ಶಿಕ್ಷಣದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ: ಬಿ.ಕೆ. ರವಿಕುಮಾರ್

ಚಾ.ನಗರ ಜೆಎಸ್‍ಎಸ್ ಪಬ್ಲಿಕ್ ಶಾಲೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಎನ್. ಹರ್ಷಿತಾಳಿಗೆ ಅಭಿನಂದನೆ
ಚಾಮರಾಜನಗರ: ಶಿಕ್ಷಣದಿಂದ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಕಠಿಣ ಪರಿಶ್ರಮ ಹೊಂದಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್ ತಿಳಿಸಿದರು.

ನಗರದ ಜೆಎಸ್‍ಎಸ್ ಪಬ್ಲಿಕ್ ಶಾಲೆಯಲ್ಲಿ 2024-25ನೇ ಸಾಲಿನ ಎಸ್‍ಎಸ್‍ಎಲ್‍ಸಿ ( ಸಿಬಿಎಸ್‍ಇ) ಪರೀಕ್ಷೆಯಲ್ಲಿ 580 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಎನ್. ಹರ್ಷಿತಾ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ವಿದ್ಯೆ ಸಾಧಕ ಸ್ವುತ್ತೇ ಹೊರತು ಸೋಮಾರಿಗಳ ಸೊತ್ತಲ್ಲ. ಹೀಗಾಗಿ ಓದುವ ಹಾಗೂ ಸಾಧಿಸುವ ಛಲ ಇದ್ದರೆ ಜೀವನದಲ್ಲಿ ಗುರಿ ಸಾಧಿಸಲು ಸಾಧ್ಯವಿದೆ. ಹರ್ಷಿತಾಳಿಗೆ ಉತ್ತಮ ಭವಿಷ್ಯ ವಿದ್ದು, ಮುಂದಿನ ದಿನಗಳಲ್ಲಿ ಉನ್ನತ ಸ್ಥಾನವನ್ನು ಗಳಿಸುವ ದಿಕ್ಕಿನಲ್ಲಿ ಪಯಣ ಬೆಳೆಯಲಿ. ಹರ್ಷಿತಾಳ ಈ ಸಾಧನೆಗೆ ಅವರ ತಂದೆÀ-ತಾಯಿ ಉತ್ತೇಜನ, ಶಾಲೆಯ ಪ್ರಾಂಶುಪಾಲರು, ಶಿಕ್ಷಕವೃಂದವರು ಪೆÇ್ರೀತ್ಸಾಹ ಮೆಚ್ಚುವಂತಾಗಿದೆ. ಇದೇ ರೀತಿ ನಗರದಲ್ಲಿರುವ ಜೆಎಸ್‍ಎಸ್ ಪಬ್ಲಿಕ್ ಶಾಲೆ ಕಳೆದ 10 ವರ್ಷಗಳಿಂದ ಶೇ. 100 ರಷ್ಟು ಫಲಿತಾಂಶವನ್ನು ನೀಡುವ ಜೊತೆಗೆ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಗಳಿಸುತ್ತಾ ಬಂದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಇಂಥ ಸಾಧಕರು ನಿಮ್ಮೆಲ್ಲರಿಗೂ ರೋಲ್ ಮಾಡಲ್ ಆಗಬೇಕು. ಸಿನಿಮಾ ನಟರನ್ನು ಇನ್ಯಾವುದೋ ಕ್ಷೇತ್ರದಲ್ಲಿರುವವರನ್ನು ಅನುಸರಿಸುವ ಬದಲು ನಮ್ಮೊಂದಿಗೆ ಇದ್ದು, ಸಾಧನೆ ಮಾಡುವ ಹರ್ಷಿತಾ ಅಂಥವರು ಮಾದರಿಯಾಗಬೇಕು. ಅವರಂತೆ ನಾನು ಸಹ ಸಾಧನೆ ಮಾಡಬೇಕು ಎಂಬ ಛಲ ನಿಮ್ಮಲ್ಲಿ ಮೂಡಬೇಕು. ಹೀಗಾಗಿ ನಿಮ್ಮೆಲ್ಲರ ಉಪಸ್ಥಿತಿಯಲ್ಲಿ ಹರ್ಷಿತಾಳನ್ನು ಅಭಿನಂದಿಸುತ್ತೇವೆ ಎಂದು ರವಿಕುಮಾರ್ ತಿಳಿಸಿದರು.
ಜೆಎಸ್‍ಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪೆÇೀಷಕರು ಮುಂದಾಗಬೇಕು. ಶಿಕ್ಷಣದಿಂದ ಬದುಕು ಬದಲಾಯಿಸಿಕೊಳ್ಳಲು ಸಾಧ್ಯವಿದೆ. ಹರ್ಷಿತಾಳ ಭವಿಷ್ಯ ಉಜ್ವಲವಾಗಲಿ. ಜೆಎಸ್‍ಎಸ್ ಸಂಸ್ಥೆ ಇಂಥ ಸಾಧಕರು ಹಾಗೂ ಪರಿಶ್ರಮ ಪಟ್ಟು ಓದುವ ಎಲ್ಲಾ ವಿದ್ಯಾರ್ಥಿಗಳಿಗೆ ಹೆಚ್ಚಿನ ಪೆÇ್ರೀತ್ಸಾಹವನ್ನು ನೀಡುತ್ತದೆ ಎಂದರು.

