ಭೂಮಿ ದಿನಾಚರಣೆ: ಭೂಮಿಯ ಮಹತ್ವ ಅರಿತು ಜಾಗೃತಿ ಮೂಡಿಸೋಣ

ಏಪ್ರಿಲ್ 22 ವಿಶ್ವಾದ್ಯಂತ "ಭೂಮಿ ದಿನವನ್ನಾಗಿ" ಆಚರಿಸಲಾಗುತ್ತದೆ. ಇದು ಅತ್ಯಂತ ಮಹತ್ವದ ದಿನವಾಗಿದೆ. ಏಕೆಂದರೆ ಇಂದು ನಾವು ಭೂಮಿಯನ್ನ ಒಂದಲ್ಲ ಒಂದು ರೀತಿಯಲ್ಲಿ ದೌರ್ಜನ್ಯ ಮಾಡುತ್ತ ಬರುತ್ತಿದ್ದೇವೆ. ಇಲ್ಲಿಂದ ನಾವು ಪಡೆಯುವ ಸವಲತ್ತು ಒಂದೇ ಎರಡೇ? ಎಲ್ಲವನ್ನು ನಾನೊಬ್ಬನೇ ಅನುಭವಿಸಬೇಕು, ಅಲ್ಲದೆ ಬೇಕು ಬೇಕು ಎನ್ನುವ ಸಂಸ್ಕೃತಿಗೆ ತಲೆಬಾಗಿ ಭೂಮಿ ನಮೊಬ್ಬರದೇ ಎನ್ನುವ  ರೀತಿಯಲ್ಲಿ ವರ್ತಿಸುತ್ತಿದ್ದೇವೆ.

ಇವರ ಫಲವಾಗಿ ನಾವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಕೂಡಾ ಯಾವುದೇ ರೀತಿಯಲ್ಲಿ ಎಚ್ಚೆತ್ತುಕೊಳ್ಳುತ್ತಿಲ್ಲ.  ನಾವು ತೋಡಿದ ಗುಂಡಿಗೆ ನಾವೇ ಬೀಳುವಂತಾಗಿದೆ!. ಮಾನವ ಏನೆಲ್ಲ ಸಾಧನೆ ಮಾಡಿದರು ಕೂಡಾ ಈ ಪ್ರಕೃತಿಯ ಮುಂದೆ ಕುಬ್ಜ!. ಈ ಸುಂದರ ಪರಿಸರದ ಸುತ್ತಮುತ್ತ ಏನಿಲ್ಲ ಅಡಗಿದೆ ಈ ಭೂಮಿಯ ಮೇಲೆ ಬೆಳೆಯುವ ಗಿಡಮರಗಳಿಂದ ಹಿಡಿದು ಎಲ್ಲವೂ ಕೂಡ ನಮಗೆ ನಿಜ. ಆದರೆ ಅವುಗಳನ್ನೆಲ್ಲ ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಳಸಿ ಕೊಳ್ಳಬೇಕು. ಪ್ರಕೃತಿಯ ಜೊತೆಗೆ ಸಾಮರಸ್ಯದಿಂದ ಬದುಕಬೇಕು.

ಭೂಮಿಯ ಕುರಿತಾಗಿ ಯಾವುದೇ ರೀತಿಯಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ಕಾರ್ಯಗಳು ಆಗುತ್ತಿಲ್ಲ. ಪರಿಸ್ಥಿತಿ ಈ ರೀತಿ ಇರುವಾಗ ನಾವು ಭೂ ದಿನದ ಈ ಸಂದರ್ಭದಲ್ಲಿ ಕೂಡ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. 

ಇದು ಒಂದು ದಿನಕ್ಕೆ ಮಾತ್ರ ಮೀಸಲಾಗಬಾರದು. ಈ ದಿನ ಮುಂದಿನ ಎಲ್ಲಾ ವರ್ಷಗಳಿಗೂ ವೇದಿಕೆಯಾಗಬೇಕು. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ನಮ್ಮ ಪಂಚಾಯಿತಿಯಿಂದ ಹಿಡಿದು ನಗರ ಪಾಲಿಕೆಯವರೆಗೂ ಕೂಡ ಪ್ರಕೃತಿಗೆ ಪೂರಕವಾಗಿರುವ ಅನೇಕ ಕಾರ್ಯಕ್ರಮಗಳು ಇವೆ. ಎಲ್ಲವನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ಬರುತ್ತಿದ್ದಾರೆ, ಈ ನಿಟ್ಟಿನಲ್ಲಿ ನಾವು ಕೂಡ ಕೈಜೋಡಿಸಬೇಕು. ಹನಿ ಹನಿ ಗೂಡಿದರೆ ಹಳ್ಳ ಎನ್ನುವಂತೆ ಯಾವುದೇ ಹೊಸ ಯೋಜನೆಗಳು ಬಂದರೂ ಕೂಡ ಪ್ರಕೃತಿಗೆ ಅದು ಪೂರಕವಾಗಿರಬೇಕು. ಮಾರಕವಾಗಿರಬಾರದು ಅಷ್ಟೇ. 

