ಅನುಮೋದನೆಯಾದ ಸಾಗುವಳಿ ಚೀಟಿಗಳ ವಿತರಣೆಗೆ ಕ್ರಮ-ಶಾಸಕ ಸಿ.ಪುಟ್ಟರಂಗಶೆಟ್ಟಿ
ಚಾಮರಾಜನಗರ: ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಎಂಎಸ್ಐಎಲ್ ಅಧ್ಯಕ್ಷ, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ ನಡೆಯಿತು.
ಮೊದಲನೇ ಹಂತದಲ್ಲಿ ಅನುಮೋದನೆಗಾಗಿ ಕಳುಹಿಸಲಾಗಿರುವ ಕಡತಗಳನ್ನು ಪರಿಶೀಲಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಇಂದಿನ ಸಭೆಯಲ್ಲಿ ಹರವೆ ಹಾಗೂ ಹರದನಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳ ಫಲಾನುಭವಿಗಳ 16ಅರ್ಜಿಗಳು ಸಲ್ಲಿಕೆಯಾಗಿವೆ. 12 ಅರ್ಜಿಗಳನ್ನು ಅನುಮೋದನೆಗಾಗಿ ಕಳುಹಿಸಲಾಗಿವೆ, ಅವುಗಳಲ್ಲಿ 4 ಅರ್ಜಿಗಳು ಪರಿಶೀಲನೆಗೆ ಹೋಗಿವೆ. ಮುಂದಿನ ಸಭೆಯಲ್ಲಿ ಅನುಮೋದನೆಯಾಗಿರುವ ಸಾಗುವಳಿಚೀಟಿಗಳನ್ನು ಫಲಾನುಭವಿಗಳಿಗೆ ಸಾಗುವಳಿಚೀಟಿ ವಿತರಿಸಲು ಕ್ರಮವಹಿಸಲಾಗುವುದು ಎಂದರು.
ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರಾದ ಬಿಸಲವಾಡಿರವಿ, ಬೋಗಾಪುರ ಮಹಾಲಿಂಗ, ಮಲ್ಲಿಕಾಚನ್ನೇಗೌಡ, ತಹಸೀಲ್ದಾರ್ ಗಿರಿಜಾ, ವಿಷಯ ನಿರ್ವಾಹಕ ಅವಿನಾಶ್, ಶಿರಸ್ತೇದಾರ್ ಬಿ.ಎನ್.ವಿನು, ರಾಜಸ್ವನಿರೀಕ್ಷಕರು, ,ರವೀಂದ್ರ, ವಿನೋದ್, ಗ್ರಾಮಾಡಳಿತಾಧಿಕಾರಿಗಳು ಹಾಜರಿದ್ದರು.