ಉಪ್ಪಾರ ಸಮಾಜದ ಐವರು ನೂತನ ಯಜಮಾನರುಗಳ ಆಯ್ಕೆ

ಚಾಮರಾಜನಗರ: ನಗರದ ಮೇಗಲ ಉಪ್ಪಾರ ಬೀದಿ ವಾರ್ಡ್ ನಂ.8ರಲ್ಲಿ ವಾಸಿಸುತ್ತಿರುವ ಉಪ್ಪಾರ ಸಮಾಜದ ಯಜಮಾನ ಸ್ಥಾನಕ್ಕೆ ನೂತನವಾಗಿ ಐದು ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಸಿ.ಬಿ.ನಾಗರಾಜು, ಡ್ರೈವರ್ ನಾಗಣ್ಣ, ಪೇಂಟ್ ಕುಮಾರ್, ಶಂಕರ್, ಆನಂದ್ ಎಂಬುವರು ಯಜಮಾನ ಸ್ಥಾನಕ್ಕೆ ಆಯ್ಕೆಯಾದವರು.
ಮೇಗಲ ಉಪ್ಪಾರ ಬೀದಿಯಲ್ಲಿರುವ ಸಮುದಾಯದ ರಾಮಮಂದಿರದಲ್ಲಿ ಸಭೆ ಸೇರಿ ಮಾಜಿ ಯಜಮಾನರುಗಳು ಕುಲಸ್ಥರು ಈ ಐವರನ್ನು ಯಜಮಾನ ಸ್ಥಾನಕ್ಕೆ ಆಯ್ಕೆಮಾಡಿದ್ದಾರೆ.

ಇದೇ ವೇಳೆ ಜಿಲ್ಲಾ ಉಪ್ಪಾರ ಯುವಕರ ಸಂಘದ ಉಪಾಧ್ಯಕ್ಷ ಬಿ.ಸ್ವಾಮಿ ಮಾತನಾಡಿ, ನೂತನವಾಗಿ ಆಯ್ಕೆಯಾದ ಯಜಮಾನರುಗಳನ್ನು ಅಭಿನಂದಿಸಿದರು.

ನಂತರ ಮಾತನಾಡಿ, ಹಲವಾರು ವರ್ಷಗಳಿಂದ ಉಪ್ಪಾರ ಸಮಾಜದಲ್ಲಿ ಅನೇಕ ಕಟ್ಟುಪಾಡುಗಳಿವೆ. ಅದರಂತೆ ಈ ಬಾರಿ ನೂತನವಾಗಿ ಆಯ್ಕೆಯಾಗಿರುವ ಯಜಮಾನರುಗಳು ಎಲ್ಲರ ಸಹಕಾರದೊಂದಿಗೆ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ತಾವು ವಹಿಸಿಕೊಂಡಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಾಗಶೆಟ್ಟರು, ರಂಗಸ್ವಾಮಿ, ಶಿವರಾಜ್, ಬಿ.ಸ್ವಾಮಿ, ಶಿವಕುಮಾರ, ಮಹೇಶ, ದಿಲೀಪ, ನಂಜುಂಡಸ್ವಾಮಿ,ರುದ್ರ, ರಾಜೇಶ್, ಸುನಿಲ್ ಸೇರಿದಂತೆ ಮತ್ತಿತರರಿದ್ದರು

Leave a Reply

Your email address will not be published. Required fields are marked *