ಮೈಸೂರು: ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು ಮತ್ತು ಹಂಸಧ್ವನಿ ಸಾಂಸ್ಕೃತಿಕ ವೇದಿಕೆ ವತಿಯಿಂದ ಶ್ರೀ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರು ಪೀಠ ಶಿಕ್ಷಣ ಮಹಾವಿದ್ಯಾಲಯ ಕಾಲೇಜಿನಲ್ಲಿ ಸಂಗೀತ ಮತ್ತು ಸಾಹಿತ್ಯ ಬೋಧನೆಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ನಿವೃತ್ತ ಪ್ರಾಂಶುಪಾಲರಾದ ಪ್ರೊ.ಎಂ.ಮಲ್ಲಣ್ಣ ಇವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇಲ್ಲಿನ ಬೋಧಕರು, ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪಿ. ಕಾಳಿಂಗ ರಾವ್ ಅವರ ಸಂಗೀತ, ಸಾಹಿತ್ಯವನ್ನು ನೆನಪಿಸಿಕೊಳ್ಳುವ ಸದುದ್ದೇಶದಿಂದ ಹಳೆಯ ಚಲನಚಿತ್ರ ಗೀತೆಗಳ ಗಾಯನ (ಕಲರವ ) ಬಿತ್ತರಿಸಿದರು.
ಜೊತೆಗೆ ಪ್ರೌಢಶಾಲಾ ಶಿಕ್ಷಕರಾಗಿ ಹೆಜ್ಜೆ ಹಿಡುತ್ತಿರುವ ಪ್ರಶಿಕ್ಷಣಾರ್ಥಿಗಳು ಕಲಿಕೆಯ ಆಯಾಸವನ್ನು ಕಡಿಮೆ ಮಾಡಿಕೊಂಡು, ಕಲಿಕೆಯಲ್ಲಿ ತಲ್ಲೀನರಾಗಿ ಬೋಧನೆ ಆಕರ್ಷಣೆಗೊಳ್ಳಲು ಹಾಗೂ ಪರಿಣಾಮಕಾರಿಯಾಗಲು ಕುವೆಂಪು, ದ. ರಾ. ಬೇಂದ್ರೆ, ಕೆ. ಎಸ್. ನರಸಿಂಹಸ್ವಾಮಿ, ಜಿ.ಎಸ್. ಶಿವರುದ್ರಪ್ಪ, ಅಡಿಗರು, ಬಿ. ಎಂ. ಶ್ರೀ, ಜಿ.ಪಿ. ರಾಜರತ್ನಂ, ಶ್ರೀ ಕನಕದಾಸರು, ಪುರಂದರದಾಸರು, ಉಯ್ಯಲಗೋಳ ನಾರಾಯಣರಾವ್ ಅವರ ಸಾಹಿತ್ಯವನ್ನು ಹಾಡಿನ ಮುಟ್ಟುಗಳನ್ನು ಸೊಗಸಾಗಿ ಹಾಡಿದರು.

ಪಠ್ಯಪುಸ್ತಕಗಳಲ್ಲಿನ ವಿವಿಧ ಪಾಠಗಳನ್ನು ಬೋಧಿಸುವಾಗ ಔಚಿತ್ಯ ಪೂರ್ಣವಾಗಿ ಹಲವು ಕವಿಗಳ ಪದ್ಯಗಳನ್ನು, ಸಿನಿಮಾ ನಟರ ಹಾಡುಗಳನ್ನು ಪ್ರಯೋಗಿಸುವುದನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಶರತ್ ಕುಮಾರ್ ಎಸ್, ಶರತ್ ಕುಮಾರ್ ಎಸ್.ಎಂ. ವಹಿಸಿದ್ದರು.
ವೇದಿಕೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ಎಂಎಲ್. ಸಣ್ಣ ರಾಮೇಗೌಡ, ಸಹಾಯಕ ಪ್ರಾಧ್ಯಾಪಕರಾದ ಮಂಜು ಜೆ. ಉಪಸ್ಥಿರಿದ್ದರು.
ಸ್ವಾಗತವನ್ನು ಎರಡನೇ ವರ್ಷದ ಬಿ.ಎಡ್ ಪ್ರಶಿಕ್ಷಣಾರ್ಥಿ ಮನುಶ್ರೀ, ಪ್ರಾರ್ಥನೆಯನ್ನು ಶ್ರೀಮತಿ ಅಶ್ವಿನಿ ಕಶ್ಯಪ್, ನಿರೂಪಣೆಯನ್ನು ವಿವೇಕಾನಂದ, ವಂದನಾರ್ಪಣೆಯನ್ನು ಮೊದಲನೇ ವರ್ಷದ ಬಿ.ಎಡ್ ಪ್ರಶಿಕ್ಷಣಾರ್ಥಿ ಐಶ್ವರ್ಯ ಲಕ್ಷ್ಮಿ ಎಸ್. ನಡೆಸಿಕೊಟ್ಟರು.