ಜೆಎಸ್‍ಎಸ್ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ ಮಾತನಾಡಿ, ನಮ್ಮ ವಿದ್ಯಾರ್ಥಿನಿ ಹರ್ಷಿತಾ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ನಮ್ಮೆಲ್ಲರಿಗೂ ಹೆಮ್ಮೆ. ಇಂದು ಹರ್ಷಿತಾಳನ್ನು ಅಭಿನಂದಿಸುತ್ತೇವೆ. ಮುಂದಿನ ವರ್ಷ ನಿಮ್ಮಲ್ಲಿರುವ ಈ ವೇದಿಕೆಯಲ್ಲಿ ಟಾಫರ್ ಆಗಿ ಸನ್ಮಾನಿಸಿಕೊಳ್ಳಬೇಕು. ಯಾರು ಬರುತ್ತೀರಿ ಎನ್ನುತ್ತಿದ್ದಂತೆ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಅನೇಕ ವಿದ್ಯಾರ್ಥಿಗಳು ಕೈ ಮೇಲೆತ್ತುವ ಮೂಲಕ ಪ್ರಶಂಸೆಗೆ ಪಾತ್ರರಾದರು.

ಜೆಎಸ್‍ಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಎಚ್.ಎಂ. ಉಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು 8ನೇ ತರಗತಿಯಿಂದಲೇ ಕಠಿಣ ಆಭ್ಯಾಸ ಹಾಗು ಪರಿಶ್ರಮ ಪಟ್ಟು ವ್ಯಾಸಂಗ ಮಾಡಿದರೆ ಪ್ರಥಮ ಸ್ಥಾನ ಗಳಿಸಲು ಸಾಧ್ಯವಿದೆ. ಮುಂದಿನ ವರ್ಷದ ಕನಿಷ್ಟ 4 ಮಂದಿಯಾದರು ಜಿಲ್ಲೆಗೆ ಟಾಫರ್ ಆಗಬೇಕು ಎಂದರು.

ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿನಿ ಎನ್. ಹರ್ಷಿತಾ ಮಾತನಾಡಿ, ಅಂದಿನ ಪಾಠವನ್ನು ಆ ದಿನವೇ ಓದುವ ಜೊತೆಗೆ ಬಿಡುವಿನ ವೇಳೆಯಲ್ಲಿ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದುವುದು ಬಹಳ ಮುಖ್ಯ. ಮೊಬೈಲ್ ನಿಂದ ದೂರ ವಿದ್ದು, ಓದಿನ ಕಡೆ ಹೆಚ್ಚು ನಿಗಾ ವಹಿಸಿದ ಪರಿಣಾಮ ನಾನು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಅನುಭವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯ ಪೆÇೀಷಕರಾದ ಎನ್. ನಾಗೇಂದ್ರ, ನಳಿನನಾಗೇಂದ್ರ, ಶಿಕ್ಷಕರಾದ ದೇವಕಿ, ಸೌಮ್ಯ, ವಿನುತಾ, ಉμÁ. ಸಹ ಶಿಕ್ಷಕ ವೃಂದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *