‘ಸ್ವಾವಲಂಬಿ ಜೀವನ ನಡೆಸಲು ಶಿಕ್ಷಣವೊಂದೇ ಆಧಾರ’

ಬಿಸಿಎಂ ವಿದ್ಯಾರ್ಥಿನಿಲಯಕ್ಕೆ ಶಾಸಕರ ಭೇಟಿ; 20ಲಕ್ಷ ರೂ.ವೆಚ್ಚದ ಸಾಮಾಗ್ರಿಗಳ ವಿತರಣೆ
ಚಾಮರಾಜನಗರ: ನಗರದ ಕರಿನಂಜನಪುರ ಬಡಾವಣೆಯಲ್ಲಿರುವ ಡಿ. ದೇವರಾಜಅರಸು ಹಿಂದುಳಿದ ವರ್ಗಗಳ ಸಾರ್ವಜನಿಕ ಮಾದರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಎಂಎಸ್‍ಐಎಲ್ ಅಧ್ಯಕ್ಷ, ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿನೀಡಿ, 20 ಲಕ್ಷ ರೂ.ವೆಚ್ಚದ ಸಾಮಾಗ್ರಿಗಳನ್ನು ವಿತರಿಸಿದರು.

ಇದೇವೇಳೆ ಅವರು ಮಾತನಾಡಿ, ಹಾಸ್ಟೆಲ್‍ಗೆ ಕಳೆದ 8ವರ್ಷಗಳ ಹಿಂದೆ ತಾವು ಭೇಟಿ ನೀಡಿದ್ದಾಗ ವಿದ್ಯಾರ್ಥಿಗಳಿಗೆ ಯಾವುದೇ ಮೂಲಸೌಕರ್ಯವಿರಲಿಲ್ಲ. ವಿದ್ಯಾರ್ಥಿಗಳ ಸಮಸ್ಯೆ ಮನಗಂಡು ಸಾಮಾಗ್ರಿಗಳ ಖರೀದಿಗೆ ಎಂಎಸ್‍ಐಎಲ್ ನಿಗಮದಿಂದ 20ಲಕ್ಷ ರೂ.ಮಂಜೂರುಮಾಡಿಸಲಾಗಿತ್ತು. ಇದೀಗ ಆ ಹಣದಲ್ಲಿ 50 ಕಾಟ್‍ಗಳು, 4 ಕಂಪ್ಯೂಟರ್,ಡೈನಿಂಗ್ ಟೇಬಲ್ ಚೇರುಗಳು ಸರಬರಾಜಾಗಿವೆ. ಇಂದು ಅವುಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುತ್ತಿದೆ ಎಂದರು.

ಇಂದು ಪ್ರತಿಯೊಬ್ಬರು ಸ್ವಾವಲಂಬಿ ಜೀವನ ನಡೆಸಲು ಶಿಕ್ಷಣವೊಂದೇ ಆಧಾರ. ಅದು ವಿದ್ಯಾರ್ಥಿಗಳ ಪ್ರಬಲಅಸ್ತ್ರವು ಆಗಿದೆ. ಜಿಲ್ಲೆಯಲ್ಲಿ ಉನ್ನತ ಶಿಕ್ಷಣಕ್ಕೇನು ಕೊರತೆಯಿಲ್ಲ. ವಿದ್ಯಾರ್ಥಿಗಳು ಉನ್ನತಶಿಕ್ಷಣಪಡೆದು, ಸಮಾಜದ ಸತ್ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು.
ಹಾಸ್ಟೆಲ್ ಇನ್ನು ಹೆಚ್ಚಿನಮೂಲಸೌಕರ್ಯ ಕಲ್ಪಿಸಲು ತಾವು ಬದ್ದರಾಗಿರುವುದಾಗಿ ಶಾಸಕರು ಭರವಸೆ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ವಿಶ್ವನಾಥ್. ತಾಲೂಕು ಅಧಿಕಾರಿ ಲಿಂಗರಾಜು, ಮುಖಂಡರಾದ ಎಚ್.ಎಚ್.ನಾಗರಾಜು, ವಿನೋದ್,ವಿದ್ಯಾರ್ಥಿಗಳು, ವಾರ್ಡನ್, ಮೇಲ್ವಿಚಾರಕರು ಹಾಜರಿದ್ದರು.

Leave a Reply

Your email address will not be published. Required fields are marked *