ನೀರನ್ನು ಮಿತವಾಗಿ ಬಳಸಲು ಜಾಗೃತಿ ಮೂಡಿಸಿ: ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ

ಚಾಮರಾಜನಗರ: ಅಮೂಲ್ಯವಾಗಿರುವ ನೀರನ್ನು ಮಿತವಾಗಿ ಬಳಸುವಂತೆ ಜಾಗೃತಿ ಮೂಡಿಸಬೇಕು ಎಂದು ಕೊಳ್ಳೇಗಾಲ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ ರವರು ತಿಳಿಸಿದರು.

ಕೊಳ್ಳೇಗಾಲ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ (ಫೆ.27) ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಹಾಗೂ ಅನುμÁ್ಠನ ಬೆಂಬಲ ಸಂಸ್ಥೆ ಕಡ್ರ್ಸ್ ರವರ ಸಂಯುಕ್ತಾಶ್ರಯದಲ್ಲಿ ಜೆ.ಜೆ.ಎಂ ಮತ್ತು ಎಸ್.ಬಿ.ಎಂ (ಗ್ರಾ) ಯೋಜನೆಯ ಐ.ಇ.ಸಿ ಹಾಗೂ ಹೆಚ್.ಆರ್.ಡಿ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಮಟ್ಟದ ವಾμï ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶುದ್ಧ ಕುಡಿಯುವ ನೀರು ಪ್ರತಿಯೊಬ್ಬರಿಗೂ ಅವಶ್ಯಕ. ಹೀಗಾಗಿ ನೀರಿನ ಮೂಲಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನೀರಿನ ಸ್ಥಾವರಗಳು, ತೊಂಬೆಗಳನ್ನು ಶುಚಿಗೊಳಿಸಬೇಕು. ನೀರಿನ ಸರಬರಾಜು ಪೈಪ್‍ಲೈನ್ ಸೋರಿಕೆ ಆಗುವುದನ್ನು ತಡೆಗಟ್ಟಬೇಕು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಓಗಳು ಜೆ.ಜೆ.ಎಂ ಯೋಜನೆ ಅನುμÁ್ಠನ ಮತ್ತು ಮೇಲ್ವಿಚಾರಣೆ ಮಾಡುವುದರಿಂದ ಯೋಜನೆಯು ಯಶಸ್ವಿಯಾಗಲಿದೆ ಎಂದರು.

ರಾಜ್ಯ ಸಂಪನ್ಮೂಲ ವ್ಯಕ್ತಿಯಾದ ರತ್ನಶ್ರೀ ಪುರಷ್ಕತರಾದ ಜೋಸೆಫ್ ಜಿ.ಎಂ ರೆಬೆಲ್ಲೋ ಅವರು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ, ನೀರಿನ ಪೂರೈಕೆಯ ಜವಾಬ್ಧಾರಿಗಳು, ದ್ರವ ತ್ಯಾಜ್ಯಗಳನ್ನು ನಿರ್ವಹಣೆ, ಕಾರ್ಯಚರಣೆ, ನೀರಿನ ಮಹತ್ವ, ಶುಚಿತ್ವ, ಮಳೆ ನೀರು ಕೊಯ್ಲು, ವೈಯುಕ್ತಿಕ ಇಂಗುಗುಂಡಿ, ಜಲ ಮರು ಪೂರಣದ ಬಗ್ಗೆ ತಿಳಿಸಿದರು.

ಕರ್ನಾಟಕ ಗ್ರಾಮೀಣ ಜನವಸತಿಗಳಿಗೆ ಕುಡಿಯುವ ನೀರಿನ ಕಾರ್ಯಾಚರಣೆ ಮತ್ತು ನಿರ್ವಹಣೆ ನೀತಿ ಕುರಿತು ಎಇ ಅಮಿತ್ ವಿನಗ್ ಅವರು ತಿಳಿಸಿದರು.

ಇದೇ ವೇಳೆ ಕೊಳ್ಳೇಗಾಲ, ಯಳಂದೂರು, ಹನೂರು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ಎಫ್.ಟಿ.ಕೆ ಕಿಟ್‍ಗಳನ್ನು ವಿತರಿಸಲಾಯಿತು.
ಇಲಾಖೆಯ ಇಂಜಿನಿಯರ್ ಪೂರ್ಣಿಮಾ, ಶಶಿಕುಮಾರ್, ಯಳಂದೂರು ತಾಲೂಕು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು, ಜೆ.ಜೆ.ಎಂ ಡಿಪಿಎಂ ಆಶಾ ರಮೇಶ್, ಇನ್ನಿತರರು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *