ಹೆಚ್ಚು ಸಸಿಗಳನ್ನು ನೆಟ್ಟು ಪರಿಸರವನ್ನು ಕಾಪಾಡಲು ಕರೆ

ಮೈಸೂರು: ಜಿಲ್ಲೆಯ ಕೆ ಆರ್ ನಗರ ತಾಲೂಕಿನ ತಾಲೂಕು ಪಂಚಾಯಿತಿಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ವಿ ಪಿ ಕುಲದೀಪ್ ರವರ ನೇತೃತ್ವದಲ್ಲಿ ನಾಲ್ಕೈದು ಕಡೆ ವಿವಿಧ ಬಗೆಯ ಸಸಿಗಳನ್ನು ನೆಡುವ ಮುಖಾಂತರ ಆಚರಿಸಲಾಯಿತು.    

ನಂತರ ಕಾರ್ಯನಿರ್ವಾಹಕ ಅಧಿಕಾರಿಗಳು ಮಾತನಾಡಿ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. ಜೊತೆಗೆ ಇದು ವಿಶ್ವ ಪರಿಸರ ದಿನಾಚರಣೆಯ ಸಾಂಕೇತಿಕ ಅಷ್ಟೇ, ನಮ್ಮ ಗ್ರಾಮ ಪಂಚಾಯಿತಿಯ ಮಟ್ಟದಲ್ಲೂ ಕೂಡ ಹಲವು ಕಾರ್ಯಕ್ರಮಗಳನ್ನ ಈ ದಿನ ಆಯೋಜನೆ ಮಾಡಲಾಗಿತ್ತು.    

ಈ ದಿನಾಚರಣೆ ಒಂದು ದಿನಕ್ಕೆ ಮೀಸಲಾಗಬಾರದು. ವರ್ಷಪೂರ್ತಿ ಎಲ್ಲರೂ ಸಸಿಗಳನ್ನು ನೆಟ್ಟು ಪರಿಸರವನ್ನು ಕಾಪಾಡೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಚೇರಿ ವ್ಯವಸ್ಥಾಪಕರಾದ ಸತೀಶ್, ತಾಲೂಕು ಯೋಜನಾಧಿಕಾರಿ ಗಳಾದ ನಂದೀಶ್, ಸಹಾಯಕ ಲೆಕ್ಕಾಧಿಕಾರಿಗಳಾದ ಮೋಹನ ಕುಮಾರಿ, ಶಿವಕುಮಾರ್, ಪ್ರಥಮ ದರ್ಜೆ ಸಹಾಯಕರಾದ ಕರೀಗೌಡರು, ದ್ವಿತೀಯ ದರ್ಜೆ ಸಹಾಯಕರಾದ ತುಕಾರಾಂ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *