ಮೈಸೂರು: ನಗರದ ಮಹಾರಾಜ ಕಾಲೇಜು ಗ್ರಂಥಾಲಯದ ಆವರಣದಲ್ಲಿ ಹಿರಿಯ ಕ್ರೀಡಾಪಟು ಅಥ್ಲೇಟ್ ಚಂದ್ರಶೇಖರ್ ಪಿ.ಜಿ (81 ವರ್ಷದ ಹಿರಿಯಕ್ರೀಡಾಪಟು) ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಲನಚಿತ್ರ ನಿರ್ದೇಶಕ ನಾಗರಾಜು ತಲಕಾಡುರವರು ಮಾತನಾಡಿ, ಆಧಾರ್ಕಾರ್ಡ್, ರೇಷನ್ಕಾರ್ಡ್ ನಂತೆ ಪ್ರತಿಯೊಬ್ಬರಿಗೂ ಗ್ರೀನ್ಕಾರ್ಡ್ ನೀಡಬೇಕು. ಆ ಮೂಲಕ ಪ್ರತಿಯೊಬ್ಬರೂಗಿಡ ಮರಗಳ ನೊಂದಣಿ ಸಹಿತ ಕಾಳಜಿ ವಹಿಸಬೇಕು ಎಂದು ಹೊಸ ಯೋಜನೆಯ ಅರಿವು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಮಾತನಾಡಿದ ವಿ.ವಿಕ್ರಿಯೇಷನ್ ವಿಮಲ ವಿರೇಶ್ ಅವರು ಗಿಡ ಮರಗಳನ್ನು ನೆಡುವ ಮೂಲಕ ರಕ್ಷಿಸಿ ಬೆಳೆಸಿ ಎಂದು ವಿವಿ ಕ್ರಿಯೇಷನ್ ಸಂಸ್ಥಾಪಕರಾದ ಶ್ರೀಮತಿ ವಿಮಲಾ ವೀರೇಶ್ ಅವರು ತಿಳಿಸಿದರು.
ಸುವರ್ಣ ಬೆಳಕು ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸುವರ್ಣ ಬೆಳಕು ಫೌಂಢಷನ್ ಅಧ್ಯಕ್ಷ ಮಹೇಶ್ ಹಾಗೂ ಮಹಾರಾಜ ಕಾಲೇಜು, ಮಾರ್ನಿಂಗ್ ವಾಕರ್ಸ್ ಕಾರ್ಯದರ್ಶಿ ಮಹೇಶ್ಚಂದ್ರಗುರು, ಮಂಜುನಾಥ ಬಿ.ಆರ್ ಸಾಹಿತಿ, ಮುಖ್ಯ ಅತಿಥಿಗಳಾಗಿ, ಹೇಮಂತ್ಕುಮಾರ, ಸಮಾಜ ಸೇವಕರು ವಿಶ್ವೇಶ್ವರ ಆರಾದ್ಯಾ ಅಂತರ್ ರಾಷ್ಟ್ರೀಯ ಹಿರಿಯ ಕ್ರೀಡಾಪಟು ಯೋಗಾತರಬೇತುದಾರು ಕಿಶೋರ್, ಹಾಗೂ ರವಿ,ಬಿ ಅಕ್ಬರ್ಸಿ.ಎಂ. ಶೆಟ್ಟಿರವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.