ಚಾನಗರ ಪ್ರಕಾಶ ಭವನದಲ್ಲಿ ಏಪ್ರಿಲ್ 14,15,16 ರಂದು ಮಕ್ಕಳ ಬೇಸಿಗೆ ಶಿಬಿರ 

ಚಾಮರಾಜನಗರ ಪಟ್ಟಣದ ಜೋಡಿ ರಸ್ತೆಯಲ್ಲಿರುವ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ಮಕ್ಕಳ ಸರ್ವತೋಮುಖ ವ್ಯಕ್ತಿತ್ವ ವಿಕಾಸಕ್ಕಾಗಿ ಮಕ್ಕಳ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮನೋಬಲ ತರಬೇತುದಾರರಾದ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

6 ರಿಂದ 16ವಯಸ್ಸಿನ ಮಕ್ಕಳಿಗಾಗಿ ಎಳೆಯ ಮನಸ್ಸಿಗೆ ಏಕಾಗ್ರತೆ ಹಾಗೂ ದೃಡತೆ ಮೂಡಿಸಲು, ಪರಿಸ್ಥಿತಿಗಳಲ್ಲಿ ಕುಗ್ಗದೆ ಧೈರ್ಯವನ್ನ ಧರಿಸಲು, ಬದಲಾದ ಈ ಪೀಳಿಗೆಗೆ ಶ್ರೇಷ್ಠ ಮೌಲ್ಯಗಳನ್ನು ತುಂಬಲು, ಮಕ್ಕಳನ್ನು ದೇಶದ ಉತ್ತಮ ಪ್ರಜೆಗಳನ್ನಾಗಿ ಮಾಡಲು, ಪರಸ್ಪರದಲ್ಲಿ ಏಕತೆಯ ಭಾವ ಮೂಡಿಸಲು, ಆಧ್ಯಾತ್ಮಿಕತೆಯಿಂದ ನವರಾಷ್ಟ್ರ, ಯುವರಾಷ್ಟ್ರ, ಸಮೃದ್ಧ ರಾಷ್ಟ್ರ,ಕಟ್ಟುವ ಈ ಪ್ರಯತ್ನದಲ್ಲಿ ಸರ್ವರು ಕೈಜೋಡಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮೌಲ್ಯ ಭರಿತ ಆಟಗಳು, ರಾಜಯೋಗ, ದ್ಯಾನ, ಉಲ್ಲಾಸವನ್ನು ಹೆಚ್ಚಿಸುವ ಚಟುವಟಿಗಳು, ಏರೋಜಿಕ್ ವ್ಯಾಯಾಮ,ಧ್ಯಾನ, ಸಕಾರಾತ್ಮ ಚಿಂತನೆ, ಸ್ವಚ್ಛ ಮನಸ್ಸು, ಸ್ವಚ್ಛ ಜೀವನದಿಂದ ಸ್ವಚ್ಛ ಭಾರತ, ದಿನಾಂಕ 14 ರಿಂದ 16 ರವರೆಗೆ ಸಮಯ ಬೆಳಗ್ಗೆ 10 ರಿಂದ ಸಂಜೆ 4:00 ವರೆಗೆ ಹಮ್ಮಿಕೊಳ್ಳಲಾಗಿದೆ. ಹೆಸರನ್ನು ಮೊದಲೇ ನೂಂದಾಯಿಸಿಕೊಳ್ಳಬೇಕು ಹೆಚ್ಚಿನ ವಿವರಗಳಿಗೆ  7483520495,ಅಥವಾ 7899820430  ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ

Leave a Reply

Your email address will not be published. Required fields are marked *