ಗಾಯಾಳುಗಳ ಯೋಗ ಕ್ಷೇಮವಿಚಾರಣೆವೈಯಕ್ತಿಕ ಪರಿಹಾರ
ಚಾಮರಾಜನಗರ: ಕೂಲಿ ಕೆಲಸಕ್ಕೆಂದು ಗುಂಡ್ಲುಪೇಟೆ ತಾಲ್ಲೂಕಿನ ವಡ್ಡಗೆರೆ ಸಮೀಪ ಅಂಕಹಳ್ಳಿ ಗೆ ಕರೆದೊಯ್ಯುತ್ತಿದ್ದ ಗೂಡ್ಸ್. ಆಟೋ ಪಲ್ಟಿಯಾಗಿ ಚಾಮರಾಜನಗರ ತಾಲ್ಲೂಕಿನ ಯಾನಗಳ್ಳಿ ಗ್ರಾಮದ ಮಹಿಳಾ ಕೂಲಿಕಾರ್ಮಿಕರು ಗಾಯಗೊಂಡ ಹಿನ್ನೆಲೆ ಯಡಬೆಟ್ಟ ಸಿಮ್ಸ್ ಆಸ್ಪತ್ರೆಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುರುವಾರ ಮಧ್ಯಾಹ್ನ ಸಿಮ್ಸ್ ಗೆ ಭೇಟಿನೀಡಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.
ಗಾಯಗೊಂಡ ಎಲ್ಲ 18 ಕೂಲಿಕಾರ್ಮಿಕ ಮಹಿಳೆಯರಿಗೂ ಶಾಸಕರು ವೈಯಕ್ತಿಕ ಪರಿಹಾರ ವಿತರಿಸಿದರು.
ಇದೇವೇಳೆ ಅವರು” ಆಟೋ ಮಗುಚಿ ಗಾಯಗೊಂಡಿರುವ ಯಾನಗಹಳ್ಳಿ ಗ್ರಾಮದ ಕೂಲಿಕಾರ್ಮಿಕ ಮಹಿಳೆಯರಿಗೂ ವೈದ್ಯರು ಸೂಕ್ತ ಚಿಕಿತ್ಸೆ ಒದಗಿಸಬೇಕು, ಗಾಯಾಳುಗಳು ಯಾವುದೇ ಕಾರಣಕ್ಕೂ ಧೃತಿಗೆಡಬಾರದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ಗುರುಸ್ವಾಮಿ, ಎ,ಪಿ,ಎಂಸಿ ನಿರ್ದೇಕ ಆಲೂರು ಪ್ರದೀಪ್, ನಗರಸಭೆ ನಾಮನಿರ್ದೇಶಿತ ಸದಸ್ಯ ಸ್ವಾಮಿ, ಮುಖಂಡರಾದ ಕೋಡಿಮೋಳೆ ಪ್ರಕಾಶ್,ರಂಗಸ್ವಾಮಿ, ಗಣೇಶ್ ರಾಮಸಮುದ್ರಸ್ವಾಮಿ, , ಸಿಮ್ಸ್ ಡೀನ್ ಮತ್ತು ನಿರ್ದೇಶಕ ಡಾ.ಎಚ್ .ಜಿ.ಮಂಜುನಾಥ್, ಡಾ.ದೇವೇಂದ್ರ, ಅಭಿμÉೀಕ್, ಶಶಿಧರ್, ಶರತ್ ಕುಮಾರ್ ಇತರರು ಹಾಜರಿದ್ದರು.