ಚಾಮರಾಜನಗರ: ಜಿಲ್ಲೆಯಲ್ಲಿ ಸಹಕಾರ ಭವನ ನಿರ್ಮಾಣ ಮಾಡಲು ಅದ್ಯತೆ ನೀಡುವ ಜೊತೆಗೆ ಈಗ ಒಕ್ಕೂಟಕ್ಕೆ ನೀಡಿರುವ ನಿವೇಶನ ಸಹಕಾರ ಇಲಾಖೆಯ ಹೆಸರಿನಲ್ಲಿದ್ದು, ಈ ಜಾಗವನ್ನು ವರ್ಗಾಯಿಸಿಕೊಂಡು ಪ್ರಸಕ್ತ ವರ್ಷದಿಂದಲೇ ಭವನ ನಿಮಾರ್iಣಕ್ಕೆ ಒತ್ತು ನೀಡಲಾಗುವುದು ಎಂದು ಎಂದು ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷರು ಹಾಗೂ ಚಾಮುಲ್ ನಿರ್ದೇಶಕರಾದ ಎಚ್.ಎಸ್. ನಂಜುಂಡಪ್ರಸಾದ್ ತಿಳಿಸಿದರು.
ನಗರದ ಲಾಂಪ್ಸ್ ಸೊಸೈಟಿ ಸಭಾಂಗಣದಲ್ಲಿ ನಡೆದ 2023-24ನೇ ಸಾಲಿನ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾಜಿ ಸಚಿವರಾಗಿದ್ದ ದಿ. ಎಚ್.ಎಸ್. ಮಹದೇವಪ್ರಸಾದ್ ಅವರು ಜಿಲ್ಲಾ ಕೇಂದ್ರದಲ್ಲಿ ಒಂದು ಸುಸಜ್ಜಿತ ಸಹಕಾರ ಭವನ ನಿರ್ಮಾಣವಾಗಬೇಕೆಂಬ ಕನಸಾಗಿತ್ತು. ಇದಕ್ಕಾಗಿ ಯೋಜನೆಯನ್ನು ರೂಪಿಸಿ, ಅವರು ಸಹಕಾರ ಸಚಿವರಾಗಿದ್ದಾಗ ಒಕ್ಕೂಟಕ್ಕೆ 5 ಲಕ್ಷ ರೂ. ಅನುದಾನವನ್ನು ನೀಡಿ, ಸಂಪಿಗೆ ರಸ್ತೆಯಲ್ಲಿರುವ ಸಹಕಾರ ಇಲಾಖೆಯ ಜಾಗವನ್ನು ಕೊಡಿಸಲು ಪ್ರಯತ್ನ ಮಾಡಿದ್ದರು. ಈ ಬಗ್ಗೆ ಸಹಕಾರ ಒಕ್ಕೂಟದ ಹಿರಿಯ ನಿರ್ದೇಶÀಕರು ಹಾಗೂ ಅಧ್ಯಕ್ಷರು ಅನೇಕ ಬಾರಿ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದರು. ಅವರ ಕನಸು ನೆನಸು ಮಾಡಲು ಈಗ ಮಹದೇವಪ್ರಸಾದ್ ಅವರ ಪುತ್ರ ಎಚ್.ಎಂ. ಗಣೇಶ್ ಪ್ರಸಾದ್ ಅವರು ಶಾಸಕರಾಗಿದ್ದಾರೆ. ರಾಜ್ಯದಲ್ಲಿಯೇ ನಮ್ಮದೇ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು, ಸಹಕಾರ ಸಚಿವರಾದ ರಾಜಣ್ಣ ಅವರನ್ನು ಇದ್ದಾರೆ. ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸುವ ಜೊತೆಗೆ ಇಲಾಖೆಯ ಹೆಸರಿನಲ್ಲಿರುವ ಜಾಗವನ್ನು ವರ್ಗಾಯಿಸಿಕೊಡಲು ಮನವಿ ಮಾಡಿಕೊಳ್ಳೋಣ. ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಜಿ.ಟಿ. ದೇವೇಗೌಡರು ಸಹ ಅನುದಾನ ನೀಡುವ ಘೋಷಣೆ ಮಾಡಿದ್ದಾರೆ. ಎಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿ ಸಹಕಾರ ಭವನ ನಿರ್ಮಾಣವಾಗಬೇಕಾಗಿದೆ. ನಿರ್ದೇಶಕರು ಹೆಚ್ಚಿ ಮುರ್ತುವಹಿಸಿ ಭವನ ನಿರ್ಮಾಣಕ್ಕೆ ಕಾರ್ಯಪ್ರವೃತ್ತರಾಗೋಣ ಎಂದರು.
ರಾಜ್ಯ ಸಹಕಾರ ಮಹಾಮಂಡಲದ ಅಧೀನದಲ್ಲಿ ಜಿಲ್ಲಾ ಸಹಕಾರ ಒಕ್ಕೂಟ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳು, ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗು ಇತರೇ ಸಹಕಾರ ಸಂಘಗಳು ಸೇರಿ 450ಕ್ಕು ಹೆಚ್ಚು ಸಂಘಗಳು ಸದಸ್ಯತ್ವವನ್ನು ಪಡೆದುಕೊಂಡಿದೆ. ಇನ್ನುಳಿದ ಸಂಘಗಳು ಸಹ ಷೇರು ಪಡೆದು ಸದಸ್ಯರಾಗುವ ಮೂಲಕ ಜಿಲ್ಲೆಯಲ್ಲಿ ಮಾದರಿ ಸಹಕಾರ ಒಕ್ಕೂಟವನ್ನು ನಿರ್ಮಾಣ ಮಾಡಲು ಎಲ್ಲರು ಕೈಜೋಡಿಸಬೇಕು ಎಂದರು.