ಈ ವಾರ್ಷಿಕ ಆಚರಣೆಯು ನಮ್ಮ ಭೂಮಿಯ ಸುತ್ತಮುತ್ತ ಇರುವ ಸಮಸ್ಯೆ  ಬಗ್ಗೆ ಜಾಗೃತಿ ಮೂಡಿಸಿದೆ. 141 ದೇಶಗಳಲ್ಲಿ 200 ಮಿಲಿಯನ್ ಜನರನ್ನು ಸಜ್ಜುಗೊಳಿಸಿತು. ಮತ್ತು ಪರಿಸರ ಸಮಸ್ಯೆಗಳನ್ನು ವಿಶ್ವ ವೇದಿಕೆಗೆ ಮನನ ಮಾಡಿತು.      

1992 ರ ರಿಯೊ ಡಿ ಜನೈರೊದಲ್ಲಿ ನಡೆದ ವಿಶ್ವಸಂಸ್ಥೆಯ ಭೂ ಶೃಂಗಸಭೆ  ಬದಲಾವಣೆಗೆ ಕಾರಣವಾಯಿತು. ಮರಗಳನ್ನು ನೆಡುವುದು. ಪರಿಸರಕ್ಕಾಗಿ ಸಾಮೂಹಿಕ ಕ್ರಮ ಕೈಗೊಳ್ಳಲು ಜಗತ್ತಿನ ಎಲ್ಲಾ ಮೂಲೆಗಳ ಜನರನ್ನು ಒಗ್ಗೂಡಿಸುವಲ್ಲಿ ಭೂ ದಿನದ ಶಕ್ತಿಗೆ ಇದು ಸಾಕ್ಷಿಯಾಗಿದೆ.

ಭವಿಷ್ಯದ ಪೀಳಿಗೆಗೆ ನಮ್ಮ ಗ್ರಹವನ್ನು ರಕ್ಷಿಸುವಲ್ಲಿ ಗಮನಾರ್ಹ ವ್ಯತ್ಯಾಸವನ್ನುಂಟುಮಾಡಬಹುದು ಎಂಬುದನ್ನು ಈ ದಿನವು ನೆನಪಿಸುತ್ತದೆ.

ಹವಾಮಾನ ಬದಲಾವಣೆಯಿಂದ, ಪ್ಲಾಸ್ಟಿಕ್ ಮಾಲಿನ್ಯ ಮತ್ತು ಜೀವವೈವಿಧ್ಯತೆಯ ನಷ್ಟದವರೆಗೆ ನಾವು ಪರಿಸರ ಸವಾಲುಗಳನ್ನು ಎದುರಿಸುತ್ತಿರುವಾಗ, ಭೂ ದಿನದ ಸಂದೇಶವು ಎಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ. ನಾವು ಈ ಭೂಮಿಯ ಬಗ್ಗೆ ಎಷ್ಟು ಜಾಗೃತಿ ವಹಿಸಿದರು ಕೂಡ ಸಾಲದಾಗಿದೆ ಭೂಮಿ ಸಹನಾಮಯಿ ಎಲ್ಲವನ್ನು ತಾಳ್ಮೆಯಿಂದ ಸಹಿಸಿಕೊಳ್ಳುತ್ತದೆ.
ಎಲ್ಲರಿಗೂ ಹಸಿರು ಮತ್ತು ಸುಸ್ಥಿರ ಭವಿಷ್ಯವನ್ನು ಆಶಿಸಲು ಇದು ಒಂದು ದಿನ
ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು, ಅದರ ಉಳಿವಿಗಾಗಿ ಆರೋಗ್ಯಕರ ಕಾರ್ಯ ಕ್ರಮಗಳನ್ನು ಉತ್ತೇಜಿಸಲು ಭೂ ದಿನವನ್ನು ಆಚರಿಸಲಾಗುತ್ತದೆ.
ಇದರ ಜೊತೆಗೆ ಇದು ಸುಸ್ಥಿರತೆಯನ್ನು ಬೆಳೆಸುವ ಮತ್ತು ಪರಿಸರ ಸವಾಲುಗಳನ್ನು ಎದುರಿಸುವ ನಮ್ಮ ಹಂಚಿಕೆಯ ಜವಾಬ್ದಾರಿಯನ್ನು ನೆನಪಿಸುತ್ತದೆ.
ಮಾಲಿನ್ಯ ಮತ್ತು ಅರಣ್ಯನಾಶ ಸೇರಿದಂತೆ ಪರಿಸರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಸುಸ್ಥಿರ ಜೀವನ ಮತ್ತು ಪರಿಸರ ಕಾನೂನುಗಳ ಕಡೆಗೆ ಕ್ರಮ ಕೈಗೊಳ್ಳಲು ಪ್ರೇರೇಪಿಸಲು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಏಪ್ರಿಲ್ 22, 1970 ರಂದು ಭೂ ದಿನವನ್ನು ಪ್ರಾರಂಭಿಸಲಾಯಿಯಿತು.
ಪರಿಸರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡುವ ಉದ್ದೇಶದಿಂದ, ಪರಿಸರದ ಕುರಿತು ರಾಷ್ಟ್ರೀಯ ಬೋಧನೆಯಾಗಿ, ಅಮೆರಿಕದ ವಿಸ್ಕಾನ್ಸಿನ್‌ನ ಸೆನೆಟರ್ ಗೇಲಾರ್ಡ್ ನೆಲ್ಸನ್ ಅವರು ಭೂ ದಿನವನ್ನು ಸ್ಥಾಪಿಸಿದರು.
ನಮ್ಮ ಪರಿಸರದ ಬಗ್ಗೆ ಮತ್ತು ಅದನ್ನು ಸಂರಕ್ಷಿಸಲು ನಾವು ಏನು ಮಾಡಬಹುದು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಕಲಿಸಲು ವೀಡಿಯೊಗಳು, ಪಟ್ಟಿಯನ್ನು ಒದಗಿಸುತ್ತದೆ. ಜಾಗತಿಕ ತಾಪಮಾನ ಏರಿಕೆ, ಮರುಬಳಕೆ, ಮಾಲಿನ್ಯ, ಮಣ್ಣಿನ ಸವೆತ, ಪ್ಲಾಸ್ಟಿಕ್, ಮತ್ತು ಇತರ ವಿಷಯಗಳು. ಪ್ರತಿಯೊಂದೂ ವಿಷಯದ ವಿವರಣೆಯನ್ನು ಒಳಗೊಂಡಿದೆ.
ಭೂ ದಿನವನ್ನು ಆಚರಿಸಬಹುದಾದ ವಿಭಿನ್ನ ವಿಧಾನಗಳನ್ನು ಚರ್ಚಿಸುತ್ತದೆ. ಮರ ನೆಡುವುದು, ಪ್ರಾಣಿಗಳ ಆವಾಸಸ್ಥಾನಗಳು ಮತ್ತು ಪರಿಸರ ವ್ಯವಸ್ಥೆಗಳ ಮೇಲೆ ಬೆಳಕು ಚೆಲ್ಲುತ್ತದೆ. ಚಟುವಟಿಕೆಗಳಲ್ಲಿ ಪ್ರಕ್ರಿಯೆಯ ವಿವಿಧ ಭಾಗಗಳ ಕುರಿತು ಪಾಠ, ಯೋಜನೆಗಳೊಂದಿಗೆ ಚರ್ಚೆ ಮತ್ತು ಸಂದರ್ಶನಗಳು ಸೇರಿವೆ.
ಇದು ಒಂದು ಕಡೆ ನಡೆದರೆ ಸಾಲದು ವಿಶ್ವದಾದ್ಯಂತ ವಿಸ್ತಾರವಾಗಬೇಕು. ಭೂಮಿ ಸಂರಕ್ಷಣೆಯಲ್ಲಿ ಮಾನವನ ಪಾತ್ರದ ಬಗ್ಗೆ ಅರಿವು ಮೂಡಿಸುವ ವೇದಿಕೆಗಳು ಸೃಷ್ಟಿಯಾದವು.
ಪರಿಸರ ಕಾಳಜಿಯುಳ್ಳ ಸಂಸ್ಥೆಗಳು ಕೈಜೋಡಿಸಿದವು. ಕೆಲವು ಕಂಪನಿಗಳು ತಮ್ಮ ಕಾರ್ಪೊರೇಟ್ ಹೊಣೆಗಾರಿಕೆಯ (ಸಿಎಸ್‌ಆರ್) ಮೂಲಕವೂ ಕಾರ್ಯಕ್ರಮಗಳನ್ನು ಆಯೋಜಿಸಿದವು.
ಪ್ರತಿಯೊಂದು ವರ್ಷಕ್ಕೂ ಸಹ ಒಂದು ಥೀಮ್ ನೀಡಲಾಯಿತು. ಅದರಂತೆ ಭೂಮಿ ರಕ್ಷಣೆಯಲ್ಲಿ, ಭೂಮಿಯನ್ನು ಮಾಲಿನ್ಯ ಮುಕ್ತಗೊಳಿಸಲು, ಪರಿಸರ ಕಾಪಾಡಲು, ಹಸಿರು ಉಳಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಸಾಲುಮರದ ತಿಮ್ಮಕ್ಕ ನಂತಹ ಅನೇಕ ಪರಿಸರ ಪ್ರೇಮಿಗಳು ನೆನಪಿಗೆ ಬರುತ್ತಾರೆ. ಅಂದು ಗಿಡಗಳನ್ನು ನೆಡೆದೆ ಇದ್ದರೆ ಇವತ್ತು ಕಟ್ಟ ವಾಗಿ ಬೆಳೆದು ಪ್ರಾಣಿಗಳಿಗೆ ಮನುಷ್ಯನಿಗೆ ನೆರಳನ್ನು ನೀಡುತ್ತಿವೆ. ಈ ಸುಂದರ ಭೂಮಿ ನಮ್ಮೊಬ್ಬರಿಗೆ ಸೇರಿದ್ದಲ್ಲ. ಸಕಲ ಜೀವ ಕೋಟಿ ರಾಶಿಗಳಿಗೆ ಸೇರಿದೆ. ಚಿಂತಿಸಲು ಹಾಗು ಜಾಗೃತಿ ಮೂಡಿಸಲು ಇದು ಸಕಾಲ. ಫಲವತ್ತಾದ ಭೂಮಿ ಈಗ ಮಲಿನವಾಗಿದೆ. ವ್ಯವಸಾಯ ಭೂಮಿಯು ಕಡಿಮೆಯಾಗುತ್ತಿದೆ. ಇವತ್ತಿನ ಸ್ಪರ್ಧಾ ಯುಗದಲ್ಲಿ ಹಣದಾಸೆಗಾಗಿ ಭೂಮಿಯನ್ನು ಮಾರುವ ಸಂಸ್ಕೃತಿ ಹೆಚ್ಚಾಗಿದೆ ಅವಶ್ಯಕತೆಗೆ ತಕ್ಕಂತೆ ಮುದುಕದ ಬದುಕದೆ ಹಣದಾಸೆಗಾಗಿ ಕಾಂಕ್ರೀಟ್ ಮಯ ಮಾಡುತ್ತಿದ್ದೇವೆ. ಉತ್ತಮವಾದ ಪರಿಸರ ನಮ್ಮೊಟ್ಟಿಗೆ ಇದ್ದರೆ ಅದು ಒಂದಕ್ಕೆ ಒಂದು ಲಿಂಕ್ ರೀತಿಯಲ್ಲಿ ಇರುತ್ತದೆ.
ಇಂದು ಮುಖ್ಯವಾಗಿ ಮಾಡಬೇಕಾದದ್ದು ಏನೆಂದರೆ ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಖ್ಯವಾಗಿ ಶಾಲಾ-ಕಾಲೇಜು ಮಕ್ಕಳನ್ನು ಬಳಸಿಕೊಂಡು ಭೂಮಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಪರಿಸರ ಇದ್ದರೆ ನಾವು. ಭೂಮಿಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳೋಣ. ಆಗ ಮಾತ್ರ ಅದರ ಆಚರಣೆಗೆ ಮಹತ್ವ ಬರುತ್ತದೆ. ಈ ದಿನದಿಂದಾದರೂ ನಾವು ಸಂಕಲ್ಪ ಮಾಡೋಣ.

ಕಾಳಿಹುಂಡಿ ಶಿವಕುಮಾರ್, ಮೈಸೂರು.

Leave a Reply

Your email address will not be published. Required fields are marked *