ಸಂಗ್ರಹವನ್ನೇ ಸಾರುವ ಸಾಲುಗಳು ಸದಾ ನಮ್ಮನ್ನು ಎತ್ತಲೋಕೊಂಡೊಯ್ಯುತ್ತವೆ. ವಿಧಿಯಾಟದ ಮುಂದೆ ನನ್ನ ಮನುಷ್ಯನ ಆಟ ಏನು ನಡೆಯಲಾರದು. ನಮ್ಮ ಕೈಯಲ್ಲಿ ಏನು ಇಲ್ಲ. ಅಧಿಕಾರ, ಅಂತಸ್ತು, ಸಂಪತ್ತು, ಕೀರ್ತಿ, ಗೌರವ, ಹೆಸರು, ಎನ್ನೆಲ್ಲವನ್ನುಸಂಪಾದಿಸಿದರೂ ಅದು ಕ್ಷಣಿಕವಾದದು. ಇದನ್ನು ಅರ್ಥ ಮಾಡಿಕೊಂಡವರು ಮಾತ್ರವೇ ಬದುಕಿಗೊಂದು ಅರ್ಥ ಸಿರಿಸುತ್ತದೆ ಇಲ್ಲವಾದರೆ ಈ ಬಾಳು ನಿರರ್ಥಕವಾಗುತ್ತದೆ. ಅದಕ್ಕೆ ಕವಿ ಹೃದಯ. ಮತ್ತೊಂದು ಕಡೆ ಈ ರೀತಿ ಹೇಳಿದೆ ‘ಬಾಳು ಮೂರೇ ದಿನ ಬಾಳ ಜೋಪಾನ, ಬಾಳ ಮೆರಿ ಬ್ಯಾಡ ಬೀಳ್ತಿಕಾಣಣ್ಣ’ ಎಂದು, ಈ ಸಾಲುಗಳು ಕಿವಿಯ ಗರ್ಭವನ್ನು ಸವರಿ ಮೆದುಳಲ್ಲಿಮೆತ್ತಿಕೊಂಡಾಗಹೊಡೆದಾಟ, ಹೋರಾಟ, ಹಾರಾಟಗಳ ಹಾವಳಿ ನಮ್ಮನ್ನು ಮುತ್ತುವುದಿಲ್ಲ, ನಾನತ್ವ ನಮ್ಮಿಂದ ಮರೆಯಾಗಿ ವಿಶಾಲತೆ ಅದರ ಬದಲಾಗಿ ಹೇಳುವ ಮತ್ತೊಂದು ಹಾಡು ಕಿವಿಯ ಗರ್ಭದಲ್ಲಿ ಮಾರ್ಧನಿಸಿದಾಗಮನುಷ್ಯನಾದವನು ನೀರ ಮೇಲಣ್ಣ ಗುಳ್ಳೆ ಮಾತ್ರ ಆ ಗುಳ್ಳೆ ನುಚ್ಚು ನೂರು ಯಾವಾಗ ಎಂದು ತಿಳಿಯಲು ಸಾಧ್ಯವಿಲ್ಲ. ಅದರಂತೆಯೇವಿಧಿವಾದದಲ್ಲಿ ಮಾತನಾಡುವಾಗ ಯಾವ ಕ್ಷಣದಲ್ಲಿಏನಾಗುತ್ತದೋ ಎಂದು ಹೇಳಲು ಸಾಧ್ಯವಿಲ್ಲ. ಈಗಿರುವಾಗ ಮನುಷ್ಯ ಮಾತ್ರನಾಗಿರುವ ವ್ಯಕ್ತಿಯು ಅಹಂಕಾರವನ್ನು ಬಿಟ್ಟು ಆತ್ಮಚೈತನ್ಮವನ್ನುಜಾಗೃತಗೊಳಿಸಿಕೊಂಡುಸಾಧನೆಯಶಿಖರದಲ್ಲಿಸಿದ್ಧಿಯ ಫಲವನ್ನು ಅನುಭವಿಸಲುಸಾಧ್ಯವಾಗಿಸಿಕೊಳ್ಳಬೇಕು. ಒಟ್ಟಿನಲ್ಲಿ ಕಸ್ತೂರಿ ನಿವಾಸದ ಈ ಆಡಿಸಿ ನೋಡು ಬೀಳಿಸಿ ನೋಡು ಎಂಬ ಹಾಡು ತನ್ನ ಕಸ್ತೂರಿ ಪರಿಮಳವನ್ನು ಕನ್ನಡದ ಮನಸುಗಳಿಗೆ ಮಾತ್ರವಲ್ಲದೆ ಕೇಳುಗರ ಪ್ರತಿ ಹೃದಯವನ್ನು ಅರಳಿಸಿ ಬದುಕಿನ ನಿಜವಾದ ಸಾರ್ಥಕತೆಯನ್ನುಧ್ವನಿಸುವಮೂರ್ತತೆಯನ್ನುಚಿತ್ರವತ್ತಾಗಿ ಹಬ್ಬಿ ನಿಲ್ಲಿಸಿದೆ. ಈ ಎಲ್ಲಾ ಸಂದೇಶಗಳನ್ನುಅರಗಿಸಿಕೊಂಡರೆ ನಮ್ಮ ಬಾಳು ಅರಳುವುದರಲ್ಲಿ ಸಂಶಯವಿಲ್ಲ.
ಕಲಿಕಾರ್ಥಿ
ಕಲಿ(ತಿಳಿ), ಕಲಿತವನೇ ಮಹಾನ್ ಕಲಿ(ವೀರ),
ಕಲಿಕಾರ್ಥಿಗಳುಕಲಿಸುವುದೆಲ್ಲವನ್ನು ಕಲಿಯುವುದಿಲ್ಲ,
ಕಲಿಸುವವರು ತಾವು ಕಲಿತಿರುವುದೆಲ್ಲವನ್ನು ಸಹ ಕಲಿಸುವುದಿಲ್ಲ,
ಒಂದು ವೇಳೆ ಇದು ಸಾಧ್ಯವಾಗಿದ್ದರೆ ಒಬ್ಬೊಬ್ಬರು
ಗ್ರಂಥಕೋಶದರಾಶಿಯನ್ನೇರಚಿಸಿರುತ್ತಿದ್ದರು.
ಕಲಿತಂತೆ ನಟನೆ ಮಾಡುವುದಕ್ಕು ಕಲಿತು ನಟನೆ ಮಾಡುವುದಕ್ಕು
ಭಿನ್ನತೆ ಬಹಳ. ಓದದೆ-ಬರೆಯದೆ-ಕಲಿಯದೆ-
ಅನುಭವದರಸಪಾಕವನ್ನುಸವಿಯದೆ
ಬದುಕಿನ ಪುಸ್ತಕ ರಚನೆಯಾಗದು ಎಂದಳು ನನ್ನವ್ವಸಾಕವ್ವ

-ಪರಮೇಶಕೆ. ಉತ್ತನಹಳ್ಳಿ,
ಕನ್ನಡಉಪನ್ಯಾಸಕ
ಹಾಗೂಹವ್ಯಾಸಿಬರಹಗಾರ,
ಮೈಸೂರು.

Leave a Reply

Your email address will not be published. Required fields are marked *