ಉಪ್ಪಾರ ಸಮುದಾಯದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಕೆ.ಎಸ್.ರವೀಂದ್ರನಾಥ್

ಮೈಸೂರು: ಉಪ್ಪಾರ ಸಮುದಾಯ ಅಭಿವೃದ್ಧಿಯಾಗಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ಹೇಳಿದರು.
ನಗರದ ಕಲಾಮಂದಿರದಲ್ಲಿ ಮೈಸೂರು ಜಿಲ್ಲಾ ಉಪ್ಪಾರ ನೌಕರರು ಹಾಗೂ ವೃತ್ತಿಪರರ ಸಂಘ ಆಯೋಜಿಸಿದ್ದ 29ನೇ ವಾರ್ಷಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೋಷಕರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಶ್ರಮಿಸಬೇಕು. ಆಸ್ತಿ ಮಾಡದಿದ್ದರೂ ಜ್ಞಾನ ಸಂಪತ್ತ ಗಳಿಸಲು ಪೆÇ್ರೀತ್ಸಾಹಿಸಬೇಕು ಎಂದರು.
ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಿದವರು ನಡೆದು ಬಂದ ದಾರಿ ಮರೆಯದೇ ಸಮುದಾಯದ ಅಭಿವೃದ್ಧಿಗೆ ನೆರವಾಗಬೇಕು. ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡಬೇಕು ಎಂದರು.
ರೈತ ಕುಟುಂಬದಿಂದ ಬಂದ ನಾನೂ ಉನ್ನತ ಶಿಕ್ಷಣ ಪಡೆಯಲು ಕಷ್ಟಪಡಬೇಕಾಯಿತು. ಸಾಮಾಜಿಕ ಕಳಕಳಿಯನ್ನು ಸಮುದಾಯದ ನೌಕರರು ತೋರುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸಮುದಾಯವು ಶಿಕ್ಷಣ ಪಡೆಯುವುದು ಸ್ವಾತಂತ್ರ್ಯ ನಂತರವಷ್ಟೇ ಸಾಧ್ಯವಾಯಿತು. ಯಾರು ಜ್ಞಾನ ಸಂಪಾದನೆಗೆ ಆದ್ಯತೆ ಕೊಡುತ್ತಾರೋ ಅವರು ಆರ್ಥಿಕವಾಗಿ ಸ್ಥಿತಿವಂತರಾಗುತ್ತಾರೆ. ದೊಡ್ಡ ಉದ್ಯೋಗ ಪಡೆದವರು, ಉದ್ಯಮಿಗಳಾಗಿ ಶ್ರೀಮಂತರಾದವರು ದಾನಿಗಳಾಗಬೇಕು. ಏನೇ ಗಳಿಸಿದರೂ ಇಲ್ಲೇ ಬಿಟ್ಟು ಹೋಗಬೇಕು. ಸಂಪಾದಿಸಿದ್ದನ್ನು ಇತರರಿಗೂ ಕೊಟ್ಟು ಹೋಗುವ ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದರು.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ಅವರಿಗೆ ಶ್ರೀ ಭಗೀರಥ ವೈದ್ಯ ವಿಭೂಷಣ ಪ್ರತಿಭಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಚಾಮರಾಜನಗರ ತಾಲ್ಲೂಕು ದೊಡ್ಡಮೋಳೆ ಗ್ರಾಮದ ನೀಲಗಾರ ಕಲಾವಿದ ದೊಡ್ಡ ಗವಿಬಸಪ್ಪ ಅವರಿಗೆ ಭಗೀರಥ ಕಲಾವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಮಹದೇವಸ್ವಾಮಿ (ಬನ್ನಿಸಾರಿಗೆ ಯಳಂದೂರು) ಸಿ.ಎಸ್.ಸಂಜೀವಿನಿ (ಚಾ.ನಗರ) ಎಚ್.ಎಲ್.ಶೀತಲ್ (ಹರದನಹಳ್ಳಿ ಸಾಲಿಗ್ರಾಮ) ಮೌಲ್ಯಾ (ಅಮಚವಾಡಿ ಚಾಮರಾಜನಗರ) ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಹಾದೇವಿ (ನಿಟ್ರೆ ಗುಂಡ್ಲುಪೇಟೆ) ಎಸ್.ಭವಾನಿ (ಯರಗಂಬಳ್ಳಿ) ಪವನ್ರಾಜ್ (ದುಗ್ಗಟಿ ಯಳಂದೂರು) ಅವರಿಗೆ ಭಗೀರಥ ವಿದ್ಯಾಶ್ರೀ ಪ್ರಶಸ್ತಿ' ನೀಡಲಾಯಿತು. ವೈದ್ಯಕೀಯ ಪ್ರವೇಶಾತಿ ಪಡೆದ ನೂತನ್ ಪ್ರಸಾದ್ ಪುನೀತ್ರಾಜ್ ಶ್ರೀವಲ್ಲಿ ರೋಹನ್ ಅಭಯ್ ಕೃಷ್ಣ ಕೆ.ಭರತ್ ಸ್ನಾತಕೋತ್ತರ ಪದವೀಧರರಾದ ಪಿ.ಸಿದ್ದರಾಮು ನರೇಂದ್ರಕುಮಾರ್ ದೀಪಕ್ ದೀಪಾ ಸುಷ್ಮಶ್ರೀ ರೇಖಾ ಅವರಿಗೆಭಗೀರಥ ಪ್ರತಿಭಾರತ್ನ ಪ್ರಶಸ್ತಿ’ ಕೊಡಲಾಯಿತು.
ರಾಷ್ಟ್ರಮಟ್ಟದ ಅಂಗವಿಕಲ ಕ್ರೀಡಾಕೂಟಕ್ಕೆ ಆಯ್ಕೆಯಾದ ಕೊಳ್ಳೇಗಾಲ ತಾಲ್ಲೂಕಿನ ಆಟಗಾರರಾದ ಪ್ರತಾಪ್ ಜಗನ್ ಹಾಗೂ ಜನಾರ್ಧನ್ ಅವರಿಗೆ `ಭಗೀರಥ ಕ್ರೀಡಾರತ್ನ ಪ್ರಶಸ್ತಿ’ ಹಾಗೂ 10ಸಾವಿರ ಬಹುಮಾನ ನೀಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 13 ಮಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಭಗೀರಥ ಮಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಅಯ್ಯನಸರಗೂರು ಮಠದ ಮಹದೇವ ಸ್ವಾಮೀಜಿ, ಸಂಘದ ಅಧ್ಯಕ್ಷ ಎಂ.ಸೋಮಣ್ಣ, ಮುಖಂಡರಾದ ಪಿ.ಶಿವಶಂಕರ್, ಎಂ.ಎಸ್.ಲೋಕೇಶ್, ಹನುಮಂತ ಶೆಟ್ಟಿ, ವಿ.ಎಸ್.ವಿಷಕಂಠಯ್ಯ, ಜಗನ್ನಾಥ್ ಸಾಗರ್, ಲಕ್ಕಪ್ಪ ಹನುಮಣ್ಣನವರ್, ಸಿ.ಎ.ಮಹದೇವಶೆಟ್ಟಿ, ಕೆ.ಟಿ.ಮೋಹನ್‍ಕುಮಾರ್, ನೂರೊಂದು ಶೆಟ್ಟಿ ಮತ್ತಿತರರಿದ್ದರು.

Leave a Reply

Your email address will not be published. Required fields are marked *