ಉಪ್ಪಾರ ಸಮುದಾಯಕ್ಕೆ ಶಿಕ್ಷಣವೇ ಆಸ್ತಿ : ಸಿ.ಪುಟ್ಟರಂಗಶೆಟ್ಟಿ

ಜಿಲ್ಲಾ ಉಪ್ಪಾರ ಸಂಘದಿಂದ ಎಸ್ಎಸ್ಎಲ್ ಸಿ, ಪಿಯುಸಿಯ250 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಚಾಮರಾಜನಗರ: ಉಪ್ಪಾರ ಸಮುದಾಯಕ್ಕೆ ಶಿಕ್ಷಣವೇ ಆಸ್ತಿಯಾಗಿರುವ ಹಿನ್ನಲೆಯಲ್ಲಿ ಸಮುದಾಯ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಎಂಎಸ್ಐಎಲ್ ಅಧ್ಯಕ್ಷರು, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.

ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಉಪ್ಪಾರ ಸಂಘ, ಜಿಲ್ಲಾ ವ್ಯಾಪ್ತಿಯ ಎಲ್ಲಾ ಗಡಿಮನೆ,ಕಟ್ಟೆಮನೆ ಹಾಗೂ ಎಲ್ಲಾ ಗ್ರಾಮಗಳ ಯಜಮಾನರು, ಗ್ರಾಮಸ್ಥರು, ಜಿಲ್ಲೆಯ ತಾಲೂಕು ಉಪ್ಪಾರ ಸಂಘಗಳು,ಉಪ್ಪಾರ ನೌಕರರ ಸಂಘಗಳು, ಉಪ್ಪಾರ ಸಂಘ,ಸಂಸ್ಥೆಗಳು ಇವರ ಸಂಯುಕ್ತಾಶ್ರಯದಲ್ಲಿ 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.

ಸಮುದಾಯದಲ್ಲಿ ಶೇ 80 ರಷ್ಟು ಕೂಲಿ ಮಾಡಿ ಜೀವನ ಸಾಗುತ್ತಿದ್ದಾರೆ.  ಆಸ್ತಿವಂತರು ಕಡಿಮೆ ಇದ್ದಾರೆ. ಉಪ್ಪಾರ ಸಮುದಾಯ ಕ್ಕೆ ಶಿಕ್ಷಣವೇ ಆಸ್ತಿಯಾಗಿದೆ. ನಾವು ಓದುವ ಸಂದರ್ಭದಲ್ಲಿ ಯಾವುದೇ ಸರ್ಕಾರಿ ಸೌಲಭ್ಯಗಳು ಇರಲಿಲ್ಲ ತುಂಬಾ ಕಷ್ಟ ದಲ್ಲಿ ವಿದ್ಯಾಭ್ಯಾಸ ಮಾಡಿದ್ದೇವೆ  ಎಂದರು.

ಸರ್ಕಾರಿ ಶಾಲೆಯಲ್ಲಿ ನುರಿತ ಶಿಕ್ಷಕರಿದ್ದು ಉತ್ತಮ ಪಾಠಪ್ರವಚನ ದೊರೆಯುತ್ತಿದೆ. ಸರ್ಕಾರಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸಮುದಾಯದವರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು.ರಾಜ್ಯದಲ್ಲಿ ನೇರವಾಗಿ ಐಎಎಸ್ ತೇರ್ಗಡೆ ಮಾಡಿರಿರುವವರಿಲ್ಲ.   ನಿಮ್ಮಲ್ಲಿ ಯಾರಾದರೊಬ್ಬರು ತೇರ್ಗಡೆ ಮಾಡಿದರೆ ಎತ್ತಿ ಮೆರೆಯುವೆ. ಎಲ್ಲ ರೀತಿಯ ಸಹಕಾರ ನೀಡುವೆ ಎಂದರು.

ಸಮಾಜದವರು   ಮೌಢ್ಯಗಳಿಂದ ಹೊರಬರಬೇಕು. ಹಬ್ಬಗಳ ಅಚರಣೆ ಕಡಿಮೆ  ಮಾಡಬೇಕು. ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಉಪ್ಪಾರ ಭವನ ಆಗಲಿದ್ದು, ಮುಂದಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅಲ್ಲೇ ಮಾಡಲು ಚಿಂತಿಸಲಾಗಿದೆ  ಎಂದರು.

ಜಿ.ಪಂ.ಮಾಜಿ ಉಪಾಧ್ಯಕ್ಷ ಯೋಗೀಶ್ ಮಾತನಾಡಿ, ಸ್ವಾತಂತ್ರ್ಯ ಬಂದ ಮೇಲೆ  ಅಂಬೇಡ್ಕರ್ ಸಂವಿಧಾನ ಬರೆದುಕೊಟ್ಟ ಮೇಲೆ ನಮಗೆಲ್ಲ ಶಿಕ್ಷಣ ಕಲಿಯುವ ಅವಕಾಶ ದೊರೆತಿದೆ.ಕೇಂದ್ರ ಸರ್ಕಾರ ಮಹಿಳೆಯರಿಗೆ ಶೇ33 ಮೀಸಲಾತಿ ನೀಡಿದೆ. ಕೆಎಎಸ್, ಐಎಎಸ್, ಎಂಬಿಬಿಎಸ್ ಮಾಡುವವರೇ ವಿದ್ಯಾರ್ಥಿನಿಯರು ಹೆಚ್ಚು . ವಿದ್ಯಾರ್ಥಿ ಗಳು ಪೋಷಕರನ್ನು, ಗುರು- ಹಿರಿಯರನ್ನು ಮರೆಯಬಾರದು ಎಂದರು.

ಜಿ.ಪಂ. ಮಾಜಿ ಸದಸ್ಯ ಮಧುವಿನಹಳ್ಳಿ ಶಿವಕುಮಾರ್ ಮಾತನಾಡಿ, ನಮ್ಮ ಶ್ರಮದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಉಪ್ಪಾರ ಸಮುದಾಯ ಹಿಂದುಳಿದೆ. ಬಾಲ್ಯ ವಿವಾಹ ತ್ಯಜಿಸಿ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

250 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ;  2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಗಳಿಗೆ  ನಗದು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮ ದಲ್ಲಿ  ಮೈಸೂರು ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಯೋಗೇಶ್ ಉಪ್ಪಾರ್,  ಕ್ಷೇತ್ರ ಶಿಕ್ಷಣಾಧಿಕಾರಿ  ಹನುಮಶೆಟ್ಟಿ, ಇನ್ಸ್ ಪೆಕ್ಟರ್ ಚಿಕ್ಕರಾಜಶೆಟ್ಟಿ,  ಪ್ರಾಂಶುಪಾಲರಾದ ಸೋಮಣ್ಣ, ಪ್ರಿಯಶಂಕರ್,  ಕೆಇಬಿ ಲೆಕ್ಕಾಧಿಕಾರಿ ಎಂ.ಮಹೇಶ್, ಜಿಲ್ಲಾ ಉಪ್ಪಾರ ಸಂಘದ  ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ಗ್ರಾ.ಪಂ.ಅಧ್ಯಕ್ಷೆ ತೇಜಶ್ವನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತ,  ನಗರಸಭಾ ಸದಸ್ಯರಾದ ಸಿ.ಎ.ಬಸವಣ್ಣ, ತಾ.ಪಂ.ಮಾಜಿ ಸದಸ್ಯರಾದ ಪುಟ್ಟಸ್ವಾಮಿ, ಮಹದೇವಶೆಟ್ಟಿ,  ಗೋವಿಂದಶೆಟ್ಟಿ, ಪ್ರಕಾಶ್, ಗಡಿ ಯಜಮಾನರಾದ ಜಯಸ್ಚಾಮಿ,ರುದ್ರಶೆಟ್ಟಿ,  ನಾಗಶೆಟ್ಟಿ,  ಚಿಕ್ಕತಾಂಡವಶೆಟ್ಟಿ, ಶಿಕ್ಷಕ ಗೋವಿಂದರಾಜು, ಕೃಷ್ಣಸ್ವಾಮಿ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *