ಕಾಳಿಹುಂಡಿ ಶಿವಕುಮಾರ್ ಗೆ “ಬಸವಶ್ರೀ ಪ್ರಶಸ್ತಿ”

ಝೇoಕಾರ ಸ್ವರ ಮಧುರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಬೆಂಗಳೂರಿನ ಅಧ್ಯಕ್ಷರಾದ ಶ್ರೀಮತಿ ಗೌರಿ ಶಂಕರ ಚಟ್ಟಿ ರವರು ಹಲವು ಸ್ಪರ್ಧೆಗಳನ್ನು ಪ್ರತಿ ಹಬ್ಬದ ದಿನಗಳಂದು ಏರ್ಪಡಿಸುತ್ತಾ ಬರುತ್ತಿದ್ದು, ಅಂತೆಯೇ ಈ ಬಾರಿಯ ಬಸವ ಜಯಂತಿಯ ಪ್ರಯುಕ್ತ   ಆಯೋಜಿಸಲಾಗಿದ್ದ ವಚನ ಗಾಯನದಲ್ಲಿ ಅತ್ಯುತ್ತಮ ಗಾಯಕರೆಂದು ಪರಿಗಣಿಸಿ "ಬಸವಶ್ರೀ ಪ್ರಶಸ್ತಿ"ಯನ್ನು ಮೈಸೂರಿನ ಲೇಖಕ, ಗಾಯಕ, ವಿಮರ್ಶಕ ಕಾಳಿಹುಂಡಿ ಶಿವಕುಮಾರ್ ರವರಿಗೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಶಿವಕುಮಾರ್ ರವರು ಬರಹದ ಜೊತೆಗೆ ಚಿತ್ರಗೀತೆ, ಭಾವಗೀತೆ ಗಾಯನಗಳಲ್ಲೂ ಕೂಡ ಭಾಗವಹಿಸುತ್ತಾ ಬರುತ್ತಿದ್ದಾರೆ.

Leave a Reply

Your email address will not be published. Required fields are marked *