ಜಿಲ್ಲಾ ಸಹಕಾರ ಒಕ್ಕೂಟದಿಂದ ಪ್ರತಿ ವರ್ಷ ಸಹಕಾರ ಶಿಕ್ಷಣ ನಿಧಿಯನ್ನು ಪಡೆದುಕೊಳ್ಲುವ ಜೊತೆಗೆ ಮಹಾ ಮಂಡಲಿಗೆ ಪಾವತಿಸಲಾಗುತ್ತಿದೆ. ಮಹಾಮಂಡಲಿ ನೀಡುವ ಅನುದಾನದಲ್ಲಿ ಜಿಲ್ಲೆಯ ಸಹಕಾರಿಗಳಿಗೆ ಶಿಕ್ಷಣ ಕಾರ್ಯಾಗಾರ, ಸಪ್ತಾಹ ಹಾಗೂ ಸಹಕಾರಿ ಕಾಯ್ದೆಗಳ ತಿದ್ದುಪಡಿ ಸೇರಿದಂತೆ ಲೆಕ್ಕ ಪತ್ರ ನಿರ್ವಹಣೆ ಸೇರಿದಂತೆ ಸಹಕಾರಿ ಕ್ಷೇತ್ರದಲ್ಲಿ ಆಡಳಿತ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಅಧ್ಯಕ್ಷರು ಹಾಗೂ ಸಿಇಓಗಳಿಗೆ ಕಾರ್ಯಾಗಾರ ನಿಯೋಜನೆ ಜೊತೆಯಲ್ಲಿ ಹಿರಿಯ ನಿರ್ದೇಶಕರನ್ನು ಆಹ್ವಾನಿಸಿ, ಅವರಿಗು ಸಹ ಸಹಕಾರಿ ಶಿಕ್ಷಣವನ್ನು ನೀಡುವ ಚಿಂತನೆ ನಮ್ಮದಾಗಿದೆ ಎಂದರು.
ಹಿರಿಯ ಸಹಕಾರಿ ನಿರ್ದೇಶಕರಾದ ಹರದನಹಳ್ಳಿ ಸುಂದ್ರಪ್ಪ ಮಾತನಾಡಿ,ಸಹಕಾರ ಕ್ಷೇತ್ರದ ಬೆಳೆದದ್ದು ಗ್ರಾಮ ಅಭಿವೃದ್ದಿ ಆಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಸಹಕಾರ ಇಲಾಖೆಯನ್ನು ಪ್ರತ್ಯೇಕ ಸಚಿವಲಾಯವನ್ನಾಗಿಸಿ ಗೃಹ ಸಚಿವರಾಗಿರುವ ಅಮಿತ್ಶಾ ಅವರನ್ನು ಸಹಕಾರ ಸಚಿವರನ್ನಾಗಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಹಾಗೂ ಉತ್ತಮ ಅವಕಾಶಗಳು ಬರಲಿವೆ. ಹೀಗಾಗಿ ಸಹಕಾರ ಸಂಘಗಳನ್ನು ಗ್ರಾಮಗಳಲ್ಲಿ ಹೆಚ್ಚು ರಚನೆ ಮಾಡಿಕೊಳ್ಳಲು ಮುಂದಾಗಬೇಕು ಎಂದರು.
ಸಭೆಯಲ್ಲಿ ಒಕ್ಕೂಟದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನುಜ ವಾರ್ಷಿಕ ವರದಿಯನ್ನು ಓದಿ ಅನುಮೋದನೆ ಪಡೆದುಕೊಂಡರು.
ಸಭೆಯಲ್ಲಿ ಒಕ್ಕುಟದ ಉಪಾಧ್ಯಕ್ಷ ರಾಯಪ್ಪ, ನಿರ್ದೇಶಕರಾದ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ. ಬಸವಣ್ಣ, ನಾಗರಾಜು, ಮುದ್ದಯ್ಯ, ರವಿ, ಪಿ. ಮಹದೇವಸ್ವಾಮಿ, ನಾಗಸುಂದರ್, ಮಹದೇವಪ್ರಭು, ಮಡಿವಾಳಪ್ಪ, ಎಚ್.ಎನ್. ಸುಂದರರಾಜ್, ಎಂ. ಪ್ರಭುಸ್ವಾಮಿ, ದಾಕ್ಷಾಯಿಣಿ, ಜಯಶೀಲಾ, ಮಾನೇಜರ್ ಮಲ್ಲಿಕಾರ್ಜುನ್, ಮಲ್ಲೇಶ್, ಕೆಂಡಗಣ್ಣ ಹಾಗು ಸರ್ವ ಸದಸ್ಯರು ಉಪಸ್ಥಿತರಿದ್ದರು.