ಮೈಸೂರು : ಶಿವರಾತ್ರಿ ಮಹೋತ್ಸವದ ಅಂಗವಾಗಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ವತಿಯಿಂದ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಶೋಭಾಕ್ಕ ಅವರು ಮಾತನಾಡಿ, ಬೀಡಿ, ಸಿಗರೇಟ್, ಗುಟಕ, ಗಾಂಜಾ, ಮದ್ಯಪಾನ ಚಟಗಳಿಂದ ಮನುಷ್ಯ ನಾನಾ ತೊಂದರೆಗಳಿಗೆ ಸಿಲುಕಿ ಹಾಕಿಕೊಳ್ಳುತ್ತಾನೆ. ಇವೆಲ್ಲ ಚಟಗಳಿಂದ ದೇಹದ ಅಂಗಾಂಗಗಳು ಹಾನಿಗೆ ಒಳಗಾಗುತ್ತದೆ. ಪರಿಣಾ ಅನೇಕ ರೋಗಗಳಿಗೆ ಬಲಿಯಾಗಬೇಕಾಗುತ್ತದೆ. ಇದರಿಂದ ನಮ್ಮ ಕುಟುಂಬ ಹಾಗೂ ಸಮಾಜಕ್ಕೆ ನಾವು ದೊಡ್ಡ ಹೊರೆಯಾಗುತ್ತೇವೆ. ಈ ನಿಟ್ಟಿನಲ್ಲಿ ವ್ಯಸನಿಗಳು ತಮ್ಮ ಚಟದಿಂದ ಹೊರಬಂದು ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಸಲಹೆ ನೀಡಿದರು.
ಕುಂಭಕರ್ಣ ನಿದ್ದೆಯಿಂದ ಎದ್ದು ಜಾಗೃತ ಸ್ಥಿತಿಗೆ ಬರುವ ಸಾಂದರ್ಭಿಕ ಟ್ಯಾಬ್ಲೋ ಪ್ರದರ್ಶನ ಗಮನ ಸೆಳೆಯಿತು. ವ್ಯಸನಿಗಳು ವ್ಯಸನದಿಂದ ಮುಕ್ತರಾಗುತ್ತೇವೆ ಎಂದು ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದರು.
ಚಿತ್ರ ಶೀರ್ಷಿಕೆ : ಶಿವರಾತ್ರಿ ಮಹೋತ್ಸವದ ಅಂಗವಾಗಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ವತಿಯಿಂದ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡಲಾಯಿತು.