ಚಾ.ನಗರ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸಿ.ಶಂಕರ ಅಂಕನಶೆಟ್ಟಿಪುರ ಸ್ಪರ್ಧೆ

ಚಾಮರಾಜನಗರ: ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ ಎಂದು ಕವಿ, ಸಾಹಿತಿ, ಹೋರಾಟಗಾರ ಸಿ.ಶಂಕರ ಅಂಕನಶೆಟ್ಟಿಪುರ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಅಂಕನಶೆಟ್ಟಿಪುರ ಗ್ರಾಮದ ಪರಿಶಿಷ್ಟ ಜಾತಿಯ ಬಡ ದಲಿತ ಕುಟುಂಬದಲ್ಲಿ ಜನಿಸಿದ ನಾನು ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದೇನೆ ಬಡ ಕುಟುಂಬದಿಂದ ಬಂದಿರುವ ನಾನು ಜನರ ಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಕ್ಷೇತ್ರದ ಜನತೆ ನನ್ನನ್ನು ಬೆಂಬಲಿಸಲಿದ್ದಾರೆ ಎಂದರು.

ಕಿರು ಪರಿಚಯ : ಚಾಮರಾಜನಗರ ಈ ಹಿಂದೆ ಪುರಸಭೆಯಾಗಿದ್ದ ಸಂದರ್ಭದಲ್ಲಿ ಪುಟ್ ಪಾತಿನಲ್ಲಿ ಒಂದು ಟೈಪಿಂಗ್ ಮೆಷಿನ್ ಇಟ್ಟುಕೊಂಡು ಬದುಕು ಪ್ರಾರಂಭಿಸಿದ ನಾನು, ಹಲವಾರು ಸಮಸ್ಯೆಗಳನ್ನು ಎದುರಿಸುವ ಮೂಲಕ ಟೈಪಿಂಗ್ ವೃತ್ತಿಯನ್ನು ಮಾಡುತ್ತಿದ್ದು, ಇತರರಿಗೂ ಕಲಿಸುವ ಮೂಲಕ ಮಾದರಿ ಟೈಪಿಸ್ಟ್ ಎನಿಸಿಕೊಂಡಿದ್ದೆನ. ನನ್ನೊಟ್ಟಿಗೆ ಹಲವು ಮಂದಿಗೆ ಉದ್ಯೋಗ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದೇನೆ ಎಂದರು.

ಜಿಲ್ಲಾ ಪತ್ರ ಬರಹಗಾರನಾಗಿ ಸಾರ್ವಜನಿಕರೊಂದಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ಜನಾನುರಾಗಿ, ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳೊಂದಿಗೆ ಒಳ್ಳೆಯ ಬಾಂದ್ಯವ್ಯ ಇಟ್ಟುಕೊಂಡು, ಸುಮಾರು 22 ವರ್ಷಗಳ ಸುಧೀರ್ಘ ವೃತ್ತಿ ಜೀವನದಲ್ಲಿ ಯಾವುದ ಕಪ್ಪುಚುಕ್ಕೆ ಇಲ್ಲದಂತೆ ಎಲ್ಲರೊಂದಿಗೆ ಬೆರೆಯುತ್ತಿವೆ ಎಂದರು.

ಚಾಮರಾಜನಗರದ ಕೆಲವು ಪತ್ರಿಕೆಗಳಲ್ಲಿಯೂ ಕೂಡಾ ವರದಿಗಾರನಾಗಿ, ಅಂಕಣಕಾರನಾಗಿ, ಬೆಳಕಿಗೆ ಬಾರದ ಅದೆಷ್ಟೋ ಪ್ರತಿಭೆಗಳನ್ನು ಗುರುತಿಸಿದ್ದೇನೆ. ಬಡ ಮತ್ತು ವಂಚಿತ ಜನರ ಮೂಲಭೂತ ಸೌಕರ್ಯಗಳ ಬಗ್ಗೆ ಉತ್ತಮ ವರದಿ ಮಾಡಿದ್ದೇನೆ ಸಾಹಿತ್ಯ ಕ್ಷೇತ್ರದಲ್ಲೂ ಕೂಡಾ ನಾನು ಸೇವೆ ಸಲ್ಲಿಸಿದ್ದು, ಹಲವಾರು ಪ್ರಶಸ್ತಿಗಳು ಕೂಡಾ ಬಂದಿವೆ ಎಂದರು.

ಕವಿಯಾಗಿ ಭಾವನೆ, ಹೃದಯ, ಕಿಚ್ಚು, ಪೊರಕೆ, ನಾನು ಮತ್ತು ಅವಳು, ಆದಿ ದ್ರಾವಿಡರ ಹೆಜ್ಜೆ ಗುರುತುಗಳು, ಕನ್ನಡಿ ಎಂಬ ಏಳು ಕೃತಿಗಳನ್ನು ರಚಿಸಿದ್ದೇನ. ಜಿಲ್ಲೆ ಮತ್ತು ರಾಜ್ಯ ಮಟ್ಟದ ಹಲವು ಕವಿಗೋಷ್ಠಿಗಳಲ್ಲಿ ಭಾಗಿಯಾಗಿದ್ದು, ಉತ್ತಮ ಕವಿತೆಗಳನ್ನು ವಾಚಿಸಿ ಜಿಲ್ಲೆಯನ್ನು ಪ್ರತಿನಿಧಿಸಿದ್ದೇನೆ.ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯಲ್ಲಿ ಭಾಗವಹಿಸಿ ಜಿಲ್ಲೆಯ ಕೀರ್ತಿ ಬೆಳಗಿದ್ದೇನೆ. ಮೈಸೂರು ದಸರಾ ಕವಿಗೋಷ್ಠಿಯಲ್ಲಿ 4 ಬಾರಿ ಭಾಗವಹಿಸಿದ್ದು, ನನ್ನ ಸೇವೆಯನ್ನು ಪರಿಗಣಿಸಿ ಕದಂಬ ಸೇವಾರತ್ನಾ, ಜಿಲ್ಲಾ ಯುವ ಅತ್ಯುತ್ತಮ ಪ್ರಶಸ್ತಿ, ಕಾವ್ಯಶ್ರೀ ಪ್ರಶಸ್ತಿ, ಜನ ಚೈತನ್ಯ ಪ್ರಶಸ್ತಿ, ಕರ್ನಾಟಕ ಪ್ರಜಾ ಸೇವಾ ರತ್ನ ಪ್ರಶಸ್ತಿ, ಕನ್ನಡ ಶ್ರೀ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕವಿ ಭೀಮರತ್ನ ಪ್ರಶಸ್ತಿ ಸೇರಿದಂತೆ ಇನ್ನೂ ಹಲವಾರು ಪ್ರಶಸ್ತಿಗಳು ನನ್ನಗೆ ಲಭಿಸಿದೆ.

ಪೌರ ಕಾರ್ಮಿಕರ ಮತ್ತು ಸಫಾಯಿ ಕರ್ಮಚಾರಿಗಳ ಸೇವೆ : ಹಾಲಿ ಜಿಲ್ಲಾ ಸಫಾಯಿ ಕರ್ಮಚಾರಿ ವಿಚಕ್ಷಣ ಸಮಿತಿ ಸದಸ್ಯನಾಗಿ ಇಡೀ ಜಿಲ್ಲೆಯ ಪೌರಕಾರ್ಮಿಕರ ಮತ್ತು ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗಾಗಿ ಪ್ರಾಮಾಣಿಕ ಸವೆಯನ್ನು ಮಾಡುತ್ತಿದ್ದು, ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಪೌರಕಾರ್ಮಿಕರ ಭವನ ಮತ್ತು ಸಫಾಯಿ ಕರ್ಮಚಾರಿಗಳ ಮಕ್ಕಳ ವಿದ್ಯಾರ್ಥಿ ನಿಲಯಕ್ಕೆ 2 ಎಕರೆ ಜಮೀನು ಮತ್ತು ಪೌರಕಾರ್ಮಿಕ ಬಡಾವಣೆಗೆ 2 ಎಕರೆ ಜಮೀನು ಹಾಗೂ ಪೌರಕಾರ್ಮಿಕರ ಸ್ಮಶಾನಕ್ಕೆ 14 ಗುಂಟೆ ಜಮೀನನ್ನು ಮಂಜೂರು ಮಾಡಿದ್ದೇನೆ.

ಅಲ್ಲದೇ, ಎಷ್ಟೋ ವರ್ಷಗಳಿಂದ ಹಕ್ಕುಪತ್ರಗಳನ್ನು ನೀಡದೆ ಇದ್ದ ಯಳಂದೂರು ಪೌರಕಾರ್ಮಿಕರ ಕಾಲೋನಿಯ 28 ಮನೆಗಳಿಗೆ ಹಕ್ಕುಪತ್ರವನ್ನು, ವಿತರಣೆ ಮಾಡಿಸಿರುತ್ತೇನ. ಗುಂಡ್ಲುಪೇಟೆ ತಾಲೂಕು, ತೆರಕಣಾಂಬಿ ಗ್ರಾಮದ ಸುಮಾರು 20ಕ್ಕೂ ಹೆಚ್ಚು ಸಫಾಯಿ ಕರ್ಮಚಾರಿ ಕುಟುಂಬಗಳಿಗೆ ಅಸೆಸ್‍ಮೆಂಟ್ ವಿತರಣೆ ಮಾಡಿಸಿರುತ್ತೇನೆ. ಅಲ್ಲದೇ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಮತ್ತು ಸಫಾಯಿ ಕರ್ಮಚಾರಿಗಳ ಸಂಘದ ರಾಜ್ಯಾಧ್ಯಕ್ಷನಾಗಿ ಇಡೀ ಜಿಲ್ಲೆಯ ಪೌರಕಾರ್ಮಿಕರ ಮತ್ತು ಸಫಾಯಿ ಕರ್ಮಚಾರಿಗಳನ್ನು ಸಂಘಟನೆ ಮಾಡಿ, ಗಡಿನಾಡು ಆದಿದ್ರಾವಿಡರ ಸಮಾವೇಶ ಎಂಬ ಶೀರ್ಷಿಕೆಯಡಿ ಅದ್ಧೂರಿ ಕಾರ್ಯಕ್ರಮವನ್ನು ರೂಪಿಸಿ ಪೌರಕಾರ್ಮಿಕರ ಆಶಾಕಿರಣವಾಗಿದ್ದೇನೆ ಎಂದರು.

ನಾನು ಸಂಸದನಾಗಿ ಆಯ್ಕೆಯಾದ ನಂತರ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಅವುಗಳಲ್ಲಿ ಚಾಮರಾಜನಗರ ಜಿಲ್ಲೆಯ ಜನತೆ ಗುಳೆ ಹೋಗುವುದನ್ನು ತಪ್ಪಿಸಲಿ ಬದನಗುಪ್ಪೆಎ ಕೈಗಾರಿಕಾ ಪ್ರದೇಶದ ಮಾದರಿ ಹೊಸ ಕೈಗಾರಿಕಾ ಪ್ರದೇಶದ ಯೋಜನೆಯನ್ನು ಹುಟ್ಟುಹಾಕಿ ಕಾರ್ಯಕತಗೊಳಿಸುವುದು. ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಗುಡಿಸಲು ಮುಕ್ತ ಕ್ಷೇತ್ರವನ್ನಾಗಿ ಮಾಡುವುದು, ವಸತಿ ರಹಿತರಿಗೆ ಮನೆ ನಿರ್ಮಿಸಿಕೊಡುವುದು. ಚಾಮರಾಜನಗರ ಮೆಟ್ಟುಪಾಳ್ಯಂ ರೈಲ್ವೆ ಕಾಮಗಾರಿಯನ್ನು ಮಂಜೂರು ಮಾಡಿಸುವುದು, ನುಗು ಜಲಾಶಯದಿಂದ ನೀರಾವರಿ ತಂದು ಇಡೀ ಕ್ಷೇತ್ರವನ್ನು ನೀರಾವರಿ ಕ್ಷೇತ್ರವನ್ನಾಗಿ ಪರಿವರ್ತಿಸುವುದು. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಬೆಲೆ ಒದಗಿಸುವುದು. ಜಿಲ್ಲೆಯ ಜನಪದ ಕಲೆಯನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುವುದು ಸೇರಿದಂತೆ ಇನ್ನು ಹಲವಾರು ಉದ್ದೇಶಗಳನ್ನು ಕೈಗೊಂಡಿದ್ದು, ಜಿಲ್ಲೆಯ ಜನತೆ ನನ್ನನ್ನು ಕೈ ಹಿಡಯುವ ಮೂಲಕ ಎಲ್ಲಾ ಉದ್ದೇಶಗಳನ್ನು ಈಡೇರಿಸುವ ಜೊತೆಗೆ ತಮ್ಮ ಸೇವೆ ಮಾಡಲು ಅನುಕೂಲ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಅಂಕನಶೆಟ್ಟಿಪುರದ ಮಹೇಶ್, ಬಸವಪುರದ ಸತೀಶ್, ಮೂಕಹಳ್ಳಿ ಮಲ್ಲೇಶ್, ಚಾ.ನಗರದ ರಾಜೇಂದ್ರ ಇದ್ದರು.

Leave a Reply

Your email address will not be published. Required fields are marked *