ಡಾ.ಬಿ.ಆರ್.ಅಂಬೇಡ್ಕರ್ ಪೌರಕಾರ್ಮಿಕರ ಸಂಘದಿಂದ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರಿಗೆ ಸನ್ಮಾನ

ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಪೌರಕಾರ್ಮಿಕರ ಕಾಲೋನಿಯ ಆದಿಪರಾಶಕ್ತಿ ಪಟ್ಟಲಮ್ಮ ದೇವಸ್ಥಾನಕ್ಕೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು ಭೇಟಿ ನೀಡಿ ದೇವಿ ದರ್ಶನ ಪಡೆದರು. ನಂತರ ಪೌರಕಾರ್ಮಿಕರ ಕುಂದು ಕೊರತೆಗಳ ಬಗ್ಗೆ ಜತೆ ಚರ್ಚಿಸಿದರು.

ಪ್ರಾಧಿಕಾರದ ಕಾರ್ಯದರ್ಶಿ ರಘು ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಪೌರಕಾರ್ಮಿಕರ ಸಂಘದ ಪರವಾಗಿ ಹೃದಯಪೂರ್ವಕವಾದ ಅಭಿನಂದನೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಾಧಿಕಾರದ ಪೌರಕಾರ್ಮಿಕ ನೌಕರರಾದ ಪೆÇೀನ್ನಯ್ಯ, ಮೇಸ್ತ್ರಿ ಕೆ.ಮಾದ,ಯಜಮಾನರಾದ ನಾಗರಾಜ್, ಮೇಸ್ತ್ರಿ ಗುಂಡರಾಜ್, ಮೇಸ್ತ್ರಿ ರಾಜ, ಮೇಸ್ತ್ರಿ ಏಜೆಂಟ್ ನಾಗರಾಜು ಹಾಗೂ ಪೌರಕಾರ್ಮಿಕರ ಸಂಘದ ಅಧ್ಯಕ್ಷರಾದ ಎಂ.ಪಿ.ಗೋಪಾಲ, ಜಿ.ನಾಗೇಂದ್ರ, ಆರ್.ಮಾದೇಶ, ಶ್ರೀನಿವಾಸ್, ಪ್ರಭಾಕರ್ ಹಾಗೂ ಮಹಿಳಾ ನೌಕರರು, ಗ್ರಾಮದ ಯಜಮಾನರು ಹಾಗೂ ಗ್ರಾಮಸ್ಥರು
ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *