ನೀರು ಎಂದು ಆ್ಯಸಿಡ್ ಕುಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗೆ ಆರ್ಥಿಕ ನೆರವು ನೀಡಿದ ಬಸವ ಮಾರ್ಗ ಸಂಸ್ಥೆಯ ಸಂಸ್ಥಾಪಕ ಬಸವಣ್ಣ

ಮೈಸೂರು : ನೀರು ಎಂದು ತಿಳಿದು ಬ್ಯಾಟರಿಗಳಿಗೆ ಹಾಕುವ ಆ್ಯಸಿಡ್ ಕುಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿ ಯಶ್ವಂತ್ ಗೆ ಬಸವಮಾರ್ಗ ಸಂಸ್ಥೆಯ ಸಂಸ್ಥಾಪಕ ಬಸವಣ್ಣ ಅವರು ಆರ್ಥಿಕ ನೆರವು ನೀಡಿದ್ದಾರೆ.

ಮೈಸೂರಿನ‌ ಕುಕ್ಕರಹಳ್ಳಿ ಸರ್ಕಾರಿ ಶಾಲೆಯಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಗಣಗರಹುಂಡಿ ಗ್ರಾಮದ ಯಶ್ವಂತ್ ಭಾನುವಾರ ಮನೆ ಅಂಗಳದಲ್ಲಿ ಆಡವಾಡುತ್ತಿದ್ದಾಗ ದಣಿವುಗೊಂಡು ನೀರು ಎಂದು ತಿಳಿದು ಬ್ಯಾಟರಿಗಳಿಗೆ ಹಾಕುವ ಆ್ಯಸಿಡ್ ಕುಡಿದಿದ್ದ.
ಪಾಲಕರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದರು.
ಆದರೆ ವಿದ್ಯಾರ್ಥಿಯ ಪಾಲಕರು ಬಡವರಾದ ಹಿನ್ನೆಲೆಯಲ್ಲಿ ಆಸ್ಪತ್ರೆ ವ್ಯಚ್ಚ ಬರಿಸಲು ಆರ್ಥಿಕವಾಗಿ ತೊಡಕಾಗಿತ್ತು. ಈ ವಿಷಯ ಬಸವಣ್ಣ ಅವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚಕೆಂದು ಪಾಲಕರಿಗೆ ಆರ್ಥಿಕ ನೆರವು ನೀಡಿ, ಮಾನವೀಯತೆ ಮೆರೆದಿದ್ದಾರೆ.

ಚಿತ್ರ: ನೀರು ಎಂದು ತಿಳಿದು ಆಸ್ಯಡ್ ಕುಡಿದಿದ್ದ ವಿದ್ಯಾರ್ಥಿಯ ಆಸ್ಪತ್ರೆ ಖರ್ಚು, ವೆಚ್ಚಕ್ಕೆ ಬಸವಮಾರ್ಗ ಸಂಸ್ಥೆಯ ಸಂಸ್ಥಾಪಕರಾದ ಬಸವಣ್ಣ ಅವರು ಆರ್ಥಿಕ ನೆರವು ನೀಡಿದರು.

Leave a Reply

Your email address will not be published. Required fields are marked *