ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಗರ ಕಾರ್ಯದರ್ಶಿಯಾಗಿ ವಿ. ಗಂಗಾಧರ್, ನಿರ್ದೇಶಕರಾಗಿ ಎಂ.ಬಸವರಾಜು ನೇಮಕ

ಚಾಮರಾಜನಗರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ನಗರ ಕಾರ್ಯದರ್ಶಿಯಾಗಿ ನಮ್ಮೂರ ಸುದ್ದಿ ಸಂಪಾದಕ ವಿ. ಗಂಗಾಧರ್ ಹಾಗೂ ನಿರ್ದೇಶಕರಾಗಿ ಸುದ್ದಿ ಸಂಜೆ ದಿನ ಪತ್ರಿಕೆಯ ವರದಿಗಾರ ಎಂ. ಬಸವರಾಜು ಅವರನ್ನು ನೇಮಕ ಮಾಡಲಾಗಿದೆ.

ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ತೆರವಾಗಿದ್ದ ನಗರ ಕಾರ್ಯದರ್ಶಿ ಸ್ಥಾನಕ್ಕೆ ವಿ. ಗಂಗಾಧರ್ ಅವರನ್ನು ಹಾಗೂ ನಿರ್ದೇಶಕ ಸ್ಥಾನಕ್ಕೆ ಸುದ್ದಿ ಸಂಜೆ ಜಿಲ್ಲಾ ವರದಿಗಾರ ಬಸವರಾಜು ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *