ಪ್ರಸಿದ್ಧ ನಿರ್ದೇಶನದಲ್ಲಿ ಚಾ.ನಗರದ ಕಿಟ್ಟಿಕೌಶಿಕ್ ಛಾಯಾಗ್ರಹಣ ಕೈಚಳಕವಿರುವ ಚಿತ್ರವಿದು
ಈ ಚಿತ್ರವು ಶತಮಾನೋತ್ಸವ ಆಚರಿಸಲಿ : ಆರ್ಚಕ ರಾಮಕೃಷ್ಣಭಾರಧ್ವಜ್
ಚಾಮರಾಜನಗರ: ಗ್ರಾಮೀಣ ಸೊಗಡಿನ ಕಥೆಯನ್ನು ಹೊಂದಿರುವ ಭರ್ಜರಿ ಗಂಡು ಚಿತ್ರದ ಉಯ್ಯೋ ಉಯ್ಯೋ ಮಳೆರಾಯ ಹಾಡು ನಗರದಲ್ಲಿ ಬಿಡುಗಡೆಯಾಯಿತು.
ನಗರದ ಶ್ರೀಚಾಮರಾಜೇಶ್ವರ ದೇವಾಯಲದಲ್ಲಿ ಚಿತ್ರ ತಂಡ ಭೇಟಿ ನೀಡಿ ವಿಶೇಷಪೂಜೆ ಸಲ್ಲಿಸಿತು. ದೇವಸ್ಥಾನದ ಆರ್ಚಕ ರಾಮಕೃಷ್ಣ ಭಾರದ್ವಜ್ ಉಯ್ಯೋ ಉಯ್ಯೋ ಮಳೆರಾಯ ಹಾಡನ್ನು ಬಿಡುಗಡೆಗೊಳಿಸಿ ಮಾತನಾಡಿ, ಚಾಮರಾಜೇಶ್ವರಸ್ವಾಮಿಯ ಅನುಗ್ರಹದಿಂದ ಭರ್ಜರಿಗಂಡು ಚಿತ್ರ ಶತಮಾನೋತ್ಸವ ಆಚರಿಸಲಿ, ಚಿತ್ರದ ತಂಡಕ್ಕೆ ಶುಭವಾಗಲಿ ಎಂದು ಆಶಿಸಿದರು.
ಚಿತ್ರದ ನಿರ್ಮಾಪಕ, ನಿರ್ದೇಶಕ ಪ್ರಸಿದ್ದ್ ಮಾತನಾಡಿ, ಕಿರಣ್ರಾಜ್ ನಾಯಕ ನಟನಾಗಿ, ಯಶ ಶಿವಕುಮಾರ್ ನಾಯಕಿಯಾಗಿ ನಟಿಸಿದ್ದು, ಜಿಲ್ಲೆಯ ಆಯ್ದಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಾಡು ಚೆನ್ನಾಗಿ ಮೂಡಿ ಬಂದಿದ್ದು. ಚಿತ್ರದಲ್ಲಿ ನಾಲ್ಕು ಫೈಟ್ ಗಳಿದ್ದು ಕಾಮಿಡಿ ಹಾಗೂ ಪ್ರೇಮ ಕಥೆಯೊಂದಿಗೆ ಚಿತ್ರ ಸಾಗಲಿದೆ ವಿಶೇಷವಾಗಿ ಈ ಚಿತ್ರವು ಗ್ರಾಮೀಣ ಸೊಗಡಿನ ಕಥೆಯನ್ನು ಹೊಂದಿದೆ. ಬರೀ ಪ್ರೀತಿಗಷ್ಠೆ ಸೀಮಿತವಾಗದೆ ನಾಯಕ ತನ್ನ ಊರಿಗೆ ಹಾಗೂ ಊರ ಜನರಿಗೆ ಏನೆಲ್ಲಾ ಮಾಡುತ್ತಾನೆ ಎಂಬುವುದೆ ಚಿತ್ರದ ಒಂದ್ ಲೈನ್ ಕಥೆಯಾಗಿದೆ ಎಂದು ಚಿತ್ರದ ನಿರ್ದೇಶಕರು ಮಾಹಿತಿ ನೀಡಿದರು.
ಉಯ್ಯೋ ಉಯ್ಯೋ ಹಾಡಿಗೆ ಖ್ಯಾತ ಗಾಯಕ ರಘುದೀಕ್ಷಿತ್ ಧ್ವನಿಯಾಗಿದ್ದು, ಗುಮ್ಮಿನೇನಿ ವಿಜಯ್ ಸಂಗೀತ ಸಂಯೋಜನೆ ಮಾಡಿದ್ದರೆ. ಉಯ್ಯೋ ಉಯ್ಯೋ ಮಳೆರಾಯ ಈ ಹಾಡನ್ನು ಡಾ.ವಿ.ನಾಗೇಂದ್ರಪ್ರಸಾದ್ ಬರೆದಿದ್ದಾರೆ.
ಚಾಮರಾಜನಗರ ನಗರದ ಕಿಟ್ಟಿಕೌಶಿಕ್ ಛಾಯಾಗ್ರಹಣದಲ್ಲಿ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಈ ಚಿತ್ರವನ್ನು ಪ್ರಸಿದ್ದ್ ಫಿಲಂಸ್ ಬ್ಯಾನರ್ ನಡಿಯಲ್ಲಿ ಅನಿಲ್ ಕುಮಾರ್, ಮದನ್ ಗೌಡ ನಿರ್ಮಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಭರ್ಜರಿ ಗಂಡುಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಏಪ್ರಿಲ್ ೫ ರಂದು ಚಿತ್ರ ತೆರೆ ಕಾಣಲಿದೆ ಎಂದರು.
ಈ ಸಂದರ್ಭದಲ್ಲಿ ಚಿತ್ರದ ನಾಯಕ ನಟ ಕಿರಣ್ರಾಜ್, ಸಿನಿ ಪತ್ರಕರ್ತ ಹಾಗೂ ಚಿತ್ರನಟ ಶ್ರೀಸಾಯಿಮಂಜು, ಚಿತ್ರದ ಛಾಯಾಗ್ರಹಕ ಕಿಟ್ಟಿಕೌಶಿಕ್ ಇತರರು ಹಾಜರಿದ್ದರು.